'ಇನ್ನೊಂದು ವರ್ಷ ಆಡಬಹುದಿತ್ತು', ನಿವೃತ್ತಿಗೆ ನಿಜವಾದ ಕಾರಣ ತಿಳಿಸಿದ ಮೈಸೂರು ಎಕ್ಸ್ಪ್ರೆಸ್!
2003ರ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಭಾರತ ತಂಡವನ್ನು ಫೈನಲ್ಗೆ ಮುನ್ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಜಾವಗಲ್ ಶ್ರೀನಾಥ್, ಇದೀಗ ತಮ್ಮ ನಿವೃತ್ತಿ ಹಿಂದಿನ ನಿಜವಾದ ಕಾರಣವನ್ನು ತೆರೆದಿಟ್ಟಿದ್ದಾರೆ.
Vijaya Karnataka Web 21 Jun 2020, 3:26 pm
ಹೈಲೈಟ್ಸ್:
- ಸ್ಟಾರ್ ಸ್ಪೋರ್ಟ್ಸ್ನ ದಿಗ್ಗಜರ ದಂತಕತೆ' ಕಾರ್ಯಕ್ರಮಲ್ಲಿ ಮಾತನಾಡಿದ ಶ್ರೀನಾಥ್.
- ನಿವೃತ್ತಿಗೆ ನಿಜವಾದ ಕಾರಣ ತೆರೆದಿಟ್ಟ ಮೈಸೂರು ಎಕ್ಸ್ಪ್ರೆಸ್.
- 2003ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ಗೆ ವಿಯಾದ ಹೇಳಿದ್ದ ಮಾಜಿ ವೇಗಿ.
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ವೇಗಿಗಳಿಗೆ ಹೊಸ ದಿಕ್ಕು ತೋರಿಸಿಕೊಟ್ಟ ಹೆಗ್ಗಳಿಕೆ ಪಡೆದಿರುವ ಕನ್ನಡಿಗ ಹಾಗೂ ಮೈಸೂರ್ ಎಕ್ಸ್ಪ್ರೆಸ್ ಖ್ಯಾತಿಯ ಮಾಜಿ ವೇಗಿ 2003ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಆ ಟೂರ್ನಿಯಲ್ಲಿ ಆಡಿದ 11 ಪಂದ್ಯಗಳಲ್ಲಿ ಶ್ರೀ ಬರೋಬ್ಬರಿ 16 ವಿಕೆಟ್ಗಳನ್ನು ಉರುಳಿಸಿದ್ದರು. ಇನ್ನು ಭಾರತ ತಂಡದ ಪರ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಕ್ರಮವಾಗಿ 315 ಮತ್ತು 236 ವಿಕೆಟ್ಗಳನ್ನು ಪಡೆದಿರುವ ಶ್ರೀನಾಥ್, 1999ರ ವಿಶ್ವಕಪ್ ಟೂರ್ನಿಯಲ್ಲಿ ಗಂಟೆಗೆ 154.5 ಕಿ.ಮೀ. ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ವೇಗದ ಎಸೆತವನ್ನು ಎಸೆದ ಭಾರತೀಯ ವೇಗಿ ಎಂಬ ದಾಖಲೆಯನ್ನು ಈಗಲೂ ಹೊಂದಿದ್ದಾರೆ.
ಒಂದು ಕಾಲಕ್ಕೆ ಟೀಮ್ ಇಂಡಿಯಾದಲ್ಲಿ ಮೂರು ಸ್ಪಿನ್ನರ್ಗಳು ಆಡುತ್ತಿದ್ದ ವೇಳೆ ತಂಡದಲ್ಲಿ ಏಕೈಕ ವೈಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ಶ್ರೀನಾಥ್, ವೇಗಿಗಳಿಗೆ ನರಕದಂತಹ ಪಿಚ್ಗಳಲ್ಲಿಯೂ ದಿಟ್ಟ ಬೌಲಿಂಗ್ ಪ್ರದರ್ಶಿಸಿ ವಿಕೆಟ್ಗಳನ್ನು ಹೆಕ್ಕುತ್ತಿದ್ದರು. 1991ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೀನಾಥ್, 13 ವರ್ಷಗಳ ಕಾಲ ಟೀಮ್ ಇಂಡಿಯಾದ ವೇಗದ ಬೌಲಿಂಗ್ನಲ್ಲಿ ಪ್ರಮುಖ ಅಸ್ತ್ರವಾಗಿ ಸೇವೆ ಸಲ್ಲಿಸಿದ್ದಾರೆ.
ಸಚಿನ್ ನಾಟ್ಔಟ್ ಆಗಿದ್ದರೂ ಔಟ್ ಎಂದು ತೀರ್ಪು ಕೊಟ್ಟ ಬಗ್ಗೆ ಮಾತನಾಡಿದ ಬಕ್ನರ್!
ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿನ 'ದಿಗ್ಗಜರ ದಂತಕತೆ' ಕಾರ್ಯಕ್ರಮಲ್ಲಿ ಮಾತನಾಡಿರುವ ಶ್ರೀನಾಥ್, ತಮ್ಮಲ್ಲಿ ಇನ್ನೂ ಒಂದು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ಇರುವಾಗಲೇ ನಿವೃತ್ತಿ ನೀಡಿದ ಸಂಗತಿಯನ್ನು ಅದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
"ನನ್ನ ಕೈಗಳು ಮತ್ತು ಮಂಡಿಗಳು ದಣಿದಿದ್ದವು. ಆ ಸಮಯದಲ್ಲಿ ಜಹೀರ್ ಖಾನ್ ಮತ್ತು ಆಶಿಶ್ ನೆಹ್ರಾ ತಂಡದಲ್ಲಿ ಇದ್ದರು. ನಾನು ಆಡುವಾಗ ಅವರಿಬ್ಬರಲ್ಲಿ ಒಬ್ಬರಿಗೆ ಮಾತ್ರವೇ ಅವಕಾಶ ಸಿಗುತ್ತಿತ್ತು. ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಆಡುತ್ತಿದ್ದಾಗ ನಾನು ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿದ್ದೆ," ಎಂದು ಶ್ರೀನಾಥ್ ತಮ್ಮ ನೆನಪಿನಾಳ ಕೆದಕಿದ್ದಾರೆ.
ಟೀಮ್ ಇಂಡಿಯಾದ ಗ್ರೇಟೆಸ್ಟ್ ಮ್ಯಾಚ್ ವಿನ್ನರ್ ಇವರೇ ಎಂದ ಹರ್ಭಜನ್ ಸಿಂಗ್!
"ಕೆಲವೊಮ್ಮೆ ಪಿಚ್ಗೆ ಅನುಗುಣವಾಗಿ ಇಬ್ಬರು ವೇಗಿಗಳನ್ನು ಆಡಿಸುವ ಸಂದರ್ಭದಲ್ಲಿ ನಿರ್ಧಾರ ಬಹಳ ಕಠಿಣ. ಇನ್ನು ಭಾರತೀಯ ಪಿಚ್ಗಳಲ್ಲಿ ಬೌಲಿಂಗ್ ಮಾಡವುದು ನನಗೆ ಬಹಳ ಕಷ್ಟ ಎನಿಸುತ್ತಿತ್ತು. ಆ ಹೊತ್ತಿಗಾಗಲೇ ನನಗೆ 33 ವರ್ಷ ವಯಸ್ಸಾಗಿತ್ತು. ಹೀಗಾಗಿ ಹೆಚ್ಚೆಂದರೆ ಇನ್ನೊಂದು ವರ್ಷ ನಾನು ಆಡಬಹುದಿತ್ತು. ಆದರೆ ನನ್ನ ಮಂಡಿಗಳು ಇದಕ್ಕೆ ಸಾಥ್ ನೀಡಲಿಲ್ಲ," ಎಂದು ನಿವೃತ್ತಿ ಹಿಂದಿನ ನಿಜವಾದ ಕಾರಣ ಏನೆಂಬುದನ್ನು ಶ್ರೀನಾಥ್ ಹೇಳಿಕೊಂಡಿದ್ದಾರೆ.
ಒಂದು ಕಾಲಕ್ಕೆ ಟೀಮ್ ಇಂಡಿಯಾದಲ್ಲಿ ಮೂರು ಸ್ಪಿನ್ನರ್ಗಳು ಆಡುತ್ತಿದ್ದ ವೇಳೆ ತಂಡದಲ್ಲಿ ಏಕೈಕ ವೈಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ಶ್ರೀನಾಥ್, ವೇಗಿಗಳಿಗೆ ನರಕದಂತಹ ಪಿಚ್ಗಳಲ್ಲಿಯೂ ದಿಟ್ಟ ಬೌಲಿಂಗ್ ಪ್ರದರ್ಶಿಸಿ ವಿಕೆಟ್ಗಳನ್ನು ಹೆಕ್ಕುತ್ತಿದ್ದರು. 1991ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಶ್ರೀನಾಥ್, 13 ವರ್ಷಗಳ ಕಾಲ ಟೀಮ್ ಇಂಡಿಯಾದ ವೇಗದ ಬೌಲಿಂಗ್ನಲ್ಲಿ ಪ್ರಮುಖ ಅಸ್ತ್ರವಾಗಿ ಸೇವೆ ಸಲ್ಲಿಸಿದ್ದಾರೆ.
ಸಚಿನ್ ನಾಟ್ಔಟ್ ಆಗಿದ್ದರೂ ಔಟ್ ಎಂದು ತೀರ್ಪು ಕೊಟ್ಟ ಬಗ್ಗೆ ಮಾತನಾಡಿದ ಬಕ್ನರ್!
ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿನ 'ದಿಗ್ಗಜರ ದಂತಕತೆ' ಕಾರ್ಯಕ್ರಮಲ್ಲಿ ಮಾತನಾಡಿರುವ ಶ್ರೀನಾಥ್, ತಮ್ಮಲ್ಲಿ ಇನ್ನೂ ಒಂದು ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ಇರುವಾಗಲೇ ನಿವೃತ್ತಿ ನೀಡಿದ ಸಂಗತಿಯನ್ನು ಅದರ ಹಿಂದಿನ ಕಾರಣವನ್ನು ವಿವರಿಸಿದ್ದಾರೆ.
"ನನ್ನ ಕೈಗಳು ಮತ್ತು ಮಂಡಿಗಳು ದಣಿದಿದ್ದವು. ಆ ಸಮಯದಲ್ಲಿ ಜಹೀರ್ ಖಾನ್ ಮತ್ತು ಆಶಿಶ್ ನೆಹ್ರಾ ತಂಡದಲ್ಲಿ ಇದ್ದರು. ನಾನು ಆಡುವಾಗ ಅವರಿಬ್ಬರಲ್ಲಿ ಒಬ್ಬರಿಗೆ ಮಾತ್ರವೇ ಅವಕಾಶ ಸಿಗುತ್ತಿತ್ತು. ಕಪಿಲ್ ದೇವ್ ಮತ್ತು ಮನೋಜ್ ಪ್ರಭಾಕರ್ ಆಡುತ್ತಿದ್ದಾಗ ನಾನು ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿದ್ದೆ," ಎಂದು ಶ್ರೀನಾಥ್ ತಮ್ಮ ನೆನಪಿನಾಳ ಕೆದಕಿದ್ದಾರೆ.
ಟೀಮ್ ಇಂಡಿಯಾದ ಗ್ರೇಟೆಸ್ಟ್ ಮ್ಯಾಚ್ ವಿನ್ನರ್ ಇವರೇ ಎಂದ ಹರ್ಭಜನ್ ಸಿಂಗ್!
"ಕೆಲವೊಮ್ಮೆ ಪಿಚ್ಗೆ ಅನುಗುಣವಾಗಿ ಇಬ್ಬರು ವೇಗಿಗಳನ್ನು ಆಡಿಸುವ ಸಂದರ್ಭದಲ್ಲಿ ನಿರ್ಧಾರ ಬಹಳ ಕಠಿಣ. ಇನ್ನು ಭಾರತೀಯ ಪಿಚ್ಗಳಲ್ಲಿ ಬೌಲಿಂಗ್ ಮಾಡವುದು ನನಗೆ ಬಹಳ ಕಷ್ಟ ಎನಿಸುತ್ತಿತ್ತು. ಆ ಹೊತ್ತಿಗಾಗಲೇ ನನಗೆ 33 ವರ್ಷ ವಯಸ್ಸಾಗಿತ್ತು. ಹೀಗಾಗಿ ಹೆಚ್ಚೆಂದರೆ ಇನ್ನೊಂದು ವರ್ಷ ನಾನು ಆಡಬಹುದಿತ್ತು. ಆದರೆ ನನ್ನ ಮಂಡಿಗಳು ಇದಕ್ಕೆ ಸಾಥ್ ನೀಡಲಿಲ್ಲ," ಎಂದು ನಿವೃತ್ತಿ ಹಿಂದಿನ ನಿಜವಾದ ಕಾರಣ ಏನೆಂಬುದನ್ನು ಶ್ರೀನಾಥ್ ಹೇಳಿಕೊಂಡಿದ್ದಾರೆ.