ಉನಾದ್ಕಟ್ಗೆ ಟೀಮ್ ಇಂಡಿಯಾ ಬಾಗಿಲು ಮುಚ್ಚಿದೆ ಎಂದ ಬಿಸಿಸಿಐ ಸೆಲೆಕ್ಟರ್!
ದೇಶಿ ಟೂರ್ನಿಗಳಲ್ಲಿ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿರುವ ಸೌರಾಷ್ಟ್ರದ ಅನುಭವಿ ಎಡಗೈ ವೇಗಿ ಜಯದೇವ್ ಉನಾದ್ಕಟ್ಗೆ ಇಂಗ್ಲೆಂಡ್ ಪ್ರವಾಸ ಸಲುವಾಗಿ ಪ್ರಕಟಿಸಿದ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದೇ ಹೋದದ್ದು ಹಲವರಿಗೆ ಅಚ್ಚರಿ ತಂದಿತ್ತು.
Vijaya Karnataka Web 26 May 2021, 4:22 pm
ಹೈಲೈಟ್ಸ್:
- ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದ ಜಯದೇವ್ ಉನಾದ್ಕಟ್.
- ಎಡಗೈ ವೇಗಿಯನ್ನು ಆಯ್ಕೆ ಮಾಡದೇ ಇರುವುದಕ್ಕೆ ಟೀಕೆ ಎದುರಿಸಿದ್ದ ಬಿಸಿಸಿಐ ಸೆಲೆಕ್ಟರ್ಸ್.
- ವಯಸ್ಸಾದ ವೇಗಿಗೆ ಅವಕಾಶ ನೀಡುವುದಿಲ್ಲ ಎಂದ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯ.
ಬೆಂಗಳೂರು: ಐಪಿಎಲ್ ಸೇರಿದಂತೆ ದೇಶಿ ಟೂರ್ನಿಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿರುವ ಸೌರಾಷ್ಟ್ರದ ಅನುಭವಿ ಎಡಗೈ ವೇಗದ ಬೌಲರ್ ಜಯದೇವ್ ಉನಾದ್ಕಟ್ಗೆ ಭಾರತ ತಂಡದಲ್ಲಿ ಅವಕಾಶ ಸಿಗದೇ ಇರುವುದು ಅಚ್ಚರಿಯೇ ಸರಿ. ಇತ್ತೀಚೆಗಷ್ಟೇ ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟಿಸಲಾದ ಭಾರತ ತಂಡದಲ್ಲಿ ಜಯದೇವ್ ಉನಾದ್ಕಟ್ಗೆ ಸ್ಥಾನ ಸಿಗದೇ ಇದ್ದ ಸಂದರ್ಭದಲ್ಲಿ ಮಾಜಿ ವೇಗದ ಬೌಲರ್ ದೊಡ್ಡ ಗಣೇಶ್ ಟ್ವಿಟರ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ. ಭಾರತ ತಂಡಕ್ಕೆ ಆಯ್ಕೆಯಾಗಲು ಈತ ಇನ್ನೇನು ಮಾಡಬೇಕು ಎಂದು ಬಿಸಿಸಿಐ ಸೆಲಕ್ಟರ್ಸ್ಗೆ ಪ್ರಶ್ನೆಯ ಬೌನ್ಸರ್ ಎಸೆದಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ 29 ವರ್ಷದ ಅನುಭವಿ ವೇಗಿ ಉನಾದ್ಕಟ್, ಉತ್ತಮ ಪ್ರದರ್ಶನ ನೀಡಿದರೂ ಭಾರತ ತಂಡಕ್ಕೆ ಆಯ್ಕೆ ಆಗದೇ ಇರುವುದಕ್ಕೆ ಬಹಳಾ ಬೇಸರವಾಗಿದೆ. ಆದರೆ, ಪ್ರಯತ್ನ ಮಾಡುವುದನ್ನಂತೂ ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದರು.
ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಕಟ್ಟಿ ಭುವನೇಶ್ವರ್ಗೆ ನಾಯಕತ್ವ ಕೊಟ್ಟ ಹರ್ಷ ಭೋಗ್ಲೆ!
ಅಂದಹಾಗೆ, ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರೊಬ್ಬರು, ಉನಾದ್ಕಟ್ಗೆ ವಯಸ್ಸಾಗಿದೆ ಹೀಗಾಗಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ ಎಂಬ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಸೌರಾಷ್ಟ್ರ ವೇಗಿಗೆ ಭಾರತ ತಂಡದ ಬಾಗಿಲು ಮುಚ್ಚಿದೆ ಎಂಬ ಸುಳಿವು ನೀಡಿದ್ದಾರೆ.
ದೇಶಿ ಟೂರ್ನಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಉನಾದ್ಕಟ್, 2019-20ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡ ಚಾಂಪಿಯನ್ಸ್ ಪಟ್ಟ ಪಡೆದಾಗ ತಂಡದ ಪರವಾಗಿ 67 ವಿಕೆಟ್ಗಳನ್ನು ಉರುಳಿಸಿದ ಸಾಧನೆ ಮಾಡಿದ್ದರು. ಆದರೂ ಕೂಡ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಪರಿಗಣಿಸಲಾಗಿಲ್ಲ.
ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ನ್ಯೂಜಿಲೆಂಡ್ ಎದುರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಂದ್ಯದ ಬಳಿಕ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಸುದೀರ್ಘಾವಧಿಯ ಪ್ರವಾಸದಲ್ಲಿ ಉನಾದ್ಕಟ್ಗೆ ಅವಕಾಶ ಕೊಡಬಹುದಿತ್ತು ಎಂದು ಹಲವು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದರು.
ಕೊಹ್ಲಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕ್ರಿಕೆಟ್ ನಾಯಕ ಇವರು!
ಇತ್ತೀಚೆಗೆ ಸೌರಾಷ್ಟ್ರ ತಂಡದ ಮುಖ್ಯ ಕೋಚ್ ಕರ್ಸನ್ ಘಾರ್ವಿ 2019-20ರ ರಣಜಿ ಟ್ರೋಫಿ ವೇಳೆ ಬಿಸಿಸಿಐ ಸೆಲೆಕ್ಟರ್ಸ್ ಬಳಿ ಉನಾಟ್ಕಟ್ಗೆ ಅವಕಾಶ ಸಿಗುವ ಬಗ್ಗೆ ಚರ್ಚೆ ಮಾಡಿದ್ದನ್ನು ಬಹಿರಂಗ ಪಡಿಸಿದ್ದಾರೆ. ಘಾರ್ವಿ ಅವರ ಪ್ರಕಾರ ಬಿಸಿಸಿಐ ಸೆಲೆಕ್ಟರ್ ಒಬ್ಬರು ಉನಾದ್ಕಟ್ಗೆ ವಯಸ್ಸಾಗಿದೆ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"2019-20ರ ರಣಜಿ ಟ್ರೋಫಿ ಫೈನಲ್ ವೇಳೆ ಸೆಲೆಕ್ಟರ್ಸ್ ಬಳಿ ಉನಾದ್ಕಟ್ ಆಯ್ಕೆಯ ಬಗ್ಗೆ ಮಾತನಾಡಿದ್ದೆ. ಏಕೆಂದರೆ ಆ ಆವೃತ್ತಿಯಲ್ಲಿ ಅವರು 60ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು. ಹೀಗಾಗಿ ಕನಿಷ್ಠ ಭಾರತ 'ಎ' ತಂಡಕ್ಕಾದರೂ ಅವರನ್ನು ಆಯ್ಕೆ ಮಾಡಬೇಕಿತ್ತು. ಇದಕ್ಕೆ ಉತ್ತರಿಸಿದ್ದ ಸೆಲೆಕ್ಟರ್ ಒಬ್ಬರು 'ಕಾಬು ಭಾಯ್' ಉನಾದ್ಕಟ್ಗೆ ವಯಸ್ಸಾಗಿದೆ ಆತನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗದು. 30 ಆಟಗಾರರ ತಂಡ ರಚಿಸಿದರೂ ಅದರಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದರು. ನಾನು ಯಾಕೆ ಎಂದು ಪ್ರಶ್ನೆ ಮಾಡಿದೆ. ಆತನಿಗೆ ಈಗಾಗಲೇ 32-33 ವರ್ಷ ವಯಸ್ಸಾಗಿದೆ. ಹೀಗಾಗಿ ಭಾರತ ತಂಡದ ಬಾಗಿಲು ಅವರಿಗೆ ಮುಚ್ಚಿದೆ ಎಂದಿದ್ದರು," ಎಂದು ಕರ್ಸನ್ ಘಾರ್ವಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
'ರಾಹುಲ್ ದ್ರಾವಿಡ್ ಕಂಡರೆ ಭಯವಾಗುತ್ತಿತ್ತು', ಗುರುವಿನ ಪಾಠ ಸ್ಮರಿಸಿದ ಪೃಥ್ವಿ ಶಾ!
"ಹಿರಿಯ ಆಟಗಾರನ ಮೇಲೆ ಹೂಡಿಕೆ ಮಾಡಿ ಪ್ರಯೋಜನ ಏನು? ಅತನ ಬದಲು 21, 22 ಅಥವಾ 23 ವರ್ಷದ ವೇಗಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆತ ಕನಿಷ್ಠ 8-10 ವರ್ಷ ಕಾಲ ಭಾರತ ತಂಡದ ಪರ ಆಡಬಲ್ಲ. ಈಗ ಉನಾದ್ಕಟ್ ಆಯ್ಕೆ ಮಾಡಿದರೆ ಎಷ್ಟು ವರ್ಷಗಳ ಕಾಲ ಆಡಬಲ್ಲ? ಇಂತಹ ಮಾತನ್ನು ಸೆಲೆಕ್ಟರ್ಸ್ ಹೇಳಿದ್ದರು," ಎಂದು ಘಾರ್ವಿ ವಿವರಿಸಿದ್ದಾರೆ.
2010ರಲ್ಲೇ ದಕ್ಷಿಣ ಆಫ್ರಿಕಾ ಎದುರು ಉನಾದ್ಕಟ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೂ ದೇಶಿ ಟೂರ್ನಿಗಳಲ್ಲಿ ಕಠಿಣ ಶ್ರಮವಹಿಸಿ ಕಮ್ಬ್ಯಾಕ್ ಮಾಡುವ ಪ್ರಯತ್ನ ನಡೆಸಿದ್ದರು. ಆಡಿದ 89 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಜಯದೇವ್ 327 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ 20 ಐದು ವಿಕೆಟ್ಗಳ ಸಾಧನೆ ಸೇರಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ 29 ವರ್ಷದ ಅನುಭವಿ ವೇಗಿ ಉನಾದ್ಕಟ್, ಉತ್ತಮ ಪ್ರದರ್ಶನ ನೀಡಿದರೂ ಭಾರತ ತಂಡಕ್ಕೆ ಆಯ್ಕೆ ಆಗದೇ ಇರುವುದಕ್ಕೆ ಬಹಳಾ ಬೇಸರವಾಗಿದೆ. ಆದರೆ, ಪ್ರಯತ್ನ ಮಾಡುವುದನ್ನಂತೂ ನಿಲ್ಲಿಸುವುದಿಲ್ಲ ಎಂದು ಹೇಳಿಕೊಂಡಿದ್ದರು.
ಲಂಕಾ ಪ್ರವಾಸಕ್ಕೆ ಟೀಮ್ ಇಂಡಿಯಾ ಕಟ್ಟಿ ಭುವನೇಶ್ವರ್ಗೆ ನಾಯಕತ್ವ ಕೊಟ್ಟ ಹರ್ಷ ಭೋಗ್ಲೆ!
ಅಂದಹಾಗೆ, ಈ ಬಗ್ಗೆ ಕೊನೆಗೂ ಮೌನ ಮುರಿದಿರುವ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರೊಬ್ಬರು, ಉನಾದ್ಕಟ್ಗೆ ವಯಸ್ಸಾಗಿದೆ ಹೀಗಾಗಿ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ ಎಂಬ ಅಚ್ಚರಿಯ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಸೌರಾಷ್ಟ್ರ ವೇಗಿಗೆ ಭಾರತ ತಂಡದ ಬಾಗಿಲು ಮುಚ್ಚಿದೆ ಎಂಬ ಸುಳಿವು ನೀಡಿದ್ದಾರೆ.
ದೇಶಿ ಟೂರ್ನಿಗಳಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿರುವ ಉನಾದ್ಕಟ್, 2019-20ರ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೌರಾಷ್ಟ್ರ ತಂಡ ಚಾಂಪಿಯನ್ಸ್ ಪಟ್ಟ ಪಡೆದಾಗ ತಂಡದ ಪರವಾಗಿ 67 ವಿಕೆಟ್ಗಳನ್ನು ಉರುಳಿಸಿದ ಸಾಧನೆ ಮಾಡಿದ್ದರು. ಆದರೂ ಕೂಡ ಅವರನ್ನು ಭಾರತ ಟೆಸ್ಟ್ ತಂಡಕ್ಕೆ ಪರಿಗಣಿಸಲಾಗಿಲ್ಲ.
ಭಾರತ ತಂಡ ಇಂಗ್ಲೆಂಡ್ ಪ್ರವಾಸದಲ್ಲಿ ನ್ಯೂಜಿಲೆಂಡ್ ಎದುರು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಪಂದ್ಯದ ಬಳಿಕ ಇಂಗ್ಲೆಂಡ್ ಎದುರು 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಸುದೀರ್ಘಾವಧಿಯ ಪ್ರವಾಸದಲ್ಲಿ ಉನಾದ್ಕಟ್ಗೆ ಅವಕಾಶ ಕೊಡಬಹುದಿತ್ತು ಎಂದು ಹಲವು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದರು.
ಕೊಹ್ಲಿಗಿಂತ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕ್ರಿಕೆಟ್ ನಾಯಕ ಇವರು!
ಇತ್ತೀಚೆಗೆ ಸೌರಾಷ್ಟ್ರ ತಂಡದ ಮುಖ್ಯ ಕೋಚ್ ಕರ್ಸನ್ ಘಾರ್ವಿ 2019-20ರ ರಣಜಿ ಟ್ರೋಫಿ ವೇಳೆ ಬಿಸಿಸಿಐ ಸೆಲೆಕ್ಟರ್ಸ್ ಬಳಿ ಉನಾಟ್ಕಟ್ಗೆ ಅವಕಾಶ ಸಿಗುವ ಬಗ್ಗೆ ಚರ್ಚೆ ಮಾಡಿದ್ದನ್ನು ಬಹಿರಂಗ ಪಡಿಸಿದ್ದಾರೆ. ಘಾರ್ವಿ ಅವರ ಪ್ರಕಾರ ಬಿಸಿಸಿಐ ಸೆಲೆಕ್ಟರ್ ಒಬ್ಬರು ಉನಾದ್ಕಟ್ಗೆ ವಯಸ್ಸಾಗಿದೆ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
"2019-20ರ ರಣಜಿ ಟ್ರೋಫಿ ಫೈನಲ್ ವೇಳೆ ಸೆಲೆಕ್ಟರ್ಸ್ ಬಳಿ ಉನಾದ್ಕಟ್ ಆಯ್ಕೆಯ ಬಗ್ಗೆ ಮಾತನಾಡಿದ್ದೆ. ಏಕೆಂದರೆ ಆ ಆವೃತ್ತಿಯಲ್ಲಿ ಅವರು 60ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದರು. ಹೀಗಾಗಿ ಕನಿಷ್ಠ ಭಾರತ 'ಎ' ತಂಡಕ್ಕಾದರೂ ಅವರನ್ನು ಆಯ್ಕೆ ಮಾಡಬೇಕಿತ್ತು. ಇದಕ್ಕೆ ಉತ್ತರಿಸಿದ್ದ ಸೆಲೆಕ್ಟರ್ ಒಬ್ಬರು 'ಕಾಬು ಭಾಯ್' ಉನಾದ್ಕಟ್ಗೆ ವಯಸ್ಸಾಗಿದೆ ಆತನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗದು. 30 ಆಟಗಾರರ ತಂಡ ರಚಿಸಿದರೂ ಅದರಲ್ಲಿ ಅವರಿಗೆ ಸ್ಥಾನ ಸಿಗುವುದಿಲ್ಲ ಎಂದರು. ನಾನು ಯಾಕೆ ಎಂದು ಪ್ರಶ್ನೆ ಮಾಡಿದೆ. ಆತನಿಗೆ ಈಗಾಗಲೇ 32-33 ವರ್ಷ ವಯಸ್ಸಾಗಿದೆ. ಹೀಗಾಗಿ ಭಾರತ ತಂಡದ ಬಾಗಿಲು ಅವರಿಗೆ ಮುಚ್ಚಿದೆ ಎಂದಿದ್ದರು," ಎಂದು ಕರ್ಸನ್ ಘಾರ್ವಿ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
'ರಾಹುಲ್ ದ್ರಾವಿಡ್ ಕಂಡರೆ ಭಯವಾಗುತ್ತಿತ್ತು', ಗುರುವಿನ ಪಾಠ ಸ್ಮರಿಸಿದ ಪೃಥ್ವಿ ಶಾ!
"ಹಿರಿಯ ಆಟಗಾರನ ಮೇಲೆ ಹೂಡಿಕೆ ಮಾಡಿ ಪ್ರಯೋಜನ ಏನು? ಅತನ ಬದಲು 21, 22 ಅಥವಾ 23 ವರ್ಷದ ವೇಗಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆತ ಕನಿಷ್ಠ 8-10 ವರ್ಷ ಕಾಲ ಭಾರತ ತಂಡದ ಪರ ಆಡಬಲ್ಲ. ಈಗ ಉನಾದ್ಕಟ್ ಆಯ್ಕೆ ಮಾಡಿದರೆ ಎಷ್ಟು ವರ್ಷಗಳ ಕಾಲ ಆಡಬಲ್ಲ? ಇಂತಹ ಮಾತನ್ನು ಸೆಲೆಕ್ಟರ್ಸ್ ಹೇಳಿದ್ದರು," ಎಂದು ಘಾರ್ವಿ ವಿವರಿಸಿದ್ದಾರೆ.
2010ರಲ್ಲೇ ದಕ್ಷಿಣ ಆಫ್ರಿಕಾ ಎದುರು ಉನಾದ್ಕಟ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೂ ದೇಶಿ ಟೂರ್ನಿಗಳಲ್ಲಿ ಕಠಿಣ ಶ್ರಮವಹಿಸಿ ಕಮ್ಬ್ಯಾಕ್ ಮಾಡುವ ಪ್ರಯತ್ನ ನಡೆಸಿದ್ದರು. ಆಡಿದ 89 ಪ್ರಥಮದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ ಜಯದೇವ್ 327 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ 20 ಐದು ವಿಕೆಟ್ಗಳ ಸಾಧನೆ ಸೇರಿದೆ.