ಆ್ಯಪ್ನಗರ

ಟೂರ್ನಿ ಸೋತರೂ ಪರವಾಗಿಲ್ಲ, ಪಾಕ್ ಪಂದ್ಯ ಗೆದ್ದು ಬನ್ನಿ; ಅಭಿಮಾನಿಗಳ ಕರೆ

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಏಕದಿನ ಟೂರ್ನಮೆಂಟ್‌ನಲ್ಲಿ ಭಾನುವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಸಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಗೆಲುವಿಗಾಗಿ ಹೋರಾಡಲಿದೆ.

ಏಜೆನ್ಸೀಸ್ 2 Jun 2017, 7:12 pm
ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಏಕದಿನ ಟೂರ್ನಮೆಂಟ್‌ನಲ್ಲಿ ಭಾನುವಾರ ನಡೆಯಲಿರುವ ಮಹತ್ವದ ಪಂದ್ಯದಲ್ಲಿ ಸಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಗೆಲುವಿಗಾಗಿ ಹೋರಾಡಲಿದೆ.
Vijaya Karnataka Web just beat pakistan in ct 17 fans reaction to team india
ಟೂರ್ನಿ ಸೋತರೂ ಪರವಾಗಿಲ್ಲ, ಪಾಕ್ ಪಂದ್ಯ ಗೆದ್ದು ಬನ್ನಿ; ಅಭಿಮಾನಿಗಳ ಕರೆ


ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಪ್ರತಿಯೊಂದು ಪಂದ್ಯವೂ ಅತ್ಯಂತ ಕುತೂಹಲ ಕೆರಳಿಸುತ್ತದೆ. ಅಭಿಮಾನಿಗಳ ಪಾಲಿಗಿದು ಯುದ್ಧಕ್ಕೆ ಸಮಾನವಾಗಿದೆ.

ಇತ್ತಂಡಗಳು ಬಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದು, ಗೆಲುವಿನ ಮೂಲಕ ಶುಭಾರಂಭ ಮಾಡಿಕೊಳ್ಳುವ ಇರಾದೆಯಲ್ಲಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ, ಇದು ಮಗದೊಂದು ಪಂದ್ಯ ಮಾತ್ರ ಎಂದು ಹೇಳಿರಬಹುದು. ಆದರೆ ಇತ್ತಂಡಗಳ ಆಟಗಾರರು ಅತೀವ ಒತ್ತಡವನ್ನು ಅನುಭವಿಸಲಿದ್ದಾರೆ ಎಂದು ಪಾಕ್ ಮಾಜಿ ವೇಗಿ ವಕಾರ್ ಯೂನಿಸ್ ಅಭಿಪ್ರಾಯಪಟ್ಟಿದ್ದಾರೆ.

#TeamIndia - @imVkohli @ImRo45 @anilkumble1074 @msdhoni delight the fans after the training session #CT17 #INDvPAK pic.twitter.com/JCHie3Nff1 — BCCI (@BCCI) June 1, 2017 ಒಟ್ಟಿನಲ್ಲಿ ಇತ್ತಂಡಗಳಿಗಿದು ಪ್ರತಿಷ್ಠೆಯ ಪಂದ್ಯವಾಗಿರಲಿದೆ. ಗಡಿಯಾಚೆಗಿನ ಭಯೋತ್ಪಾದನೆಯ ಹಿನ್ನಲೆಯಲ್ಲಿ ಇತ್ತಂಡಗಳ ಕ್ರಿಕೆಟ್ ಸರಣಿಯು ನಿಂತು ಹೋಗಿರುವ ಹಿನ್ನಲೆಯಲ್ಲಿ ತಣಸ್ಥ ತಾಣದಲ್ಲಿ ನಡೆಯಲಿರುವ ಈ ಪಂದ್ಯ ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದೆ.

ಟೂರ್ನಿ ಗೆಲ್ಲದೇ ಹೋದರೂ ಪರವಾಗಿಲ್ಲ ಕನಿಷ್ಠ ಪಾಕಿಸ್ತಾನ ವಿರುದ್ಧ ನಡೆಯುವ ಪಂದ್ಯವಾದರೂ ಗೆದ್ದು ಬನ್ನಿ ಎಂದು ಟೀಮ್ ಇಂಡಿಯಾಗೆ ಅಭಿಮಾನಿಗಳು ಹಾರೈಸಿದ್ದಾರೆ.

The rain is keeping #TeamIndia indoors #CT17 #INDvPAK pic.twitter.com/wtL6Fs8Ay6 — BCCI (@BCCI) June 2, 2017 ಏತನ್ಮಧ್ಯೆ ಮಳೆಯ ಅಡಚಣೆಯಿಂದಾಗಿ ಗುರುವಾರದಂದು ಟೀಮ್ ಇಂಡಿಯಾ ಆಟಗಾರರು ಆಂತರಿಕ ಸ್ಟೇಡಿಯಂನಲ್ಲಿ ಅಭ್ಯಾಸವನ್ನು ಮುಂದುವರಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌