ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನು ಆಯೋಜಿಸಲು ಪಾಕ್ ಕ್ರಿಕೆಟ್ ಮಂಡಳಿ ಇನ್ನೇನು ದಿನಗಣನೆ ಆರಂಭಿಸುತ್ತಿರುವಾಗ ಭಾರಿ ಆಘಾತ ಎದುರಾಗಿದ್ದು, ಕ್ವೆಟಾ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಬಾಂಬ್ ದಾಳಿಗೆ ಕನಿಷ್ಠ 12 ಮಂದಿ ಮೃತಪಟ್ಟ ಘಟನೆ ನಡೆದಿದೆ. ಪಾಕಿಸ್ತಾನ ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳು ಇಲ್ಲಿ ಕ್ರಿಕೆಟ್ ಆಡಿ ತಮ್ಮ ನಾಡಿಗೆ ಹಿಂದಿರುಗಿವೆ ಇದಕ್ಕಿಂತಲೂ ಸಾಕ್ಷಿ ಬೇಕೆ. ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ ನಮ್ಮದು ಎಂದೆಲ್ಲಾ ಡಂಗೂರ ಸಾರುತ್ತಿದ್ದಾ ಪಾಕಿಸ್ತಾನಕ್ಕೆ ಇದೀಗ ಉಗ್ರರ ದಾಳಿ ಮುಖಕ್ಕೆ ಮಂಗಳಾರತಿ ಮಾಡಿದಂತಾಗಿದೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೆಲ್ಲಾ ಪಾಕಿಸ್ತಾನ ಸುರಕ್ಷಿತ ಸ್ಥಳ ಭಾರತ ತಂಡ ಈಗ ಪಾಕಿಸ್ತಾನಕ್ಕೆ ಆಗಮಿಸಬಹುದು. ಇಂಡೊ-ಪಾಕ್ ಕ್ರಿಕೆಟ್ ಸರಣಿ ಮತ್ತೆ ಶುರುವಾಗಬೇಕು ಎಂದೆಲ್ಲಾ ತುಟಿ ಬಿಚ್ಚಿದ್ದರು. ಈಗ ಉಗ್ರರ ದಾಳಿ ನಡೆದಿದ್ದು, ಮತ್ತೆ ಅದ್ಯಾವ ರೀತಿ ತಮ್ಮ ದೇಶವನ್ನು ಸುರಕ್ಷಿತವೆಂದು ಹೇಳಿಕೊಳ್ಳುತ್ತಾರೊ ಕಾದು ನೋಡಬೇಕಿದೆ.
ರಸ್ತೆ ಅಪಘಾತ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ವಿಂಡೀಸ್ ಕ್ರಿಕೆಟಿಗ!
ಶೊಯೇಬ್ ಅಖ್ತರ್ ಇತ್ತೀಚೆಗಷ್ಟೇ ಇಂಡೊ-ಪಾಕ್ ಸರಣಿ ಆಯೋಜನೆ ಪರ ಬ್ಯಾಟ್ ಬೀಸಿದ್ದರು. ಎರಡೂ ರಾಷ್ಟ್ರಗಳು ಕ್ರಿಕೆಟ್ ಆಡದೇ ಇದ್ದರೆ ಈರುಳ್ಳಿ-ಟೊಮೇಟೊ ವ್ಯಾಪಾರವನ್ನೂ ನಿಲ್ಲಿಸಬೇಕು. ಕ್ರಿಕೆಟ್ಗೆ ರಾಜಕೀಯವನ್ನು ಎಳೆತರಬಾರದು ಎಂದೆಲ್ಲಾ ಹೇಳಿದ್ದರು. ತಟಸ್ಥ ಅಂಗಣದಲ್ಲಿ ಆದರೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಆಯೋಜನೆಯಾಗಲಿ ಎಂದು ಅಭಿಪ್ರಾಯ ಹೊರಹಾಕಿದ್ದರು.
ಇನ್ನು ಪಾಕ್ನ ಜನಪ್ರಿಯ ಮಾಧ್ಯಮ ಅಲ್ ಝಜೀರಾ ವರದಿ ಮಾಡಿರುವ ಪ್ರಕಾರ ಕ್ವೆಟಾದಲ್ಲಿ ಸೋಮವಾರ ನಡೆದ ಬಾಂಬ್ ಸ್ಪೋಟದಲ್ಲಿ ಕನಿಷ್ಠ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಸಾವಿನ ಸಂಖ್ಯೆ 12ಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಒಟ್ಟು 25 ಮಂದಿಗೆ ಗಾಯಗಳಾಗಿವೆ. ಆದರೂ ಗಾಯಗೊಂಡವರ ಸಂಖ್ಯೆ ಇನ್ನು ಖಚಿತವಾಗಿಲ್ಲ.
ಕ್ವೆಟಾ ಜಿಲ್ಲೆಯ ಫ್ರಾಂಚೈಸಿ ತಂಡವಾದ ಕ್ವೆಟಾ ಗ್ಲಾಡಿಯೇಟರ್ಸ್ ಸರ್ಫರಾಝ್ ಅಹ್ಮದ್ ನಾಯಕತ್ವದಲ್ಲಿ ಕಳೆದ ಬಾರಿಯ ಪಿಎಲ್ಎಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಮೊಹ್ಸೀನ್ ಖಾನ್ (ಕೋಚ್) ಮಾರ್ಗದರ್ಶನದ ಗ್ಲಾಡಿಯೇಟರ್ಸ್ ತಂಡದಲ್ಲಿ ಶೇನ್ ವಾಟ್ಸನ್, ಜೇಸನ್ ರಾಯ್, ಬೆನ್ ಕಟಿಂಗ್ ಹಾಗೂ ಕೀಮೊ ಪೌಲ್ ಅವರಂತಹ ಸ್ಟಾರ್ ವಿದೇಶಿ ಆಟಗಾರರಿದ್ದಾರೆ. ಇದೀಗ ಉಗ್ರರ ದಾಳಿ ಸಂಭವಿಸಿದ ಬಳಿಕ ವಿದೇಶಿ ಕ್ರಿಕೆಟಿಗರು ಟೂರ್ನಿಯಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಷ್ಟೆ.
ಈರುಳ್ಳಿ, ಟೊಮೇಟೊ ಮಾರೋಕಾಗುತ್ತೆ ಕ್ರಿಕೆಟ್ ಆಡೋಕಾಗಲ್ವ ಎಂದ ಶೊಯೇಬ್ ಅಖ್ತರ್!
ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ಮರು ಜೀವ ನೀಡುವ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶ್ರಮಕ್ಕೆ ಈ ಉಗ್ರರ ದಾಳಿ ತಣ್ಣೀರೆರಚಿದಂತಾಗಿದೆ. 2009ರಲ್ಲಿ ಪಾಕಿಸ್ತಾನ ಪ್ರವಾಸದಲ್ಲಿದ್ದ ಶ್ರೀಲಂಕಾ ತಂಡದ ಆಟಗಾರರ ಬಸ್ ಮೇಲೆ ನಡೆದ ಉಗ್ರರ ದಾಳಿ ಬಳಿಕ ಪಾಕ್ ನೆಲದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆದಿರಲಿಲ್ಲ. ಬಳಿಕ ಪಾಕಿಸ್ತಾನ್ ಸೂಪರ್ ಲೀಗ್ ಆಯೋಜಿಸುವ ಮೂಲಕ ಪಿಸಿಬಿ ಪಾಕಿಸ್ತಾನ ಕ್ರಿಕೆಟ್ಗೆ ಸುರಕ್ಷಿತ ಸ್ಥಳ ಎಂದು ಬಿಂಬಿಸಲು ಸಕಲ ಪ್ರಯತ್ನಗಳನ್ನು ಮಾಡಿತ್ತು. ಬಳಿಕ ಒಂದೆರಡು ಸರಣಿಗಳನ್ನು ಆಯೋಜಿಸಿ ಯಶಸ್ಸನ್ನೂ ಗಳಿಸಿತ್ತು.
2016ರಲ್ಲಿ ಶುರುವಾದ ಪಾಕಿಸ್ತಾನ್ ಸೂಪರ್ ಲೀಗ್ ಈವರೆಗೆ ನಾಲ್ಕು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. 2020ರ ಆವೃತ್ತಿಯ ಟೂರ್ನಿಯು ಫೆ.20ರಂದು ಆರಂಭಗೊಂಡು ಮಾರ್ಚ್ 22ಕ್ಕೆ ಅಂತ್ಯಗೊಳ್ಳಲಿದೆ. ಟೂರ್ನಿಯಲ್ಲಿ ಒಟ್ಟು ಆರು ಫ್ರಾಂಚೈಸಿ ತಂಡಗಳು ಪ್ರಶಸ್ತಿಗೆ ಕಾದಾಟ ನಡೆಸಲಿವೆ.
ಕ್ರಿಕೆಟ್ನ ದಿಕ್ಕೇ ಬದಲಾಯಿಸಿದ ಬ್ಯಾಟಿಂಗ್ ದಿಗ್ಗಜರನ್ನು ಹೆಸರಿಸಿದ ಇಂಝಮಾಮ್ ಉಲ್ ಹಕ್!
ಅಂದಹಾಗೆ ಇದೇ ಮೊದಲ ಬಾರಿ ಪಿಎಸ್ಲ್ 2020 ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ಆಯೋಜಿಸಲಾಗುತ್ತಿದ್ದು, ಕರಾಚಿ, ಲಾಹೋರ್, ರಾವಲಪಿಂಡಿ ಮತ್ತು ಮುಲ್ತಾನ್ ನಗರಗಳಲ್ಲಿ ಪಂದ್ಯಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿದ್ದು, 36 ಮಂದಿ ವಿದೇಶಿ ಆಟಗಾರರು ಕಣದಲ್ಲಿದ್ದಾರೆ.
ಇತ್ತೀಚೆಗಷ್ಟೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗರೆಲ್ಲಾ ಪಾಕಿಸ್ತಾನ ಸುರಕ್ಷಿತ ಸ್ಥಳ ಭಾರತ ತಂಡ ಈಗ ಪಾಕಿಸ್ತಾನಕ್ಕೆ ಆಗಮಿಸಬಹುದು. ಇಂಡೊ-ಪಾಕ್ ಕ್ರಿಕೆಟ್ ಸರಣಿ ಮತ್ತೆ ಶುರುವಾಗಬೇಕು ಎಂದೆಲ್ಲಾ ತುಟಿ ಬಿಚ್ಚಿದ್ದರು. ಈಗ ಉಗ್ರರ ದಾಳಿ ನಡೆದಿದ್ದು, ಮತ್ತೆ ಅದ್ಯಾವ ರೀತಿ ತಮ್ಮ ದೇಶವನ್ನು ಸುರಕ್ಷಿತವೆಂದು ಹೇಳಿಕೊಳ್ಳುತ್ತಾರೊ ಕಾದು ನೋಡಬೇಕಿದೆ.
ರಸ್ತೆ ಅಪಘಾತ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ವಿಂಡೀಸ್ ಕ್ರಿಕೆಟಿಗ!
ಶೊಯೇಬ್ ಅಖ್ತರ್ ಇತ್ತೀಚೆಗಷ್ಟೇ ಇಂಡೊ-ಪಾಕ್ ಸರಣಿ ಆಯೋಜನೆ ಪರ ಬ್ಯಾಟ್ ಬೀಸಿದ್ದರು. ಎರಡೂ ರಾಷ್ಟ್ರಗಳು ಕ್ರಿಕೆಟ್ ಆಡದೇ ಇದ್ದರೆ ಈರುಳ್ಳಿ-ಟೊಮೇಟೊ ವ್ಯಾಪಾರವನ್ನೂ ನಿಲ್ಲಿಸಬೇಕು. ಕ್ರಿಕೆಟ್ಗೆ ರಾಜಕೀಯವನ್ನು ಎಳೆತರಬಾರದು ಎಂದೆಲ್ಲಾ ಹೇಳಿದ್ದರು. ತಟಸ್ಥ ಅಂಗಣದಲ್ಲಿ ಆದರೂ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಆಯೋಜನೆಯಾಗಲಿ ಎಂದು ಅಭಿಪ್ರಾಯ ಹೊರಹಾಕಿದ್ದರು.
ಇನ್ನು ಪಾಕ್ನ ಜನಪ್ರಿಯ ಮಾಧ್ಯಮ ಅಲ್ ಝಜೀರಾ ವರದಿ ಮಾಡಿರುವ ಪ್ರಕಾರ ಕ್ವೆಟಾದಲ್ಲಿ ಸೋಮವಾರ ನಡೆದ ಬಾಂಬ್ ಸ್ಪೋಟದಲ್ಲಿ ಕನಿಷ್ಠ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು ಸಾವಿನ ಸಂಖ್ಯೆ 12ಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಒಟ್ಟು 25 ಮಂದಿಗೆ ಗಾಯಗಳಾಗಿವೆ. ಆದರೂ ಗಾಯಗೊಂಡವರ ಸಂಖ್ಯೆ ಇನ್ನು ಖಚಿತವಾಗಿಲ್ಲ.
ಕ್ವೆಟಾ ಜಿಲ್ಲೆಯ ಫ್ರಾಂಚೈಸಿ ತಂಡವಾದ ಕ್ವೆಟಾ ಗ್ಲಾಡಿಯೇಟರ್ಸ್ ಸರ್ಫರಾಝ್ ಅಹ್ಮದ್ ನಾಯಕತ್ವದಲ್ಲಿ ಕಳೆದ ಬಾರಿಯ ಪಿಎಲ್ಎಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿತ್ತು. ಮೊಹ್ಸೀನ್ ಖಾನ್ (ಕೋಚ್) ಮಾರ್ಗದರ್ಶನದ ಗ್ಲಾಡಿಯೇಟರ್ಸ್ ತಂಡದಲ್ಲಿ ಶೇನ್ ವಾಟ್ಸನ್, ಜೇಸನ್ ರಾಯ್, ಬೆನ್ ಕಟಿಂಗ್ ಹಾಗೂ ಕೀಮೊ ಪೌಲ್ ಅವರಂತಹ ಸ್ಟಾರ್ ವಿದೇಶಿ ಆಟಗಾರರಿದ್ದಾರೆ. ಇದೀಗ ಉಗ್ರರ ದಾಳಿ ಸಂಭವಿಸಿದ ಬಳಿಕ ವಿದೇಶಿ ಕ್ರಿಕೆಟಿಗರು ಟೂರ್ನಿಯಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಷ್ಟೆ.
ಈರುಳ್ಳಿ, ಟೊಮೇಟೊ ಮಾರೋಕಾಗುತ್ತೆ ಕ್ರಿಕೆಟ್ ಆಡೋಕಾಗಲ್ವ ಎಂದ ಶೊಯೇಬ್ ಅಖ್ತರ್!
ಪಾಕಿಸ್ತಾನದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಗೆ ಮರು ಜೀವ ನೀಡುವ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಶ್ರಮಕ್ಕೆ ಈ ಉಗ್ರರ ದಾಳಿ ತಣ್ಣೀರೆರಚಿದಂತಾಗಿದೆ. 2009ರಲ್ಲಿ ಪಾಕಿಸ್ತಾನ ಪ್ರವಾಸದಲ್ಲಿದ್ದ ಶ್ರೀಲಂಕಾ ತಂಡದ ಆಟಗಾರರ ಬಸ್ ಮೇಲೆ ನಡೆದ ಉಗ್ರರ ದಾಳಿ ಬಳಿಕ ಪಾಕ್ ನೆಲದಲ್ಲಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆದಿರಲಿಲ್ಲ. ಬಳಿಕ ಪಾಕಿಸ್ತಾನ್ ಸೂಪರ್ ಲೀಗ್ ಆಯೋಜಿಸುವ ಮೂಲಕ ಪಿಸಿಬಿ ಪಾಕಿಸ್ತಾನ ಕ್ರಿಕೆಟ್ಗೆ ಸುರಕ್ಷಿತ ಸ್ಥಳ ಎಂದು ಬಿಂಬಿಸಲು ಸಕಲ ಪ್ರಯತ್ನಗಳನ್ನು ಮಾಡಿತ್ತು. ಬಳಿಕ ಒಂದೆರಡು ಸರಣಿಗಳನ್ನು ಆಯೋಜಿಸಿ ಯಶಸ್ಸನ್ನೂ ಗಳಿಸಿತ್ತು.
2016ರಲ್ಲಿ ಶುರುವಾದ ಪಾಕಿಸ್ತಾನ್ ಸೂಪರ್ ಲೀಗ್ ಈವರೆಗೆ ನಾಲ್ಕು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿದೆ. 2020ರ ಆವೃತ್ತಿಯ ಟೂರ್ನಿಯು ಫೆ.20ರಂದು ಆರಂಭಗೊಂಡು ಮಾರ್ಚ್ 22ಕ್ಕೆ ಅಂತ್ಯಗೊಳ್ಳಲಿದೆ. ಟೂರ್ನಿಯಲ್ಲಿ ಒಟ್ಟು ಆರು ಫ್ರಾಂಚೈಸಿ ತಂಡಗಳು ಪ್ರಶಸ್ತಿಗೆ ಕಾದಾಟ ನಡೆಸಲಿವೆ.
ಕ್ರಿಕೆಟ್ನ ದಿಕ್ಕೇ ಬದಲಾಯಿಸಿದ ಬ್ಯಾಟಿಂಗ್ ದಿಗ್ಗಜರನ್ನು ಹೆಸರಿಸಿದ ಇಂಝಮಾಮ್ ಉಲ್ ಹಕ್!
ಅಂದಹಾಗೆ ಇದೇ ಮೊದಲ ಬಾರಿ ಪಿಎಸ್ಲ್ 2020 ಟೂರ್ನಿಯನ್ನು ಸಂಪೂರ್ಣವಾಗಿ ಪಾಕಿಸ್ತಾನದಲ್ಲೇ ಆಯೋಜಿಸಲಾಗುತ್ತಿದ್ದು, ಕರಾಚಿ, ಲಾಹೋರ್, ರಾವಲಪಿಂಡಿ ಮತ್ತು ಮುಲ್ತಾನ್ ನಗರಗಳಲ್ಲಿ ಪಂದ್ಯಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಟೂರ್ನಿಯಲ್ಲಿ ಒಟ್ಟು 34 ಪಂದ್ಯಗಳು ನಡೆಯಲಿದ್ದು, 36 ಮಂದಿ ವಿದೇಶಿ ಆಟಗಾರರು ಕಣದಲ್ಲಿದ್ದಾರೆ.