ಬೆಂಗಳೂರು: ಪ್ರವಾಸಿ ಆಸ್ಪ್ರೇಲಿಯಾ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯಕ್ಕೆ ಪ್ರಕಟಿಸಲಾಗಿರುವ ಭಾರತ 'ಎ' ತಂಡದಲ್ಲಿ ಕರ್ನಾಟಕದ ಆಫ್ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಸ್ಥಾನ ಪಡೆದಿದ್ದಾರೆ.
ಆಸೀಸ್ ವಿರುದ್ಧದ ಅಭ್ಯಾಸ ಪಂದ್ಯ ಫೆ.16ರಿಂದ 18ರವರೆಗೆ ಮುಂಬಯಿನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ (ಸಿಸಿಐ) ಮೈದಾನದಲ್ಲಿ ನಡೆಯಲಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಭಾರತ 'ಎ' ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಸಕ್ತ ಸಾಲಿನ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಗೌತಮ್ 8 ಪಂದ್ಯಗಳಿಂದ 27 ವಿಕೆಟ್ ಪಡೆದಿದ್ದರು. ಅಲ್ಲದೆ ಸದ್ಯ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಆಲ್ರೌಂಡ್ ಆಟದಿಂದ ಮಿಂಚುತ್ತಿದ್ದಾರೆ.
ಭಾರತ 'ಎ' ತಂಡ: ಹಾರ್ದಿಕ್ ಪಾಂಡ್ಯಾ (ನಾಯಕ), ಅಖಿಲ್ ಹೆರ್ವಾಡ್ಕರ್, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಅಂಕಿತ್ ಬಾವ್ನೆ, ರಿಷಭ್ ಪಂತ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ಶಹಬಾಜ್ ನದೀಮ್, ಕುಲ್ದೀಪ್ ಯಾದವ್, ನವ್ದೀಪ್ ಸೈನಿ, ಅಶೋಕ್ ದಿಂಡಾ, ಮೊಹಮ್ಮದ್ ಸಿರಾಜ್, ರಾಹುಲ್ ಸಿಂಗ್, ಬಾಬಾ ಇಂದ್ರಜಿತ್.