ಆ್ಯಪ್ನಗರ

ಕಾರ್ಗಿಲ್ ವಿಜಯ ದಿನ; ಧೀರ ಯೋಧರನ್ನು ಸ್ಮರಿಸಿದ ಕ್ರಿಕೆಟಿಗರು

ಕಾರ್ಗಿಲ್ ವಿಜಯ ದಿನದ 20ನೇ ವರ್ಷಾಚರಣೆಯ ಅಂಗವಾಗಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿದಾನ ಮಾಡಿರುವ ಧೀರ ಯೋಧರನ್ನು ಭಾರತೀಯ ಕ್ರಿಕೆಟಿಗರು ಸ್ಮರಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ ಸಹ ವಿಶೇಷ ಗೌರವವನ್ನು ಸಲ್ಲಿಸಿದ್ದಾರೆ.

Vijaya Karnataka Web 26 Jul 2019, 3:07 pm
Vijaya Karnataka Web virat-kohli-captaincy
ಹೊಸದಿಲ್ಲಿ: ನೆರೆಯ ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಗೆಲುವು ದಾಖಲಿಸಿ ಇಂದಿಗೆ (ಜುಲೈ 26) 20 ವರ್ಷಗಳೇ ಸಂದಿದೆ. ಇದರಂತೆ ದೇಶದ್ಯಾಂತ ಸಂಭ್ರಮ ಮನೆ ಮಾಡಿದೆ.

ಇದೀಗ ಭಾರತೀಯ ಕ್ರಿಕೆಟಿಗರು ಸಹ ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಬಲಿದಾನ ಮಾಡಿದ ಧೀರ ಯೋಧರನ್ನು ಸ್ಮರಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ದೇಶಕ್ಕಾಗಿ ನೀವು ಮಾಡಿದ ಬಲಿದಾನವನ್ನು ನಾವೆಂದು ಮರೆಯಲಾರೆವು ಎಂದು ಧೀರ ಯೋಧರಿಗೆ ಗೌರವ, ಪ್ರೀತಿ ಹಂಚಿಕೊಳ್ಳುತ್ತಾ ಸೆಲ್ಯೂಟ್ ಹೊಡೆದಿದ್ದಾರೆ.

ಕ್ರಿಕೆಟ್ ನಿವೃತ್ತಿಯ ಬಳಿಕ ಸಕ್ರಿಯ ರಾಜಕಾರಣಕ್ಕಿಳಿದು ಬಿಜೆಪಿ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿರುವ ಗೌತಮ್ ಗಂಭೀರ್ ಸಹ ದೇಶದ ಜವಾನರನ್ನು ಸ್ಮರಿಸಿದ್ದಾರೆ.

1999ನೇ ಇಸವಿಯಲ್ಲಿ ಪಾಕಿಸ್ತಾನ ವಿರುದ್ದ ನಡೆದ ಯುದ್ಧದಲ್ಲಿ ಭಾರತ ಐತಿಹಾಸಿಕ ಗೆಲುವನ್ನು ದಾಖಲಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌