ಆ್ಯಪ್ನಗರ

ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ವಿರುದ್ಧ ಸೋಲಿನ ದವಡೆಯಿಂದ ಪಾರಾದ ಕರ್ನಾಟಕ

ಸೌರಾಷ್ಟ್ರ ವಿರುದ್ಧ ರಣಜಿ ಟ್ರೋಫಿ ಹಣಾಹಣಿಯಲ್ಲಿ ಸೋಲಿನ ದವಡೆಯಿಂದ ಪಾರಾಗಿರುವ ಕರ್ನಾಟಕ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೂ ಇನ್ನಿಂಗ್ಸ್ ಹಿನ್ನೆಡೆಯಲ್ಲಿ ಕೇವಲ ಒಂದು ಅಂಕಕ್ಕೆ ಮಾತ್ರ ಪಡೆದಿದೆ.

Vijaya Karnataka Web 15 Jan 2020, 9:09 am
ರಾಜ್‌ಕೋಟ್‌: ರವಿಕುಮಾರ್‌ ಸಮರ್ಥ್‌, ದೇವದತ್‌ ಪಡಿಕ್ಕಲ್‌ ಮತ್ತು ರೋಹನ್‌ ಕದಂ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಕರ್ನಾಟಕ ತಂಡ ಆತಿಥೇಯ ಸೌರಾಷ್ಟ್ರ ವಿರುದ್ಧ ರಣಜಿ ಟೂರ್ನಿಯ 'ಎ' ಮತ್ತು 'ಬಿ' ಗುಂಪಿನ 5ನೇ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.
Vijaya Karnataka Web ದೇವದತ್ ಪಡಿಕ್ಕಲ್


ಇಲ್ಲಿನ ಮಾಧವ್‌ರಾವ್‌ ಸಿಂಧ್ಯಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ನಾಲ್ಕನೇ ಹಾಗೂ ಅಂತಿಮ ದಿನವಾದ ಮಂಗಳವಾರ ವಿಕೆಟ್‌ ನಷ್ಟವಿಲ್ಲದೆ 30 ರನ್‌ಗಳಿಂದ ದ್ವಿತೀಯ ಇನಿಂಗ್ಸ್‌ ಮುಂದುವರಿಧಿಸಿದ ಶ್ರೇಯಸ್‌ ಗೋಪಾಲ್‌ ಬಳಗ 89 ಓವರ್‌ಗಳಲ್ಲಿ 4 ವಿಕೆಟ್‌ಗೆ 220 ರನ್‌ ಗಳಿಸಿದ್ದ ವೇಳೆ ಉಭಯ ನಾಯಕರು ಪಂದ್ಯಕ್ಕೆ ಡ್ರಾ ಪರದೆ ಎಳೆಯಲು ತೀರ್ಮಾನಿಸಿದರು.

ಮೊದಲ ಇನಿಂಗ್ಸ್‌ ಮುನ್ನಡೆ ಆಧಾರದ ಮೇಲೆ ಸೌರಾಷ್ಟ್ರ ತಂಡ ಮೂರಂಕ ಗಿಟ್ಟಿಸಿದರೆ, ಕರ್ನಾಟಕ ಕೇವಲ ಒಂದಂಕಕ್ಕೆ ಸಮಾಧಾನ ಪಟ್ಟುಕೊಂಡಿತು. ಕರ್ನಾಟಕ ತಂಡ ಹಿಮಾಚಲ ಪ್ರದೇಶ ತಂಡದ ವಿರುದ್ಧ ಮೈಸೂರಿನಲ್ಲಿ ನಡೆದ ಪಂದ್ಯದಲ್ಲೂ ಇನಿಂಗ್ಸ್‌ ಹಿನ್ನಡೆಗೊಳಗಾಗಿ ಒಂದಂಕಕ್ಕೆ ಸೀಮಿತಗೊಂಡಿತ್ತು. ಸದ್ಯ ಆಡಿರುವ ಐದು ಪಂದ್ಯಗಳಲ್ಲಿ ಎರಡು ಗೆಲುವು, ಮೂರು ಡ್ರಾ ಮಾಡಿಕೊಂಡಿರುವ ಕರ್ನಾಟಕ ತಂಡ ಒಟ್ಟು 17 ಅಂಕ ಹೊಂದಿದ್ದರೆ, ಸೌರಾಷ್ಟ್ರ ತಂಡ ನಾಲ್ಕು ಪಂದ್ಯಗಳಿಂದ 16 ಅಂಕ ಸಂಪಾದಿಸಿದೆ.

ವಾಂಖೆಡೆಯಲ್ಲಿ ಮಕಾಡೆ ಮಲಗಿದ ಭಾರತ, ಆಸ್ಟ್ರೇಲಿಯಾಗೆ 10 ವಿಕೆಟ್‌ಗಳ ಭರ್ಜರಿ ಜಯ

ಸೌರಾಷ್ಟ್ರ ಪರ ಮೊದಲ ಇನಿಂಗ್ಸ್‌ನಲ್ಲಿ 248 ರನ್‌ ಪೇರಿಸಿದ್ದ ಪೂಜಾರ ಅರ್ಹವಾಗಿಯೇ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ತಂಡವನ್ನು ಸೋಲಿನಿಂದ ಪಾರು ಮಾಡುವ ಹೊಣೆಯೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ರೋಹನ್‌ ಮತ್ತು ಸಮರ್ಥ್‌ ಮೊದಲ ವಿಕೆಟ್‌ಗೆ 96 ರನ್‌ ಸೇರಿಸಿದರು. ರೋಹನ್‌ 42 ರನ್‌ ಗಳಿಸಿದ್ದ ವೇಳೆ ಮಕ್ವಾನ ಬೌಲಿಂಗ್‌ನಲ್ಲಿ ಹಾರ್ವಿಕ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಬಳಿಕ ದೇವದತ್‌ ಪಡಿಕ್ಕಲ್‌ ಜತೆ 24 ರನ್‌ ಜತೆಯಾಟವಾಡಿದ ಸಮರ್ಥ್‌, 74 ರನ್‌ ಕಲೆಹಾಕಿ ಔಟಾದರು. ಅದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಕೆ. ಸಿದ್ದಾರ್ಥ್‌ ಮತ್ತು ಪವನ್‌ ದೇಶಪಾಂಡೆ ಅಲ್ಪ ಮೊತ್ತಕ್ಕೆ ಕುಸಿದರು. ಆದರೆ, ಆ ನಂತರ ನಾಯಕ ಶ್ರೇಯಸ್‌ (13*) ಮತ್ತು ದೇವದತ್‌ ಪಡಿಕ್ಕಲ್‌ (53*) ಮುರಿಯದ 5ನೇ ವಿಕೆಟ್‌ಗೆ 52 ರನ್‌ ಕಲೆಹಾಕಿ ಇನಿಂಗ್ಸ್‌ ಬೆಳೆಸುವ ಸುಳಿವು ನೀಡಿದ ಕಾರಣ ಉಭಯ ನಾಯಕರು ‘ಬಿಳಿ ಬಾವುಟ’ ಹಾರಿಸಲು ನಿರ್ಧರಿಸಿದರು.

ಆಸೀಸ್‌ ವಿರುದ್ಧದ ಹೀನಾಯ ಸೋಲಿಗೆ ಕಾರಣ ಕೊಟ್ಟ ಕ್ಯಾಪ್ಟನ್‌ ಕೊಹ್ಲಿ

ಸಂಕ್ಷಿಪ್ತ ಸ್ಕೋರ್ ಪಟ್ಟಿ:

ಸೌರಾಷ್ಟ್ರ ಮೊದಲ ಇನಿಂಗ್ಸ್‌:
7 ವಿಕೆಟ್‌ಗೆ 581 ಡಿಕ್ಲೇರ್ಡ್‌.

ಕರ್ನಾಟಕ ಮೊದಲ ಇನಿಂಗ್ಸ್‌:
171 ಮತ್ತು ದ್ವಿತೀಯ ಇನಿಂಗ್ಸ್‌ 89 ಓವರ್‌ ಗಳಲ್ಲಿ 4 ವಿಕೆಟ್‌ಗೆ 220 ( ಸಮರ್ಥ್‌ 74, ಪಡಿಕ್ಕಲ್‌ 53*, ಕದಂ 42, ಕೆ. ಸಿದಾಟಛಿರ್ಥ್‌ 19; ಧರ್ಮೇಂದ್ರ ಸಿನ್ಹಾ 97ಕ್ಕೆ 2).

ಕರ್ನಾಟಕದ ಮುಂದಿನ ಪಂದ್ಯ: ರೈಲ್ವೇಸ್‌ ವಿರುದ್ಧ
ಯಾವಾಗ: ಜನವರಿ 27ರಿಂದ 30 ಎಲ್ಲಿ : ದಿಲ್ಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌