ಸತತ 2ನೇ ಸೋಲಿಗೆ ತುತ್ತಾದ ಕರ್ನಾಟಕ
ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಯ ಸೂಪರ್ ಲೀಗ್ ಎ ಗುಂಪಿನ ಹಂತದಲ್ಲಿ ಕರ್ನಾಟಕ ತಂಡವು ಸತತ ಎರಡನೇ ಸೋಲಿಗೆ ಗುರಿಯಾಗಿದೆ.
Vijaya Karnataka Web 23 Jan 2018, 5:05 pm
ಕೋಲ್ಕೊತಾ: ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟ್ರೋಫಿಯ ಸೂಪರ್ ಲೀಗ್ ಎ ಗುಂಪಿನ ಹಂತದಲ್ಲಿ ಕರ್ನಾಟಕ ತಂಡವು ಸತತ ಎರಡನೇ ಸೋಲಿಗೆ ಗುರಿಯಾಗಿದೆ.
ಪಂಜಾಬ್ ವಿರುದ್ಧದ ಮೊದಲ ಟೈ ಪಂದ್ಯದಲ್ಲಿ ಸೂಪರ್ ಓವರ್ ಸೋಲು ಅನುಭವಿಸಿರುವ ಕರ್ನಾಟಕ ಇದೀಗ ರಾಜಸ್ತಾನ ವಿರುದ್ಧ 22 ರನ್ಗಳ ಅಂತರದ ಪರಾಭವಕ್ಕೆ ಒಳಗಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ತಾನ ಆರಂಭಿಕ ಅಂಕಿತ್ ಲಾಂಬಾ (58) ಸಮಯೋಚಿತ ಅರ್ಧಶತಕದ ನೆರವಿನೊಂದಿಗೆ ನಿಗದಿತ 20 ಓವರ್ಗಳಲ್ಲಿ ಎಂಟು ವಿಕೆಟುಗಳ ನಷ್ಟಕ್ಕೆ 160 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.
47 ಎಸೆತಗಳನ್ನು ಎದುರಿಸಿರುವ ಲಾಂಬಾ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದ್ದರು. ಕರ್ನಾಟಕ ಪರ ಅರವಿಂದ್ ಮೂರು ಹಾಗೂ ನಾಯಕ ವಿನಯ್ ಕುಮಾರ್ ಎರಡು ವಿಕೆಟುಗಳನ್ನು ಕಬಳಿಸಿದ್ದರು.
ಬಳಿಕ ರನ್ ಬೆನ್ನತ್ತಿದ್ದ ಕರ್ನಾಟಕ 5.2 ಓವರ್ಗಳಲ್ಲೇ 25 ರನ್ ಗಳಿಸುವಷ್ಟರಲ್ಲಿ ಅರ್ಧ ತಂಡವು ಪೆವಿಲಿಯನ್ಗೆ ಸೇರಿಕೊಂಡಿತು. ಅಷ್ಟೇ ಯಾಕೆ 15.5 ಓವರ್ಗಳಲ್ಲಿ 85 ರನ್ ಗಳಿಸುವುದರಲ್ಲಿ ಒಂಬತ್ತು ವಿಕೆಟುಗಳನ್ನು ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು.
ಈ ವೇಳೆಯಲ್ಲಿ ಬಿರುಸಿನ ಅರ್ಧಶತಕ ಬಾರಿಸಿದ ಅನಿರುದ್ಧ ಜೋಶಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸುವ ಮೂಲಕ ತಂಡವನ್ನು ಹೀನಾಯ ಸೋಲಿನ ಮುಜುಗರದಿಂದ ತಪ್ಪಿಸಿದರು.
ಅಂತಿಮ ವಿಕೆಟ್ಗೆ ಅರವಿಂದ್ ಜತೆ 53 ರನ್ಗಳ ಜತೆಯಾಟ ನೀಡಿದ ಜೋಶಿ 45 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ಗಳಿಂದ 73 ರನ್ ಗಳಿಸಿ ಅಜೇಯರಾಗುಳಿದರು.
ಅಂತಿಮವಾಗಿ 138 ರನ್ಗಳಿಗೆ ಸರ್ವಪತನವನ್ನು ಕಂಡಿತ್ತು. ರಾಜಸ್ತಾನ ಪರ ಐದು ವಿಕೆಟುಗಳನ್ನು ಕಬಳಿಸಿದ ದೀಪಕ್ ಚಹರ್, ಕರ್ನಾಟಕದ ಬೆನ್ನಲುಬನ್ನು ಮುರಿದರು. ಒಟ್ಟಿನಲ್ಲಿ ಸತತ ಎರಡನೇ ಸೋಲಿಗೆ ಗುರಿಯಾಗಿರುವ ಕರ್ನಾಟಕ, ಅಂಕಪಟ್ಟಿಯಲ್ಲಿ ಇನ್ನಷ್ಟೇ ಖಾತೆ ತೆರೆಯಬೇಕಿದೆ.
ಪಂಜಾಬ್ ವಿರುದ್ಧದ ಮೊದಲ ಟೈ ಪಂದ್ಯದಲ್ಲಿ ಸೂಪರ್ ಓವರ್ ಸೋಲು ಅನುಭವಿಸಿರುವ ಕರ್ನಾಟಕ ಇದೀಗ ರಾಜಸ್ತಾನ ವಿರುದ್ಧ 22 ರನ್ಗಳ ಅಂತರದ ಪರಾಭವಕ್ಕೆ ಒಳಗಾಗಿದೆ.
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ತಾನ ಆರಂಭಿಕ ಅಂಕಿತ್ ಲಾಂಬಾ (58) ಸಮಯೋಚಿತ ಅರ್ಧಶತಕದ ನೆರವಿನೊಂದಿಗೆ ನಿಗದಿತ 20 ಓವರ್ಗಳಲ್ಲಿ ಎಂಟು ವಿಕೆಟುಗಳ ನಷ್ಟಕ್ಕೆ 160 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.
47 ಎಸೆತಗಳನ್ನು ಎದುರಿಸಿರುವ ಲಾಂಬಾ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 58 ರನ್ ಗಳಿಸಿದ್ದರು. ಕರ್ನಾಟಕ ಪರ ಅರವಿಂದ್ ಮೂರು ಹಾಗೂ ನಾಯಕ ವಿನಯ್ ಕುಮಾರ್ ಎರಡು ವಿಕೆಟುಗಳನ್ನು ಕಬಳಿಸಿದ್ದರು.
ಬಳಿಕ ರನ್ ಬೆನ್ನತ್ತಿದ್ದ ಕರ್ನಾಟಕ 5.2 ಓವರ್ಗಳಲ್ಲೇ 25 ರನ್ ಗಳಿಸುವಷ್ಟರಲ್ಲಿ ಅರ್ಧ ತಂಡವು ಪೆವಿಲಿಯನ್ಗೆ ಸೇರಿಕೊಂಡಿತು. ಅಷ್ಟೇ ಯಾಕೆ 15.5 ಓವರ್ಗಳಲ್ಲಿ 85 ರನ್ ಗಳಿಸುವುದರಲ್ಲಿ ಒಂಬತ್ತು ವಿಕೆಟುಗಳನ್ನು ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು.
ಈ ವೇಳೆಯಲ್ಲಿ ಬಿರುಸಿನ ಅರ್ಧಶತಕ ಬಾರಿಸಿದ ಅನಿರುದ್ಧ ಜೋಶಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸುವ ಮೂಲಕ ತಂಡವನ್ನು ಹೀನಾಯ ಸೋಲಿನ ಮುಜುಗರದಿಂದ ತಪ್ಪಿಸಿದರು.
ಅಂತಿಮ ವಿಕೆಟ್ಗೆ ಅರವಿಂದ್ ಜತೆ 53 ರನ್ಗಳ ಜತೆಯಾಟ ನೀಡಿದ ಜೋಶಿ 45 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ಗಳಿಂದ 73 ರನ್ ಗಳಿಸಿ ಅಜೇಯರಾಗುಳಿದರು.
ಅಂತಿಮವಾಗಿ 138 ರನ್ಗಳಿಗೆ ಸರ್ವಪತನವನ್ನು ಕಂಡಿತ್ತು. ರಾಜಸ್ತಾನ ಪರ ಐದು ವಿಕೆಟುಗಳನ್ನು ಕಬಳಿಸಿದ ದೀಪಕ್ ಚಹರ್, ಕರ್ನಾಟಕದ ಬೆನ್ನಲುಬನ್ನು ಮುರಿದರು. ಒಟ್ಟಿನಲ್ಲಿ ಸತತ ಎರಡನೇ ಸೋಲಿಗೆ ಗುರಿಯಾಗಿರುವ ಕರ್ನಾಟಕ, ಅಂಕಪಟ್ಟಿಯಲ್ಲಿ ಇನ್ನಷ್ಟೇ ಖಾತೆ ತೆರೆಯಬೇಕಿದೆ.