ಆ್ಯಪ್ನಗರ

ಸುಚಿತ್ ದಾಳಿಗೆ ಮಹಾ ಉಡೀಸ್; ಇನ್ನಿಂಗ್ಸ್ ಮುನ್ನಡೆಯತ್ತ ಕರ್ನಾಟಕ

ಮೈಸೂರಿನಲ್ಲಿ ಮಾರಕ ದಾಳಿ ಸಂಘಟಿಸಿದ ಲೋಕಲ್ ಬಾಯ್ ಸುಚಿತ್

Vijaya Karnataka Web 28 Nov 2018, 6:01 pm
ಮೈಸೂರು: ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಎಲೈಟ್ ಗುಂಪು 'ಎ' ಹಂತದ ಪಂದ್ಯದಲ್ಲಿ ಲೋಕಲ್ ಬಾಯ್ ಜಗದೀಶ ಸುಚಿತ್ ದಾಳಿಗೆ (26ಕ್ಕೆ 4) ತತ್ತರಿಸಿರುವ ಮಹಾರಾಷ್ಟ್ರ 39.4 ಓವರ್‌ಗಳಲ್ಲೇ 113 ರನ್‌ಗಳಿಗೆ ಸರ್ವಪತನವನ್ನು ಕಂಡಿದೆ.
Vijaya Karnataka Web stumps-01


ಬಳಿಕ ಉತ್ತರ ನೀಡಿರುವ ಕರ್ನಾಟಕ ಮೊದಲ ದಿನದಂತ್ಯಕ್ಕೆ 40 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ. ಅಲ್ಲದೆ ಇನ್ನಿಂಗ್ಸ್ ಮುನ್ನಡೆಗಿನ್ನು 43 ರನ್‌ ಮಾತ್ರ ಬೇಕಾಗಿದೆ. ಕ್ರೀಸಿನಲ್ಲಿರುವ ನಿಶ್ಚಲ್ (32*) ಹಾಗೂ ಸುಚಿತ್ (2*) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಈ ಮೊದಲು ಮಾರಕ ದಾಳಿ ಸಂಘಟಿಸಿದ ಸುಚಿತ್, ಮಹಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ಕೇವಲ ಎಂಟು ಓವರ್‌ಗಳಲ್ಲಿ 26 ರನ್ ತೆತ್ತ ಸುಚಿತ್ ನಾಲ್ಕು ವಿಕೆಟುಗಳನ್ನು ಕಬಳಿಸಿ ಮಿಂಚಿದರು. ಇದರಲ್ಲಿ ಒಂದು ಮೇಡನ್ ಓವರ್ ಸಹ ಸೇರಿತ್ತು.

ಗಾಯದಿಂದ ಮುಕ್ತಗೊಂಡು ತಂಡವನ್ನು ಮುನ್ನಡೆಸುತ್ತಿರುವ ನಾಯಕ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಹಾಗೂ ಮೋರೆ ತಲಾ ಎರಡು ವಿಕೆಟುಗಳನ್ನು ಹಂಚಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌