ಆ್ಯಪ್ನಗರ

ರಾಬಿನ್ ಉತ್ತಪ್ಪಗೆ ಕೇರಳ ಗಾಳ?

ಕರ್ನಾಟಕದ ಭರವಸೆಯ ದಾಂಡಿಗ ರಾಬಿನ್ ಉತ್ತಪ್ಪ ಅವರಿಗೆ ಕೇರಳ ಕ್ರಿಕೆಟ್ ಸಂಸ್ಥೆ ಗಾಳ ಬೀಸಿದ್ದು, ಮುಂದಿನ ರಣಜಿ ಋತುವಿನಲ್ಲಿ ಕೇರಳ ಪರ ಆಡುವಂತೆ ಕೇಳಿಕೊಳ್ಳಲಾಗಿದೆ ಎಂಬುದು ವರದಿಯಾಗಿದೆ.

ಏಜೆನ್ಸೀಸ್ 10 May 2017, 4:32 pm
ಬೆಂಗಳೂರು: ಕರ್ನಾಟಕದ ಭರವಸೆಯ ದಾಂಡಿಗ ರಾಬಿನ್ ಉತ್ತಪ್ಪ ಅವರಿಗೆ ಕೇರಳ ಕ್ರಿಕೆಟ್ ಸಂಸ್ಥೆ ಗಾಳ ಬೀಸಿದ್ದು, ಮುಂದಿನ ರಣಜಿ ಋತುವಿನಲ್ಲಿ ಕೇರಳ ಪರ ಆಡುವಂತೆ ಕೇಳಿಕೊಳ್ಳಲಾಗಿದೆ ಎಂಬುದು ವರದಿಯಾಗಿದೆ.
Vijaya Karnataka Web kca on talks with robin uthappa
ರಾಬಿನ್ ಉತ್ತಪ್ಪಗೆ ಕೇರಳ ಗಾಳ?


ಈ ಸಂಬಂಧ ರಾಬಿನ್ ಉತ್ತಪ್ಪ ಜೊತೆಗೆ ಕೇರಳ ಕ್ರಿಕೆಟ್ ಸಂಸ್ಥೆಯ ಪ್ರಾಥಮಿಕ ಹಂತದ ಮಾತುಕತೆಯನ್ನು ಆರಂಭಿಸಿದೆ ಎಂಬುದು ತಿಳಿದು ಬಂದಿದೆ.

ಬಲ್ಲ ಮೂಲಗಳ ಪ್ರಕಾರ ಕಳೆದ ರಣಜಿ ಋತುವಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಉತ್ತಪ್ಪ ಅವರನ್ನು ಮಧ್ಯಂತರ ಅವಧಿಯಿಂದ ತಂಡದಿಂದ ಕೈಬಿಟ್ಟಿತ್ತು. ಇದರಿಂದ ಉತ್ತಪ್ಪ ಮುನಿಸಿಕೊಂಡಿದ್ದರು.

31ರ ಹರೆಯದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಉತ್ತಪ್ಪ, ಪ್ರಸ್ತುತ ಸಾಗುತ್ತಿರುವ ಐಪಿಎಲ್ 10ರ ಆವೃತ್ತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌