ಮುಂಬಯಿ: 2018 ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಬಹುನಿರೀಕ್ಷಿತ ಏಕದಿನ ಟೂರ್ನಿಗಾಗಿನ 17 ಸದಸ್ಯರ ಟೀಮ್ ಇಂಡಿಯಾವನ್ನು ಘೋಷಿಸಲಾಗಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಶನಿವಾರದಂದು ತಂಡದ ಘೋಷಣೆಯನ್ನು ಮಾಡಿದ್ದು, ನಾಯಕ ವಿರಾಟ್ ಕೊಹ್ಲಿ ಜತೆಗೆ ಕೇದರ್ ಜಾಧವ್ ಮತ್ತು ಶಾರ್ದೂಲ್ ಠಾಕೂರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಇದರೊಂದಿಗೆ 'ಯೊ-ಯೊ' ಫಿಟ್ನೆಸ್ ಟೆಸ್ಟ್ ತೇರ್ಗಡೆ ಹೊಂದಿರುವ ಹೊರತಾಗಿಯೂ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರನ್ನು ಕಡೆಗಣಿಸಲಿದೆ.
ಜನವರಿ ತಿಂಗಳಲ್ಲಿ ನಡೆಯಲಿರುವ ಹೈ ವೋಲ್ಟೇಜ್ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ನಡೆಯಲಿದೆ. ಅಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ರೋಹಿತ್ ಮತ್ತೆ ಉಪನಾಯಕನಾಗಲಿದ್ದಾರೆ.
The All India Senior Selection Committee met in Mumbai to select the Indian team for the 6-match ODI series against South Africa #TeamIndia pic.twitter.com/szbbC6l3MU — BCCI (@BCCI) December 23, 2017 ಅತ್ತ ಸ್ಪಿನ್ ಅಸ್ತ್ರಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಮಗದೊಮ್ಮೆ ಕಡೆಗಣಿಸಲಾಗಿದೆ. ಇದರೊಂದಿಗೆ ಯುವ ಸ್ಪಿನ್ ಜೋಡಿಗಳಾದ ಕುಲ್ದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ಗೆ ಮಣೆ ಹಾಕಲಾಗಿದೆ. ಇವರಿಗೆ ಅಕ್ಷರ್ ಪಟೇಲ್ ಸಾಥ್ ನೀಡಲಿದ್ದಾರೆ.
ಇನ್ನು ಬಲಗೈ ವೇಗಿ ಮೊಹಮ್ಮದ್ ಶಮಿ ಸಹ ಏಕದಿನ ತಂಡಕ್ಕೆ ವಾಪಾಸಾಗಿದ್ದಾರೆ. ಹಾಗೆಯೇ ಶ್ರೀಲಂಕಾ ವಿರುದ್ಧ ಇದೀಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಕಾ ಸರಣಿಯ ವೇಳೆ ಸ್ನಾಯು ಸೆಳೆತಕ್ಕೊಳಗಾಗಿರುವ ಕೇದರ್ ಜಾಧವ್ ಮತ್ತೆ ಸೇರ್ಪಡೆಯಾಗಿದ್ದಾರೆ. ಅತ್ತ ಸಿದ್ಧಾರ್ಥ್ ಕೌಲ್ ಜಾಗಕ್ಕೆ ಶಾರ್ದೂಲ್ ಆಯ್ಕೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಮ್ ಇಂಡಿಯಾ ಡಿಸೆಂಬರ್ 26ರಂದು ಪ್ರಯಾಣ ಬೆಳೆಸಲಿದೆ. ಇದರಂತೆ ಇಷ್ಟು ಬೇಗ ತಂಡವನ್ನು ಘೋಷಿಸಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಅಂದ ಹಾಗೆ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ.
ಟೀಮ್ ಇಂಡಿಯಾ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ)
ರೋಹಿತ್ ಶರ್ಮಾ (ಉಪನಾಯಕ),
ಶಿಖರ್ ಧವನ್,
ಅಜಿಂಕ್ಯ ರಹಾನೆ,
ಶ್ರೇಯಸ್ ಅಯ್ಯರ್,
ಮನೀಷ್ ಪಾಂಡೆ,
ಕೇದರ್ ಜಾಧವ್,
ದಿನೇಶ್ ಕಾರ್ತಿಕ್,
ಎಂಎಸ್ ಧೋನಿ (ವಿಕೆಟ್ ಕೀಪರ್),
ಹಾರ್ದಿಕ್ ಪಾಂಡ್ಯ,
ಅಕ್ಷರ್ ಪಟೇಲ್,
ಕುಲ್ದೀಪ್ ಯಾದವ್,
ಯಜುವೇಂದ್ರ ಚಹಲ್,
ಭುವನೇಶ್ವರ್ ಕುಮಾರ್,
ಜಸ್ಪ್ರೀತ್ ಬುಮ್ರಾ,
ಮೊಹಮ್ಮದ್ ಶಮಿ,
ಶಾರ್ದೂಲ್ ಠಾಕೂರ್
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿಯು ಶನಿವಾರದಂದು ತಂಡದ ಘೋಷಣೆಯನ್ನು ಮಾಡಿದ್ದು, ನಾಯಕ ವಿರಾಟ್ ಕೊಹ್ಲಿ ಜತೆಗೆ ಕೇದರ್ ಜಾಧವ್ ಮತ್ತು ಶಾರ್ದೂಲ್ ಠಾಕೂರ್ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ.
ಇದರೊಂದಿಗೆ 'ಯೊ-ಯೊ' ಫಿಟ್ನೆಸ್ ಟೆಸ್ಟ್ ತೇರ್ಗಡೆ ಹೊಂದಿರುವ ಹೊರತಾಗಿಯೂ ಅನುಭವಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಸುರೇಶ್ ರೈನಾ ಅವರನ್ನು ಕಡೆಗಣಿಸಲಿದೆ.
ಜನವರಿ ತಿಂಗಳಲ್ಲಿ ನಡೆಯಲಿರುವ ಹೈ ವೋಲ್ಟೇಜ್ ಟೆಸ್ಟ್ ಸರಣಿಯ ಬಳಿಕ ಏಕದಿನ ಸರಣಿ ನಡೆಯಲಿದೆ. ಅಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇದರೊಂದಿಗೆ ರೋಹಿತ್ ಮತ್ತೆ ಉಪನಾಯಕನಾಗಲಿದ್ದಾರೆ.
The All India Senior Selection Committee met in Mumbai to select the Indian team for the 6-match ODI series against South Africa #TeamIndia pic.twitter.com/szbbC6l3MU — BCCI (@BCCI) December 23, 2017 ಅತ್ತ ಸ್ಪಿನ್ ಅಸ್ತ್ರಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರನ್ನು ಮಗದೊಮ್ಮೆ ಕಡೆಗಣಿಸಲಾಗಿದೆ. ಇದರೊಂದಿಗೆ ಯುವ ಸ್ಪಿನ್ ಜೋಡಿಗಳಾದ ಕುಲ್ದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ಗೆ ಮಣೆ ಹಾಕಲಾಗಿದೆ. ಇವರಿಗೆ ಅಕ್ಷರ್ ಪಟೇಲ್ ಸಾಥ್ ನೀಡಲಿದ್ದಾರೆ.
ಇನ್ನು ಬಲಗೈ ವೇಗಿ ಮೊಹಮ್ಮದ್ ಶಮಿ ಸಹ ಏಕದಿನ ತಂಡಕ್ಕೆ ವಾಪಾಸಾಗಿದ್ದಾರೆ. ಹಾಗೆಯೇ ಶ್ರೀಲಂಕಾ ವಿರುದ್ಧ ಇದೀಗಷ್ಟೇ ಅಂತ್ಯಗೊಂಡ ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಶ್ರೇಯಸ್ ಅಯ್ಯರ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಕಾ ಸರಣಿಯ ವೇಳೆ ಸ್ನಾಯು ಸೆಳೆತಕ್ಕೊಳಗಾಗಿರುವ ಕೇದರ್ ಜಾಧವ್ ಮತ್ತೆ ಸೇರ್ಪಡೆಯಾಗಿದ್ದಾರೆ. ಅತ್ತ ಸಿದ್ಧಾರ್ಥ್ ಕೌಲ್ ಜಾಗಕ್ಕೆ ಶಾರ್ದೂಲ್ ಆಯ್ಕೆಯಾಗಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಗಾಗಿ ಟೀಮ್ ಇಂಡಿಯಾ ಡಿಸೆಂಬರ್ 26ರಂದು ಪ್ರಯಾಣ ಬೆಳೆಸಲಿದೆ. ಇದರಂತೆ ಇಷ್ಟು ಬೇಗ ತಂಡವನ್ನು ಘೋಷಿಸಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಅಂದ ಹಾಗೆ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಲಿದೆ.
ಟೀಮ್ ಇಂಡಿಯಾ ಇಂತಿದೆ:
ವಿರಾಟ್ ಕೊಹ್ಲಿ (ನಾಯಕ)
ರೋಹಿತ್ ಶರ್ಮಾ (ಉಪನಾಯಕ),
ಶಿಖರ್ ಧವನ್,
ಅಜಿಂಕ್ಯ ರಹಾನೆ,
ಶ್ರೇಯಸ್ ಅಯ್ಯರ್,
ಮನೀಷ್ ಪಾಂಡೆ,
ಕೇದರ್ ಜಾಧವ್,
ದಿನೇಶ್ ಕಾರ್ತಿಕ್,
ಎಂಎಸ್ ಧೋನಿ (ವಿಕೆಟ್ ಕೀಪರ್),
ಹಾರ್ದಿಕ್ ಪಾಂಡ್ಯ,
ಅಕ್ಷರ್ ಪಟೇಲ್,
ಕುಲ್ದೀಪ್ ಯಾದವ್,
ಯಜುವೇಂದ್ರ ಚಹಲ್,
ಭುವನೇಶ್ವರ್ ಕುಮಾರ್,
ಜಸ್ಪ್ರೀತ್ ಬುಮ್ರಾ,
ಮೊಹಮ್ಮದ್ ಶಮಿ,
ಶಾರ್ದೂಲ್ ಠಾಕೂರ್