ಆ್ಯಪ್ನಗರ

ಇವತ್ತಿಲ್ಲದಿದ್ದರೆ ನಾಳೆ ಆಯ್ಕೆ ಮಾಡಲೇಬೇಕು: ರೈನಾ

ಭಾರತ ಕ್ರಿಕೆಟ್ ತಂಡದಿಂದ ಮಗದೊಮ್ಮೆ ಆಲ್‌ರೌಂಡರ್ ಸುರೇಶ್ ರೈನಾ ಅವರನ್ನು ಕಡೆಗಣಿಸಲಾಗಿದೆ. ಆದರೆ ಇದರಿಂದ ಮಾತ್ರ ರೈನಾ ಅವರ ಆತ್ಮವಿಶ್ವಾಸ ಕುಂದಿಲ್ಲ. ಮುಂದಿನ ದಿನಗಳಲ್ಲಿ ತಮ್ಮನ್ನು ಆಯ್ಕೆ ಮಾಡಲೇ ಬೇಕಾಗುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.

Times Now 28 Nov 2017, 5:19 pm
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದಿಂದ ಮಗದೊಮ್ಮೆ ಆಲ್‌ರೌಂಡರ್ ಸುರೇಶ್ ರೈನಾ ಅವರನ್ನು ಕಡೆಗಣಿಸಲಾಗಿದೆ. ಆದರೆ ಇದರಿಂದ ಮಾತ್ರ ರೈನಾ ಅವರ ಆತ್ಮವಿಶ್ವಾಸ ಕುಂದಿಲ್ಲ. ಮುಂದಿನ ದಿನಗಳಲ್ಲಿ ತಮ್ಮನ್ನು ಆಯ್ಕೆ ಮಾಡಲೇ ಬೇಕಾಗುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
Vijaya Karnataka Web khilana to padega says suresh raina despite being continuously snubbed by national selectors
ಇವತ್ತಿಲ್ಲದಿದ್ದರೆ ನಾಳೆ ಆಯ್ಕೆ ಮಾಡಲೇಬೇಕು: ರೈನಾ


ನಾನು ಟೀಮ್ ಇಂಡಿಯಾಕ್ಕೆ ಪುನರಾಗಮನ ಮಾಡಲಿದ್ದೇನೆ. ಎಲ್ಲರೂ ಕಮ್ ಬ್ಯಾಕ್ ಮಾಡಿಕೊಂಡಿದ್ದಾರೆ. ಯುವರಾಜ್ ಸಿಂಗ್ ಸಹ ಕಮ್ ಬ್ಯಾಕ್ ಮಾಡಿದ್ದಾರೆ. ಆಶಿಶ್ ನೆಹ್ರಾ ತಮ್ಮ 38ರ ಹರೆಯದಲ್ಲಿ ಆಡಿದ್ದಾರೆ. ಇವೆಲ್ಲವೂ ನನಗೆ ಸ್ಪೂರ್ತಿದಾಯಕವಾಗಿದೆ ಎಂದಿದ್ದಾರೆ.

ಇವತ್ತು ಅಲ್ಲದಿದ್ದರೆ ನಾಳೆ, ನಾಳೆ ಅಥವಾ ನಾಡಿದ್ದು, ಇದಲ್ಲದಿದ್ದರೆ 10 ದಿನಗಳ ಬಳಿಕ, ಇಲ್ಲವಾದ್ದಲ್ಲಿ 10 ತಿಂಗಳ ಬಳಿಕವಾದರೂ ಆಡಿಸಲೇಬೇಕು ಎಂದು ರೈನಾ ಸೇರಿಸಿದರು.

ಇದೀಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ರೈನಾ ಅವರಿಗೆ ಯೊ-ಯೊ ಟೆಸ್ಟ್ ಮುಳುವಾಗಿದೆ ಎಂಬ ವಾದ ಹಬ್ಬಿದೆ. ಯೊ-ಯೊ ಫಿಟ್ನೆಸ್ ಸ್ಪರ್ಧೆಯಲ್ಲಿ ರೈನಾ ತೇರ್ಗಡೆ ಹೊಂದಿಲ್ಲ. ಇದರಿಂದ ಆಯ್ಕೆಯಾಗಿಲ್ಲ. ಆದರೆ ಅಭಿಮಾನಿಗಳಿಂದ ಮಾತ್ರ ರೈನಾ ಹಾಗೂ ಯುವಿ ಅವರನ್ನು ಆಯ್ಕೆ ಮಾಡದಿರುವುದಕ್ಕೆ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌