ಆ್ಯಪ್ನಗರ

IPL 2020: ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ತಮ್ಮ ಕೈಬಿಟ್ಟಿದ್ದಕ್ಕೆ ಕಾರಣ ಕೊಟ್ಟ ಅಶ್ವಿನ್‌!

ಹದಿಮೂರನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ಸಲುವಾಗಿ ಕಿಂಗ್ಸ್‌ ಇಲೆವೆನ್‌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ವರ್ಗಾವಣೆಯನ್ನು ತಾವು ಬಯಸಿರಲಿಲ್ಲ ಎಂದು ರವಿಚಂದ್ರನ್‌ ಅಶ್ವಿನ್‌ ಹೇಳಿದ್ದಾರೆ.

Vijaya Karnataka Web 5 Dec 2019, 6:37 pm
ಹೊಸದಿಲ್ಲಿ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ತಂಡದ ಸ್ಟಾರ್ ಬೌಲರ್‌ ಆಗೊರುವ ರವಿಚಂದ್ರನ್‌ ಅಶ್ವಿನ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕಡೆಗಣನೆಗೆ ಗುರಿಯಾಗಿದ್ದಾರೆ. ಅಂದಹಾಗೆ ಏಕದಿನ ಮತ್ತು ಟಿ20-ಐ ಮಾದರಿಗಳಲ್ಲಿ ಅಶ್ವಿನ್‌ ಸಾಧನೆ ಉತ್ತಮಾಗಿಯೇ ಇದೆ. ಆದರೆ, ಯುವ ಪ್ರತಿಭೆಗಳೊಟ್ಟಿಗಿನ ಪೈಪೋಟಿಯ ನಡುವೆ ಅಶ್ವಿನ್‌ ಹಿಂದೆ ಬಿದ್ದಿದ್ದಾರೆ.
Vijaya Karnataka Web R Ashwin kings xi punjab 2019


ಆದರೂ 2020ರ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಸುವ ಆತ್ಮವಿಶ್ವಾಸ ಕಳೆದುಕೊಳ್ಳದ ಅಶ್ವಿನ್‌, ಮಾಜಿ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌ 2014ರ ಟಿ20 ವಿಶ್ವಕಪ್‌ ಮತ್ತು 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾರತ ತಂಡಕ್ಕೆ ಕಮ್‌ ಬ್ಯಾಕ್‌ ಮಾಡಿದರೀತಿಯಲ್ಲಿ ತಾವೂ ಕೂಡ ತಂಡಕ್ಕೆ ಮರಳುವುದಾಗಿ ಹೇಳಿಕೊಂಡಿದ್ದಾರೆ.

"ವೈಟ್‌ ಬಾಲ್‌ ಮತ್ತು ಗಾಯದ ಸಮಸ್ಯಗಳಿಂದಾಗಿ ನನ್ನ ವೃತ್ತಿಪರ ಕ್ರಿಕೆಟ್ ಜೀವನದಲ್ಲಿ ಆಟವನ್ನು ಪರಿಪೂರ್ಣವಾಗಿ ಆಡಿದ ಅನುಭವವನ್ನೇ ನೀಡಿಲ್ಲ. ಇದರಿಂದ ಆಟದ ಮೇಲಿನ ಆಸಕ್ತಿ ಕ್ಷೀಣವಾಗುತ್ತಿದೆ. ಇದು ನನ್ನ ಪಾಲಿಗೆ ಸರಿಯಲ್ಲ. ಏಕೆಂದರೆ ಟಿವಿಯಲ್ಲಿ ಪಂದ್ಯ ವೀಕ್ಷಿಸುವುದು ನನ್ನಿಂದಾಗದು. ಆದರೀಗ ಎಲ್ಲಾ ಋಣಾತ್ಮಕ ಭಾವನೆಗಳು ದೂರವಾಗಿದೆ. ಟಿ20 ವಿಶ್ವಕಪ್‌ಗೆ ತಂಡದಲ್ಲಿ ಮರಳಿ ಸ್ಥಾನ ಪಡೆಯುವುದು ನನ್ನ ಗುರಿ. ಯುವರಾಜ್‌ ಸಿಂಗ್‌ ಕೂಡ ಇದೇ ರೀತಿ ಕಮ್‌ಬ್ಯಾಕ್‌ ಮಾಡಿ 2014 ಟಿ20 ಮತ್ತು 2017ರ ಚಾಂಪಿಯನ್ಸ್‌ ಟ್ರೋಫಿ ಆಡಿದರು. ನನಗಿನ್ನೂ 33 ವರ್ಷ ವಯಸ್ಸು ಅಷ್ಟೇ," ಎಂದು ಅಶ್ವಿನ್‌ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ವಿಂಡೀಸ್‌ ವಿರುದ್ಧದ ಹೈದರಾಬಾದ್‌ ಟಿ20 ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ XI ಹೀಗಿದೆ

ಕಿಂಗ್ಸ್‌ ಇಲೆವೆನ್‌ ಅಭಿಯಾನ ಅಂತ್ಯಕ್ಕೆ ಕಾರಣ ಕೊಟ್ಟ ಅಶ್ವಿನ್‌
ಇದೇ ವೇಳೆ ಐಪಿಎಲ್‌ನಲ್ಲಿ ಕಿಂಗ್ಸ್‌ ಇಲೆವೆನ್‌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ವರ್ಗಾವಣೆಯನ್ನು ತಾವು ಬಯಸಿರಲಿಲ್ಲ ಎಂದು ಅಶ್ವಿನ್‌ ಹೇಳಿದ್ದಾರೆ. "ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಪರ ನನ್ನ ಅಭಿಯಾನ ಅದ್ಭುತವಾಗಿತ್ತು ಎಂದೇ ಹೇಳಬಹುದು. ತಂಡದಲ್ಲಿ ಆಡಿದ ಅನುಭವ ನನಗೆ ಅದ್ಭುತ ಅನುಭವ ತಂದುಕೊಟ್ಟಿತ್ತು. ತಂಡದಲ್ಲಿ ನಾಯಕನ ಜವಾಬ್ದಾರಿ ನೀಡಲಾಗಿತ್ತು. ಈ ಮೂಲಕ ನಾಯಕನ ಜವಾಬ್ದಾರಿಯ ಹೊಸ ಅನುಭವ ಪಡೆದುಕೊಂಡೆ. ನನ್ನ ಪ್ರಕಾರ ನಾಯಕನಾಗಿ ಉತ್ತಮ ಕೆಲಸ ಮಾಡಿದ್ದೇನೆ. ಆದರೂ ವರ್ಗಾವಣೆ ನಿರ್ಧಾರ ಸಂಪೂರ್ಣವಾಗಿ ನನ್ನದಾಗಿರಲಿಲ್ಲ," ಎಂದು ಹೇಳಿದ್ದಾರೆ.

ಒತ್ತಡದ ನಡುವೆಯೂ ಧೋನಿ ದಾಖಲೆ ಮುರಿಯಲು ಸಜ್ಜಾದ ಪಂತ್‌!

"ಕಿಂಗ್ಸ್‌ ಇಲೆವೆನ್‌ ತಂಡದ ಮಾಲೀಕರಿಗೆ ನನ್ನ ಪ್ರದರ್ಶನ ನರೀಕ್ಷಿತ ಮಟ್ಟದ್ದಾಗಿರಲಿಲ್ಲ. ಏಕೆಂದರೆ ಟೂರ್ನಿಯಲ್ಲಿ ಪಂಜಾಬ್‌ ತಂಡವನ್ನು ಪ್ಲೇ ಆಫ್ಸ್‌ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಿರಲಿಲ್ಲ. ಇದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಆದರೆ, ನನ್ನ ಸ್ವಭಾವವೇನೆಂದರೆ ಎಲ್ಲದಕ್ಕೂ ಕಾರಾಣ ನಾನೇ, ನನ್ನಿಂದ ನಿರೀಕ್ಷಿತ ಫಲಿತಾಂಶ ನೀಡಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಹೀಗಾಗಿ ವರ್ಗಾವಣೆ ಪ್ರಕ್ರಿಯೆ ನಡೆದಿದೆ," ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ತಮ್ಮನ್ನು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ ಮಾರಾಟ ಮಾಡಲು ಅಸಲಿ ಕಾರಣವನ್ನು ಅನುಭವಿ ಆಫ್‌ ಸ್ಪಿನ್ನರ್‌ ಬಿಚ್ಚಿಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌