ಆ್ಯಪ್ನಗರ

ಆರ್‌ಬಿಐ ಉದ್ಯೋಗಿಯಾಗಿ ರಾಹುಲ್‌, ಉಮೇಶ್

ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌, ಕನ್ನಡಿಗ ಕೆ.ಎಲ್‌ ರಾಹುಲ್‌ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ಸಹಾಯಕ ಮ್ಯಾನೇಜರ್‌ ಆಗಿ ನೇಮಕಗೊಂಡಿದ್ದಾರೆ. ಇದೇ ವೇಳೆ ಟೀಮ್‌ ಇಂಡಿಯಾದ ವೇಗಿ ಉಮೇಶ್‌ ಯಾದವ್‌ ಕೂಡ ಆರ್‌ಬಿಐನಲ್ಲಿ ಇದೇ ಹುದ್ದೆ ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಆರ್‌ಬಿಐ ಶಾಖೆಯಲ್ಲಿ ರಾಹುಲ್‌ ಉದ್ಯೋಗ ಪಡೆದರೆ, ಉಮೇಶ್‌ ನಾಗ್ಪುರ ಶಾಖೆಯ ಉದ್ಯೋಗಿಯಾಗಿದ್ದಾರೆ.

ವಿಕ ಸುದ್ದಿಲೋಕ 19 Jul 2017, 5:42 pm

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌, ಕನ್ನಡಿಗ ಕೆ.ಎಲ್‌ ರಾಹುಲ್‌ ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ಸಹಾಯಕ ಮ್ಯಾನೇಜರ್‌ ಆಗಿ ನೇಮಕಗೊಂಡಿದ್ದಾರೆ.

Vijaya Karnataka Web kl rahul and umesh yadav now rbi officer
ಆರ್‌ಬಿಐ ಉದ್ಯೋಗಿಯಾಗಿ ರಾಹುಲ್‌, ಉಮೇಶ್


ಇದೇ ವೇಳೆ ಟೀಮ್‌ ಇಂಡಿಯಾದ ವೇಗಿ ಉಮೇಶ್‌ ಯಾದವ್‌ ಕೂಡ ಆರ್‌ಬಿಐನಲ್ಲಿ ಇದೇ ಹುದ್ದೆ ಪಡೆದಿದ್ದಾರೆ. ಬೆಂಗಳೂರಿನಲ್ಲಿರುವ ಆರ್‌ಬಿಐ ಶಾಖೆಯಲ್ಲಿ ರಾಹುಲ್‌ ಉದ್ಯೋಗ ಪಡೆದರೆ, ಉಮೇಶ್‌ ನಾಗ್ಪುರ ಶಾಖೆಯ ಉದ್ಯೋಗಿಯಾಗಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ತಂಡಗಳ ಸೇವೆಯಲ್ಲಿರದಿದ್ದಾಗ ಆರ್‌ಬಿಐನ ಪಂದ್ಯಗಳಿದ್ದರೆ ಈ ಆಟಗಾರರು ಆಡಬೇಕಾಗುತ್ತದೆ. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ತೆರಳುವ ಮುನ್ನವೇ ಉಮೇಶ್‌ ಯಾದವ್‌ ಈ ಕುರಿತು ಆರ್‌ಬಿಐ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು.

ಮಗನಿಗೆ ಸರ್ಕಾರಿ ಕೆಲಸ ಸಿಗಬೇಕೆಂಬುದು ಅಪ್ಪ ತಿಲಕ್ ಯಾದವ್ ದೀರ್ಘ ಕಾಲದ ಬಯಕೆಯಾಗಿತ್ತು. ಸರಿ ಸುಮರು ಒಂದು ದಶಕದ ಹಿಂದೆ ಪೊಲೀಸ್ ಪೇದೆ ಹುದ್ದೆಗೂ ಅರ್ಜಿ ಸಲ್ಲಿಸಿದರೂ ಕೆಲಸ ಲಭಿಸಲಿಲ್ಲ. ಈಗ ಪೊಲೀಸ್ ಪೇದೆಗಿಂತ ದೊಡ್ಡ ಮಟ್ಟಿನ ಕೆಲಸವನ್ನು ಗಿಟ್ಟಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌