ಆ್ಯಪ್ನಗರ

ಸೋಷಿಯಲ್‌ ಮೀಡಿಯಾದಲ್ಲಿ ಕೆಎಲ್‌ ರಾಹುಲ್‌ ಕಾಲೆಳೆದ ಶಿಖರ್‌ ಧವನ್‌!

ಕಿವೀಸ್‌ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿಗಳಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಕರ್ನಾಟಕದ ಬ್ಯಾಟ್ಸ್‌ಮನ್‌ ಕೆಎಲ್‌ ರಾಹುಲ್‌ ಅವರನ್ನು ಶಿಖರ್‌ ಧವನ್‌ ಗುಣಗಾನ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾ ಮೂಲಕ ಧವನ್‌ ತಮ್ಮ ಮೆಚ್ಚುಗೆ ಹೊರಹಾಕಿದ್ದಾರೆ.

Vijaya Karnataka Web 12 Feb 2020, 6:10 pm
ಮುಂಬೈ: ಭಾರತ ತಂಡದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌, ಟೀಮ್‌ ಇಂಡಿಯಾದ ಓಪನರ್‌ ಸ್ಥಾನಕ್ಕೆ ತಮ್ಮ ಪ್ರತಿಸ್ಪರ್ಧಿಯಾಗಿರುವ ಕೆಎಲ್‌ ರಾಹುಲ್‌ ಅವರ ಕಾಲೆಳೆದಿದ್ದಾರೆ.
Vijaya Karnataka Web shikhar dhawan and kl rahul 2020


ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೇಟಸ್‌ ಮೂಲಕ ಕೆಎಲ್‌ ರಾಹುಲ್‌ ಅವರ ಫೋಟೊ ಹಂಚಿಕೊಂಡಿರುವ ಶಿಖರ್‌ ಧವನ್‌, ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರಾಹುಲ್‌ ಅವರ ಶ್ರೇಷ್ಠ ಪ್ರದರ್ಶನವನ್ನು ಗುಣಗಾನ ಮಾಡಿದ್ದಾರೆ. ಜೊತೆಗೆ ರಾಹುಲ್‌ ಬ್ಯಾಟ್‌ ಬೀಸುತ್ತಿರುವ ಪರಿ ಕಂಡರೆ 12ನೇ ಆಟಗಾರನಾಗಿಯೂ ಶತಕ ಬಾರಿಸಬಲ್ಲರು ಎಂದು ತಮಾಷೆಯಿಂದ ಕಾಲೆಳೆದಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ 113 ಎಸೆತಗಳಲ್ಲಿ 112 ರನ್‌ಗಳ ಅಮೋಘ ಶತಕ ಬಾರಿಸಿದ ರಾಹುಲ್‌, ಈ ಮೂಲಕ ಮೂರು ಪಂದ್ಯಗಳ ಒಡಿಐ ಸರಣಿಯಲ್ಲಿ ಅಷ್ಟೇ ಇನಿಂಗ್ಸ್‌ಗಳಿಂದ ಒಟ್ಟು 204 ರನ್‌ಗಳನ್ನು ಗಳಿಸಿ ಗಮನ ಸೆಳೆದಿದ್ದರು.

ಐಸಿಸಿ ಏಕದಿನ ರ‍್ಯಾಂಕಿಂಗ್‌: ಕಳಪೆ ಪ್ರದರ್ಶನದಿಂದ ನಂ.1 ಪಟ್ಟ ಕಳೆದುಕೊಂಡ ಬುಮ್ರಾ!

"ಉತ್ತಮವಾಗಿ ಆಡಿ ಅದ್ಭುತ ಶತಕ ಬಾರಿಸಿದ್ದೀಯ ಬ್ರದರ್‌, ಮತ್ತಷ್ಟು ಬಲಿಷ್ಠ ಪ್ರದರ್ಶನಗಳು ನಿಮ್ಮಿಂದ ಮೂಡಿಬರಲಿ. ನೀವು ಬ್ಯಾಟಿಂಗ್‌ ಮಾಡುತ್ತಿರುವ ಪರಿ ಕಂಡರೆ 12ನೇ ಆಟಗಾರನಾಗಿ ಆಡುವ ಅವಕಾಶ ಪಡೆದರೂ ಶತಕ ಬಾರಿಸುತ್ತೀರ," ಎಂದು ಧವನ್‌ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್‌ ಶರ್ಮಾ ಅವರೊಟ್ಟಿಗೆ ಟೀಮ್‌ ಇಂಡಿಯಾ ಪರ ಇನಿಂಗ್ಸ್‌ ಆರಂಭಿಸಲು ರಾಹುಲ್‌ ಮತ್ತು ಧವನ್‌ ನಡುವೆ ಭಾರಿ ಪೈಪೋಟಿಯೇ ನಡೆದಿತ್ತು. ಆದರೆ ಇದೀಗ ಈ ಸಮಸ್ಯೆ ಬಗೆಹರಿದಂತಾಗಿದ್ದು, ಕೆಎಲ್‌ ರಾಹುಲ್‌ ಒಡಿಐನಲ್ಲಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿ 5ನೇ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಿ ಧವನ್‌ರ ಓಪನರ್‌ ಸ್ಥಾನಕ್ಕೆ ಸ್ಪರ್ಧೆ ಕಡಿಮೆಯಾಗಿದೆ.

ನಾಲ್ಕನೇ ಒಡಿಐ ಶತಕದೊಂದಿಗೆ ಕೆಎಲ್‌ ರಾಹುಲ್‌ ಬರೆದ ವಿಶೇಷ ದಾಖಲೆಗಳಿವು

ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ವೇಳೆ ಭುಜಕ್ಕ ಪೆಟ್ಟು ಮಾಡಿಕೊಂಡ ಧವನ್‌, ಕಿವೀಸ್‌ ಪ್ರವಾಸದಿಂದ ಸಂಪೂರ್ಣವಾಗಿ ಹೊರಗುಳಿಯುವಂತಾಯಿತು. ಧವನ್‌ ಸ್ಥಾನದಲ್ಲಿ ಕಿವೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಆರಂಭಿಕರಾಗಿ ಆಡಿದ್ದ ರಾಹುಲ್‌ ಬಲಿಷ್ಠ ಪ್ರದರ್ಶನ ನೀಡಿದ್ದರು. ಪರಿಣಾಮ ಐದು ಪಂದ್ಯಗಳ ಸರಣಿಯಲ್ಲಿ ಭಾರತ 5-0 ಅಂತರದ ವೈಟ್‌ವಾಷ್‌ ಗೆಲುವು ದಾಖಲಿಸಿತ್ತು. ಆದರೆ, ಏಕದಿನ ಸರಣಿಯಲ್ಲಿ 0-3 ಅಂತರದ ಮುಖಭಂಗಕ್ಕೊಳಗಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌