ಆ್ಯಪ್ನಗರ

ಮಳೆ ಕಾಟ; ಬೆಂಗಳೂರು-ಬಿಜಾಪುರ ನಡುವಣ ಪಂದ್ಯ ವಿಜೆಡಿ ವಿಧಾನದ ಅನ್ವಯ 'ಟೈ'

ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಮಳೆ ಬಾಧಿತ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬಿಜಾಪುರ ಬುಲ್ಸ್ ನಡುವಣ ಪಂದ್ಯವು ಟೈ ಫಲಿತಾಂಶದಲ್ಲಿ ಅಂತ್ಯ ಕಂಡಿದೆ. ಇದರಿಂದಾಗಿ ಅಭಿಮಾನಿಗಳು ನಿರಾಸೆ ಅನುಭವಿಸುವಂತಾಗಿದೆ.

Vijaya Karnataka Web 18 Aug 2019, 10:59 pm
ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾನುವಾರ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಬಿಜಾಪುರ ಬುಲ್ಸ್ ನಡುವಣ ಮಳೆ ಬಾಧಿತ ಪಂದ್ಯವು ಜಯದೇವನ್ (ವಿಜೆಡಿ) ವಿಧಾನದ ಅನ್ವಯ ರೋಚಕ 'ಟೈ' ಫಲಿತಾಂಶದಲ್ಲಿ ಅಂತ್ಯ ಕಂಡಿದೆ.
Vijaya Karnataka Web bengaluru-vs-bijapur


ಇದರೊಂದಿಗೆ ಆತಿಥೇಯ ಬೆಂಗಳೂರಿಗೆ ಮಳೆಯಿಂದಾಗಿ ಸತತ ಎರಡನೇ ಪಂದ್ಯ ನಷ್ಟವಾಗಿತ್ತು. ಈ ಮೊದಲು ಶುಕ್ರವಾರ ಮೈಸೂರು ವಾರಿಯರ್ಸ್ ವಿರುದ್ಧ ನಡೆಯಬೇಕಾಗಿದ್ದ ಪಂದ್ಯವು ಮಳೆಯಿಂದಾಗಿ ಒಂದು ಎಸೆತವೂ ಕಾಣದೇ ರದ್ದುಗೊಂಡಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗಿಳಿಸಲ್ಪಟ್ಟ ಕಳೆದ ಬಾರಿಯ ಚಾಂಪಿಯನ್ ಬಿಜಾಪುರ ಬುಲ್ಸ್ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 133 ರನ್ ಗಳಿಸಲಷ್ಟೇ ಶಕ್ತವಾಯಿತು.

ನಾಯಕ ಭರತ್ ಚಿಪ್ಲಿ 39 ಹಾಗೂ ಕೊನೆಯ ಹಂತದಲ್ಲಿ ಸ್ವಪ್ನಿಲ್ ಯಲಾವೆ (31*) ರನ್ ಗಳಿಸಿರುವುದನ್ನು ಬಿಟ್ಟರೆ ಇತರೆ ಯಾವ ಬ್ಯಾಟ್ಸ್‌ಮನ್‌ಗಳು ಹೋರಾಟ ಮನೋಭಾವ ತೋರಲೇ ಇಲ್ಲ.

25 ಎಸೆತಗಳನ್ನು ಎದುರಿಸಿದ ಚಿಪ್ಲಿ ಆರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 39 ರನ್ ಗಳಿಸಿದರು. ಇನ್ನೊಂದೆಡೆ 25 ಎಸೆತಗಳನ್ನು ಎದುರಿಸಿದ ಸ್ವಪ್ನಿಲ್ ಮೂರು ಬೌಂಡರಿಗಳಿಂದ 31 ರನ್ ಗಳಿಸಿ ಅಜೇಯರಾಗುಳಿದರು. ಬೆಂಗಳೂರು ಪರ ರೋಹನ್ ರಾಜು ಎರಡು ಮತ್ತು ಆನಂದ್ ದೊಡ್ಡಮಣಿ ಹಾಗೂ ಭರತ್ ದೇವರಾಜ್ ತಲಾ ಒಂದು ವಿಕೆಟನ್ನು ಹಂಚಿದರು.

ಬಳಿಕ ಗುರಿ ಬೆನ್ನಟ್ಟಿದ ಬೆಂಗಳೂರು ಐದು ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 29 ರನ್ ಗಳಿಸಿದ್ದ ಸಂದರ್ಭದಲ್ಲಿ ಮಳೆ ಸುರಿದಿದ್ದರಿಂದ ಪಂದ್ಯಕ್ಕೆ ಅಡಚಣೆಯಾಯಿತು. ಬಳಿಕ ಸತತ ಮಳೆ ಸುರಿದ ಪರಿಣಾಮ ಪಂದ್ಯ ಮುಂದುವರಿಸಲಾಗಲಿಲ್ಲ. ಪರಿಣಾಮ ವಿಜೆಡಿ ವಿಧಾನವನ್ನು ಆಳವಡಿಸಲಾಯಿತು. ಇದರಂತೆ ರೋಚಕ 'ಟೈ' ಫಲಿತಾಂಶದಲ್ಲಿ ಅಂತ್ಯಕಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌