ಆ್ಯಪ್ನಗರ

ಬ್ಲಾಸ್ಟರ್ಸ್‌ ಮತ್ತು ವಾರಿಯರ್ಸ್‌ ನಡುವೆ ಉದ್ಘಾಟನಾ ಕದನ

ಕರ್ನಾಟಕ ಪ್ರೀಮಿಯರ್ ಲೀಗ್‌ಗೆ ಆಗಸ್ಟ್ 16ರಂದು (ಇಂದು) ಭರ್ಜರಿ ಚಾಲನೆ ದೊರಕುತ್ತಿದ್ದು, ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಮೈಸೂರು ವಾರಿಯರ್ಸ್ ಸವಾಲನ್ನು ಎದುರಿಸುತ್ತಿದೆ.

Vijaya Karnataka Web 16 Aug 2019, 2:36 pm
ಬೆಂಗಳೂರು : ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌) ಎಂಟನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ ಅಪ್‌ ಬೆಂಗಳೂರು ಬ್ಲಾಸ್ಟರ್ಸ್‌ ಹಾಗೂ 2014ರ ಚಾಂಪಿಯನ್‌ ಮೈಸೂರು ವಾರಿಯರ್ಸ್‌ ತಂಡಗಳು ಮುಖಾಮುಖಿಯಾಗುತ್ತದೆ.
Vijaya Karnataka Web kpl-2019


ಶುಕ್ರವಾರ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಇತ್ತಂಡಗಳು ಗೆಲುವಿನೊಂದಿಗೆ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಬೆಂಗಳೂರು ಬ್ಲಾಸ್ಟರ್ಸ್‌, ಮೈಸೂರು ವಾರಿಯರ್ಸ್‌, ಹುಬ್ಬಳ್ಳಿ ಟೈಗರ್ಸ್‌, ಶಿವಮೊಗ್ಗ ಲಯನ್ಸ್‌, ಬಳ್ಳಾರಿ ಟಸ್ಕರ್ಸ್‌, ಬೆಳಗಾವಿ ಪ್ಯಾಂಥರ್ಸ್‌ ಮತ್ತು ಕಳೆದ ಬಾರಿಯ ಚಾಂಪಿಯನ್‌ ಬಿಜಾಪುರ ಬುಲ್ಸ್‌ ತಂಡ ಸೇರಿದಂತೆ ಒಟ್ಟು ಏಳು ತಂಡಗಳು ಪ್ರಶಸ್ತಿಗಾಗಿ ಹೋರಾಟ ನಡೆಸಲಿವೆ.

ಬೆಂಗಳೂರು ತಂಡ ಇಂತಿದೆ:

ಕೌಶಿಕ್ ವಿ, ನಾಗ ಭರತ್, ನಿಶಾಂತ್ ಸಿಂಗ್ ಶೇಖಾವ್, ರೋಹನ್ ಕದಮ್, ಜೋನಾಥನ್ ಆರ್, ಶರತ್ ಬಿಆರ್, ಭರತ್ ಧುರಿ, ಭರತ್ ಡಿ, ಮುತ್ತಣ್ಣ ಚಂದ್ರಶೇಖರ್, ಅನಿಲ್ ಐಜಿ, ಕಿಶೋರ್ ಕಾಮತ್, ಆನಂದ್ ದೊಡ್ಡಮಣಿ, ಕುಲ್‌ದೀಪ್ ಕುಮಾರ್, ಅನುರಾಗ್ ಬಜ್‌ಪಾಯಿ, ರಿಶಿ ಬೋಪಣ್ಣ, ನಿಕಿನ್ ಜೋಸ್, ಆದಿತ್ಯ ಗೋಯಲ್ ಮತ್ತು ಮನೋಜ್ ಭಂಡಾಜ್.

ಮೈಸೂರು ವಾರಿಯರ್ಸ್:
ಸುಚಿತ್ ಜೆ, ಸೌರಭ್ ಯಾದವ್, ವೈಶಾಖ್ ವಿಜಯ್ ಕುಮಾರ್, ಮಂಜೇಶ್ ರೆಡ್ಡಿ ಎನ್‌ವಿ, ಸಿದ್ದಾರ್ಥ್ ಕೆವಿ, ಸಂಕಲ್ಪ್ ಶೆಟ್ಟಿನವರ್, ಅಮಿತ್ ವೆರ್ಮಾ, ಬಿಯು ಶಿವಕುಮಾರ್, ಅನಿರುದ್ಧ ಜೋಶಿ, ರಾಮ್ ಸರಿಕ್ ಯಾದವ್, ಕುಶಾಲ್ ಎಂ ವಧ್ವಾನಿ, ಜಯೇಶ್ ಬಾಬು, ವಿನಯ್ ಎನ್ ಸಾಗರ್, ಕಿಶನ್ ಬಿದರೆ, ಶೋಯಿಬ್ ಮ್ಯಾನೇಜರ್, ವೆಂಕೆಟೇಶ್ ಎಂ, ದೇವಯ್ಯ ಕೆಎಸ್, ನಿಶ್ಚಲ್ ಡಿ.

ಶುಕ್ರವಾರ ಆರಂಭವಾಗಲಿರುವ ಲೀಗ್‌ನ ಮೊದಲ ಚರಣದಲ್ಲಿ ಒಟ್ಟು 15 ಪಂದ್ಯಗಳು ನಡೆಯಲಿದ್ದು, ಆ.25ರಿಂದ ಆ.31ರವರೆಗೆ ಮೈಸೂರಿನ ಎಸ್‌ಡಿಎನ್‌ಆರ್‌ ಒಡೆಯರ್‌ ಕ್ರೀಡಾಂಗಣದಲ್ಲಿ ಫೈನಲ್‌ ಸೇರಿದಂತೆ ಒಟ್ಟು 10 ಪಂದ್ಯಗಳು ನಿಗದಿಯಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌