ವಿನಯ್ ಬ್ಯಾಟಿಂಗ್ ಮಿಂಚು; ಬೆಂಗಳೂರು, ಮೈಸೂರು ಹೊರದಬ್ಬಿದ ಹುಬ್ಬಳ್ಳಿ ಟೈಗರ್ಸ್ ಪ್ಲೇ-ಆಫ್ಗೆ ಲಗ್ಗೆ!
ಕರ್ನಾಟಕ ಪ್ರೀಮಿಯರ್ ಲೀಗ್ನಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ದ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಹುಬ್ಬಳ್ಳಿ ಟೈಗರ್ಸ್ ಪ್ಲೇ-ಆಫ್ ಹಂತಕ್ಕೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಬೆಂಗಳೂರು ಜತೆಗೆ ಮೈಸೂರು ವಾರಿಯರ್ಸ್ ಕೂಟದಿಂದಲೇ ಹೊರಬಿದ್ದಿದೆ.
Vijaya Karnataka Web 27 Aug 2019, 10:18 pm
ಮೈಸೂರು: ಗೆಲ್ಲಲೇಬೇಕಾದ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದ ನಾಯಕ ವಿನಯ್ ಕುಮಾರ್ (81*) ಹಾಗೂ ಮೊಹಮ್ಮದ್ ತಾಹಾ (48) ಬಿರುಸಿನ ಆಟದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿರು ಹುಬ್ಬಳ್ಳಿ ಟೈಗರ್ಸ್, ಕರ್ನಾಟಕ ಪ್ರೀಮಿಯರ್ ಲೀಗ್ ಎಂಟನೇ ಆವೃತ್ತಿಯ ಟ್ವೆಂಟಿ-20 ಟೂರ್ನಿಯಲ್ಲಿ ಪ್ಲೇ-ಆಫ್ ಹಂತಕ್ಕೆ ಲಗ್ಗೆಯಿಟ್ಟಿದೆ.
ಇದರೊಂದಿಗೆ ಬೆಂಗಳೂರು ಜತೆಗೆ ಮೈಸೂರು ವಾರಿಯರ್ಸ್ ಕೂಟದಿಂದಲೇ ಹೊರನಡೆದಿದೆ. ಹುಬ್ಬಳ್ಳಿ ಆಡಿರುವ ಆರು ಪಂದ್ಯಗಳಲ್ಲಿ ತಲಾ ಮೂರು ಗೆಲುವು ಹಾಗೂ ಸೋಲಿನೊಂದಿಗೆ ಆರು ಅಂಕಗಳನ್ನು ಸಂಪಾದಿಸಿದೆ. ಮೈಸೂರು ವಾರಿಯರ್ಸ್ ಅಷ್ಟೇ ಅಂಕಗಳನ್ನು ಪಡೆದರೂ ರನ್ ರೇಟ್ ಆಧಾರದಲ್ಲಿ ಹಿಂದೆ ಬಿದ್ದ ಪರಿಣಾಮ ಹಿನ್ನಡೆ ಅನುಭವಿಸಿದೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟರ್ಸ್ ಒಂಬತ್ತು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಕೆಳ ಕ್ರಮಾಂಕದಲ್ಲಿ ಭರತ್ ಧುರಿ 42 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರು. ಹುಬ್ಬಳ್ಳಿ ಪರ ಡೇವಿಡ್ ಮ್ಯಾಥಿಯಸ್ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.
ಬಳಿಕ ಗುರಿ ಬೆನ್ನಟ್ಟಿದ ಹುಬ್ಬಳ್ಳಿಗೆ ನಾಯಕ ವಿನಯ್ ಕುಮಾರ್ ಹಾಗೂ ಮೊಹಮ್ಮದ್ ತಹಾ ದ್ವಿತೀಯ ವಿಕೆಟ್ಗೆ 105 ರನ್ಗಳ ಜತೆಯಾಟ ನೀಡಿದ ತಂಡದ ಗೆಲುವನ್ನು ಖಚಿತಪಡಿಸಿದರು.
ಈ ಪೈಕಿ 23 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದ ವಿನಯ್ ಕೊನೆಯ ವರೆಗೂ ಔಟಾಗದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಇನ್ನು 14 ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 51 ಎಸೆತಗಳನ್ನು ಎದುರಿಸಿದ ವಿನಯ್ 13 ಬೌಂಡರಿಗಳಿಂದ 81 ರನ್ ಗಳಿಸಿ ಅಜೇಯರಾಗುಳಿದರು.
ಒಟ್ಟಾರೆಯಾಗಿ ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್, ಶಿವಮೊಗ್ಗ ಲಯನ್ಸ್ ಜತೆಗೆ ಹುಬ್ಬಳ್ಳಿ ಟೈಗರ್ಸ್ ಪ್ಲೇ-ಆಫ್ ಹಂತವನ್ನು ಖಚಿತಪಡಿಸಿದೆ.
ಇದರೊಂದಿಗೆ ಬೆಂಗಳೂರು ಜತೆಗೆ ಮೈಸೂರು ವಾರಿಯರ್ಸ್ ಕೂಟದಿಂದಲೇ ಹೊರನಡೆದಿದೆ. ಹುಬ್ಬಳ್ಳಿ ಆಡಿರುವ ಆರು ಪಂದ್ಯಗಳಲ್ಲಿ ತಲಾ ಮೂರು ಗೆಲುವು ಹಾಗೂ ಸೋಲಿನೊಂದಿಗೆ ಆರು ಅಂಕಗಳನ್ನು ಸಂಪಾದಿಸಿದೆ. ಮೈಸೂರು ವಾರಿಯರ್ಸ್ ಅಷ್ಟೇ ಅಂಕಗಳನ್ನು ಪಡೆದರೂ ರನ್ ರೇಟ್ ಆಧಾರದಲ್ಲಿ ಹಿಂದೆ ಬಿದ್ದ ಪರಿಣಾಮ ಹಿನ್ನಡೆ ಅನುಭವಿಸಿದೆ.
ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರು ಬ್ಲಾಸ್ಟರ್ಸ್ ಒಂಬತ್ತು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತ್ತು. ಕೆಳ ಕ್ರಮಾಂಕದಲ್ಲಿ ಭರತ್ ಧುರಿ 42 ರನ್ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದ್ದರು. ಹುಬ್ಬಳ್ಳಿ ಪರ ಡೇವಿಡ್ ಮ್ಯಾಥಿಯಸ್ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.
ಬಳಿಕ ಗುರಿ ಬೆನ್ನಟ್ಟಿದ ಹುಬ್ಬಳ್ಳಿಗೆ ನಾಯಕ ವಿನಯ್ ಕುಮಾರ್ ಹಾಗೂ ಮೊಹಮ್ಮದ್ ತಹಾ ದ್ವಿತೀಯ ವಿಕೆಟ್ಗೆ 105 ರನ್ಗಳ ಜತೆಯಾಟ ನೀಡಿದ ತಂಡದ ಗೆಲುವನ್ನು ಖಚಿತಪಡಿಸಿದರು.
ಈ ಪೈಕಿ 23 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿದ ವಿನಯ್ ಕೊನೆಯ ವರೆಗೂ ಔಟಾಗದೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಇನ್ನು 14 ಎಸೆತಗಳು ಬಾಕಿ ಉಳಿದಿರುವಂತೆಯೇ ಮೂರು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 51 ಎಸೆತಗಳನ್ನು ಎದುರಿಸಿದ ವಿನಯ್ 13 ಬೌಂಡರಿಗಳಿಂದ 81 ರನ್ ಗಳಿಸಿ ಅಜೇಯರಾಗುಳಿದರು.
ಒಟ್ಟಾರೆಯಾಗಿ ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್, ಶಿವಮೊಗ್ಗ ಲಯನ್ಸ್ ಜತೆಗೆ ಹುಬ್ಬಳ್ಳಿ ಟೈಗರ್ಸ್ ಪ್ಲೇ-ಆಫ್ ಹಂತವನ್ನು ಖಚಿತಪಡಿಸಿದೆ.