ತಿರುವನಂತಪುರ: ಇಂಗ್ಲೆಂಡ್ ಲಯನ್ಸ್ ವಿರುದ್ಧ ನಡದೆ ಮೂರನೇ ಅನಧಿಕೃತ ಏಕದಿನ ಪಂದ್ಯದಲ್ಲೂ ಭಾರತ ಎ ತಂಡವು 60 ರನ್ ಅಂತರದ ಗೆಲುವು ದಾಖಲಿಸಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯನ್ನು ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಮುಂದಾಳತ್ವದ ಭಾರತ ಎ ತಂಡವು 47.1 ಓವರ್ಗಳಲ್ಲಿ 172 ರನ್ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.
ನಿಷೇಧ ತೆರವಿನ ಬಳಿಕ ಕ್ರಿಕೆಟ್ಗೆ ಮರಳಿದ ಕೆಎಲ್ ರಾಹುಲ್ ಕೇವಲ 13 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ಬಳಿಕ ಕೃುಣಾಲ್ ಪಾಂಡ್ಯ ದಾಳಿಗೆ ಸಿಲುಕಿದ ಇಂಗ್ಲೆಂಡ್ ಲಯನ್ಸ್ 30.5 ಓವರ್ಗಳಲ್ಲಿ ಕೇವಲ 112 ರನ್ಗಳಿಗೆ ಸರ್ವಪತನವನ್ನು ಕಂಡಿತು. ಕೇವಲ 21 ರನ್ ತೆತ್ತಿರುವ ಕೃುಣಾಲ್ ನಾಲ್ಕು ವಿಕೆಟುಗಳನ್ನು ಕಬಳಿಸಿದರು. ಸಿದ್ದಾರ್ಥ್ ಕೌಲ್ ಹಾಗೂ ಅಕ್ಷರ್ ಪಟೇಲ್ ಸಹ ತಲಾ ಎರಡು ವಿಕೆಟುಗಳನ್ನು ಪಡೆದುಕೊಂಡರು.
ಮೊದಲು ಬ್ಯಾಟಿಂಗ್ ನಡೆಸಿದ ಅಜಿಂಕ್ಯ ರಹಾನೆ ಮುಂದಾಳತ್ವದ ಭಾರತ ಎ ತಂಡವು 47.1 ಓವರ್ಗಳಲ್ಲಿ 172 ರನ್ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು.
ನಿಷೇಧ ತೆರವಿನ ಬಳಿಕ ಕ್ರಿಕೆಟ್ಗೆ ಮರಳಿದ ಕೆಎಲ್ ರಾಹುಲ್ ಕೇವಲ 13 ರನ್ ಗಳಿಸಿ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ಬಳಿಕ ಕೃುಣಾಲ್ ಪಾಂಡ್ಯ ದಾಳಿಗೆ ಸಿಲುಕಿದ ಇಂಗ್ಲೆಂಡ್ ಲಯನ್ಸ್ 30.5 ಓವರ್ಗಳಲ್ಲಿ ಕೇವಲ 112 ರನ್ಗಳಿಗೆ ಸರ್ವಪತನವನ್ನು ಕಂಡಿತು. ಕೇವಲ 21 ರನ್ ತೆತ್ತಿರುವ ಕೃುಣಾಲ್ ನಾಲ್ಕು ವಿಕೆಟುಗಳನ್ನು ಕಬಳಿಸಿದರು. ಸಿದ್ದಾರ್ಥ್ ಕೌಲ್ ಹಾಗೂ ಅಕ್ಷರ್ ಪಟೇಲ್ ಸಹ ತಲಾ ಎರಡು ವಿಕೆಟುಗಳನ್ನು ಪಡೆದುಕೊಂಡರು.