ಕೋಲ್ಕತ್ತಾ: ಆಸ್ಟ್ರೇಲಿಯಾ ವಿರುದ್ಧದ ಕೋಲ್ಕತ್ತಾ ಏಕದಿನ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿರುವ ಕುಲ್ದೀಪ್ ಯಾದವ್ ನಿಖರ ದಾಳಿಯ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲೂ ಭಾರತ 50 ರನ್ ಅಂತರದ ಗೆಲುವು ದಾಖಲಿಸಿತ್ತು.
ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಕಪಿಲ್ ದೇವ್ ಮತ್ತು ಚೇತನ್ ಶರ್ಮಾ ಬಳಿಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಎಂದೆನಿಸಿಕೊಂಡಿದ್ದಾರೆ.
ತಮ್ಮ ಹ್ಯಾಟ್ರಿಕ್ ವಿಕೆಟ್ ಸಾಧನೆಯನ್ನು ನೆನಪಿಸಿಕೊಂಡಿರುವ ಕುಲ್ದೀಪ್, ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ನೀಡಿರುವ ಅಮೂಲ್ಯ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.
ನಿರ್ಣಾಯಕ ಎಸೆತಕ್ಕೂ ಮುನ್ನ ಹೇಗೆ ದಾಳಿ ನಡೆಸಬೇಕೆಂಬುದನ್ನು ನಾನು ಮಹಿ ಭಾಯ್ ಅವರಲ್ಲಿ ಸಲಹೆಯನ್ನು ಕೇಳಿಕೊಂಡಿದ್ದೆ. ಆಗ ಅವರು ನಿನಗೆ ಹೇಗೆ ಅನಿಸುತ್ತದೆಯೇ ಹಾಗೆಯೇ ದಾಳಿ ಮಾಡು ಎಂದು ಹೇಳಿ ತನ್ನ ಬೆನ್ನು ತಟ್ಟಿರುವುದಾಗಿ ಕುಲ್ದೀಪ್ ತಿಳಿಸುತ್ತಾರೆ.
ಅಂತಿಮವಾಗಿ ಪ್ಯಾಟ್ ಕಮ್ಮಿನ್ಸ್ ಬ್ಯಾಟ್ಗೆ ಸವರಿದ ಚೆಂಡು ನೇರವಾಗಿ ಧೋನಿ ಗ್ಲೌಸ್ನೊಳಗೆ ಸೇರಿತ್ತು. ಈ ಮೂಲಕ ಕುಲ್ದೀಪ್ ಹ್ಯಾಟ್ರಿಕ್ ವಿಕೆಟ್ ಪಡೆಯಲು ಧೋನಿ ನೆರವಾಗಿದ್ದರು.
ಪಂದ್ಯದ 33ನೇ ಓವರ್ನಲ್ಲಿ ಕುಲ್ದೀಪ್ ಮ್ಯಾಜಿಕ್ ದಾಳಿ ನಡೆಸಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಮೊದಲು ಮ್ಯಾಥ್ಯೂ ವೇಡ್ ಕ್ಲೀನ್ ಬೌಲ್ಡ್ ಮಾಡಿದ್ದ ಕುಲ್ದೀಪ್ ಬಳಿಕ ಆಶ್ಟನ್ ಆಗರ್ ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದ್ದರು.
ಅದೇ ಹೊತ್ತಿಗೆ ತನ್ನ ಬೆನ್ನಿಗೆ ನಿಂತಿರುವ ನಾಯಕ ವಿರಾಟ್ ಕೋಹ್ಲಿ ಅವರಿಗೂ ಕುಲ್ದೀಪ್ ಧನ್ಯವಾದ ಹೇಳಿದರು. ಇದು ನಿಜಕ್ಕೂ ನನ್ನ ಪಾಲಿಗೆ ವಿಶೇಷವಾದ ಕ್ಷಣವಾಗಿದ್ದು, ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದರು.
ಮೊದಲೈದು ಓವರ್ಗಳಲ್ಲಿ ನನಗೆ ಕಠಿಣ ಪರಿಸ್ಥಿತಿ ಎದುರಾಗಿತ್ತು. ಬಳಿಕ ಲಯ ಕಂಡುಕೊಂಡಿದ್ದೆ. ಬಳಿಕ ನಡೆದಿದ್ದು ಇತಿಹಾಸ ಎಂದು ಸೇರಿಸಿದರು.
ಈ ಮೂಲಕ ಏಕದಿನ ಕ್ರಿಕೆಟ್ನಲ್ಲಿ ಕಪಿಲ್ ದೇವ್ ಮತ್ತು ಚೇತನ್ ಶರ್ಮಾ ಬಳಿಕ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಎಂದೆನಿಸಿಕೊಂಡಿದ್ದಾರೆ.
ತಮ್ಮ ಹ್ಯಾಟ್ರಿಕ್ ವಿಕೆಟ್ ಸಾಧನೆಯನ್ನು ನೆನಪಿಸಿಕೊಂಡಿರುವ ಕುಲ್ದೀಪ್, ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ನೀಡಿರುವ ಅಮೂಲ್ಯ ಸಲಹೆಯನ್ನು ನೆನಪಿಸಿಕೊಂಡಿದ್ದಾರೆ.
ನಿರ್ಣಾಯಕ ಎಸೆತಕ್ಕೂ ಮುನ್ನ ಹೇಗೆ ದಾಳಿ ನಡೆಸಬೇಕೆಂಬುದನ್ನು ನಾನು ಮಹಿ ಭಾಯ್ ಅವರಲ್ಲಿ ಸಲಹೆಯನ್ನು ಕೇಳಿಕೊಂಡಿದ್ದೆ. ಆಗ ಅವರು ನಿನಗೆ ಹೇಗೆ ಅನಿಸುತ್ತದೆಯೇ ಹಾಗೆಯೇ ದಾಳಿ ಮಾಡು ಎಂದು ಹೇಳಿ ತನ್ನ ಬೆನ್ನು ತಟ್ಟಿರುವುದಾಗಿ ಕುಲ್ದೀಪ್ ತಿಳಿಸುತ್ತಾರೆ.
ಅಂತಿಮವಾಗಿ ಪ್ಯಾಟ್ ಕಮ್ಮಿನ್ಸ್ ಬ್ಯಾಟ್ಗೆ ಸವರಿದ ಚೆಂಡು ನೇರವಾಗಿ ಧೋನಿ ಗ್ಲೌಸ್ನೊಳಗೆ ಸೇರಿತ್ತು. ಈ ಮೂಲಕ ಕುಲ್ದೀಪ್ ಹ್ಯಾಟ್ರಿಕ್ ವಿಕೆಟ್ ಪಡೆಯಲು ಧೋನಿ ನೆರವಾಗಿದ್ದರು.
ಪಂದ್ಯದ 33ನೇ ಓವರ್ನಲ್ಲಿ ಕುಲ್ದೀಪ್ ಮ್ಯಾಜಿಕ್ ದಾಳಿ ನಡೆಸಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಮೊದಲು ಮ್ಯಾಥ್ಯೂ ವೇಡ್ ಕ್ಲೀನ್ ಬೌಲ್ಡ್ ಮಾಡಿದ್ದ ಕುಲ್ದೀಪ್ ಬಳಿಕ ಆಶ್ಟನ್ ಆಗರ್ ಎಲ್ಬಿಡಬ್ಲ್ಯು ಬಲೆಗೆ ಸಿಲುಕಿಸಿದ್ದರು.
ಅದೇ ಹೊತ್ತಿಗೆ ತನ್ನ ಬೆನ್ನಿಗೆ ನಿಂತಿರುವ ನಾಯಕ ವಿರಾಟ್ ಕೋಹ್ಲಿ ಅವರಿಗೂ ಕುಲ್ದೀಪ್ ಧನ್ಯವಾದ ಹೇಳಿದರು. ಇದು ನಿಜಕ್ಕೂ ನನ್ನ ಪಾಲಿಗೆ ವಿಶೇಷವಾದ ಕ್ಷಣವಾಗಿದ್ದು, ಪಂದ್ಯದ ಗತಿಯನ್ನೇ ಬದಲಾಯಿಸಿತು ಎಂದರು.
ಮೊದಲೈದು ಓವರ್ಗಳಲ್ಲಿ ನನಗೆ ಕಠಿಣ ಪರಿಸ್ಥಿತಿ ಎದುರಾಗಿತ್ತು. ಬಳಿಕ ಲಯ ಕಂಡುಕೊಂಡಿದ್ದೆ. ಬಳಿಕ ನಡೆದಿದ್ದು ಇತಿಹಾಸ ಎಂದು ಸೇರಿಸಿದರು.