ಆ್ಯಪ್ನಗರ

ಆಸೀಸ್‌ ವಿರುದ್ಧದ ಸರಣಿಗೆ ಶ್ರೀಲಂಕಾ ಟಿ20 ತಂಡದ ನಾಯಕತ್ವ ಮರಳಿ ಪಡೆದ ಮಾಲಿಂಗ

ಪಾಕ್‌ ಪ್ರವಾಸದಲ್ಲಿ ಟಿ20 ಸರಣಿ ವೈಟ್‌ವಾಟ್‌ ಮಾಡುವ ಮೂಲಕ ಆತ್ಮವಿಶ್ವಾಸದ ಅಲೆಯಲ್ಲಿರುವ ಶ್ರೀಲಂಕಾ ತಂಡ, ಇದೀಗ ಅನುಭವಿ ವೇಗಿ ಲಸಿತ್‌ ಮಾಲಿಂಗ ಅವರ ಸಾರಥ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನಾಡಲಿದೆ.

Vijaya Karnataka Web 17 Oct 2019, 10:13 pm
ಕೊಲಂಬೊ: ಭದ್ರತೆ ದೃಷ್ಠಿಯಿಂದ ಇತ್ತೀಚೆಗಷ್ಟೇ ಪಾಕಿಸ್ತಾ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದಿಂದ ಹೊರಗುಳಿದಿದ್ದ ಅನುಭವಿ ವೇಗದ ಬೌಲರ್‌ ಲಸಿತ್‌ ಮಾಲಿಂಗ ಇದೀಗ ತಂಡಕ್ಕೆ ಮರಳಿದ್ದು, ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಲಂಕಾ ಪಡೆಯನ್ನು ಮುನ್ನಡೆಸುವ ಜವಾಬ್ದಾರಿ ಮರಳಿ ಪಡೆದುಕೊಂಡಿದ್ದಾರೆ.
Vijaya Karnataka Web lasith malinga sri lanka captain for australia tour 2019


ಶ್ರೀಲಂಕಾ ತಂಡ ಮುಂದಿನ ವರ್ಷ ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪೂರ್ವ ಸಿದ್ಧತೆ ಸಲುವಾಗಿ ಕಾಂಗರೂ ನಾಡಿಗೆ ಕಾಲಿಡುತ್ತಿದ್ದು, ಮೊದಲಿಗೆ ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯನ್ನಾಡಲಿದೆ. ಲಂಕಾ ಕ್ರಿಕೆಟ್‌ ಮಂಡಳಿ ಗುರುವಾರ ಆಸ್ಟ್ರೇಲಿಯಾ ಪ್ರವಾಸ ಸಲುವಾಗಿ 16 ಮಂದಿ ಸದಸ್ಯರ ತಂಡವನ್ನು ಪ್ರಕಟ ಮಾಡಿದೆ.

ಟೀಮ್‌ ಇಂಡಿಯಾ ವಿರದ್ಧದ ಟಿ20 ಸರಣಿಗೆ ತಂಡ ಪ್ರಕಟಿಸಿದ ಪ್ರವಾಸಿ ಬಾಂಗ್ಲಾದೇಶ!

ಪಾಕ್‌ ಪ್ರವಾಸದಿಂದ ಹೊರಗುಳಿದಿದ್ದ ಸ್ಟಾರ್‌ಗಳಾದ ಕುಶಲ್‌ ಪೆರೆರಾ ಮತ್ತು ನಿರೀಶನ್‌ ಡಿಕ್ವೆಲ್ಲಾ ಸೇರಿದಂತೆ ಪ್ರಮುಖ ಆಟಗಾರರು ಇದೀಗ ತಂಡಕ್ಕೆ ಮರಳಿದ್ದಾರೆ. ಆಸೀಸ್‌ ಪ್ರವಾಸದಲ್ಲಿ ಅಕ್ಟೋಬರ್‌ 27ರಂದು ಅಡಿಲೇಡ್‌ನಲ್ಲಿ ಶ್ರೀಲಂಕಾ ಮೊದಲ ಪಂದ್ಯವನ್ನಾಡಲಿದ್ದು, ಬಳಿಕ ಬ್ರಿಸ್ಬೇನ್‌ನಲ್ಲಿ ಅಕ್ಟೋಬರ್‌ 30ರಂದು ಎರಡನೇ ಪಂದ್ಯದಲ್ಲಿ ಪೈಪೋಟಿ ನಡೆಸಲಿದೆ. ಮೂರನೇ ಹಾಗೂ ಅಂತಿಮ ಪಂದ್ಯ ಮೆಲ್ಬೋರ್ನ್‌ನಲ್ಲಿ ನವೆಂಬರ್‌ 1ರಂದು ನಡೆಯಲಿದೆ.

ಕ್ರಿಕೆಟ್‌ ಅಭಿಮಾನಿಗಳಿಗೊಂದು ಸಿಹಿ ಸುದ್ದಿ, ಟಿ20 ಕ್ರಿಕೆಟ್‌ಗೆ ಮರಳಲಿದ್ದಾರೆ ತೆಂಡೂಲ್ಕರ್‌, ಲಾರಾ!

ಇತ್ತೀಚೆಗಷ್ಟೇ ಪಾಕಿಸ್ತಾನ ಪ್ರವಾಸದಲ್ಲಿ ಸ್ಟಾರ್‌ ಆಟಗಾರರ ಬಲವಿಲ್ಲದೆ ಭರ್ಜರಿ ಪ್ರದರ್ಶನ ನೀಡಿ ವೈಟ್‌ವಾಷ್‌ ಜಯ ದಾಖಲಿಸಿದ್ದ ಬಹುತೇಕ ಹೊಸ ಮುಖಗಳನ್ನು ಹೊಂದಿದ್ದ ಶ್ರೀಲಂಕಾ ತಂಡ, ಇದೀಗ ಅನುಭವಿಗಳ ಬಲದೊಂದಿಗೆ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ಅಂಗಣದಲ್ಲಿ ಮಣಿಸಿ ಮುಂಬರುವ ವಿಶ್ವಕಪ್‌ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದನ್ನು ಎದುರು ನೋಡುತ್ತಿದೆ.

ಲಂಕಾ ವಿರುದ್ಧದ ವೈಟ್‌ ವಾಷ್‌ ಸೋಲಿನ ಬಳಿಕ ಮಿಸ್ಬಾ ಉಲ್‌ ಹಕ್‌ ಹೇಳಿದ್ದೇನು ಗೊತ್ತಾ?

ಆಸ್ಟ್ರೇಲಿಯಾ ಪ್ರವಾಸಕ್ಕೆ ಶ್ರೀಲಂಕಾ ಟಿ20 ತಂಡ ಇಂತಿದೆ
ಲಸಿತ್‌ ಮಾಲಿಂಗ (ನಾಯಕ), ಕುಶಲ್‌ ಪೆರೆರಾ, ಕುಶಲ್‌ ಮೆಂಡಿಸ್‌, ಧನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ನಿರೋಶನ್‌ ಡಿಕ್ವೆಲ್ಲಾ, ದಸುನ್‌ ಶನಕ, ಶೆಹಾನ್‌ ಜಯಸೂರ್ಯ, ಭಾನುಕಾ ರಾಜಪಕ್ಸಾ, ಒಶಾದ ಫರ್ನಾಂಡೊ, ವಾನಿಂದು ಹಸರಂಗ, ಲಕ್ಷಣ್‌ ಸಂದಕನ್‌, ನುವಾನ್‌ ಪ್ರದೀಪ್‌, ಲಾಹಿರು ಕುಮಾರ, ಇಸುರು ಉದನ ಮತ್ತು ಕಸುನ್‌ ರಜಿತಾ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌