ಆ್ಯಪ್ನಗರ

ಕೊಹ್ಲಿ ಪಡೆಗೆ ಧೋನಿ ಕಿವಿಮಾತು

ವಿದೇಶದಲ್ಲಿ ಸತತ ವೈಫಲ್ಯಗಳನ್ನು ಅನುಭವಿಸಿದ ಭಾರತೀಯ ನಾಯಕರುಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಓರ್ವರಾಗಿದ್ದಾರೆ.

TIMESOFINDIA.COM 20 Jan 2018, 4:16 pm
ಚೆನ್ನೈ: ವಿದೇಶದಲ್ಲಿ ಸತತ ವೈಫಲ್ಯಗಳನ್ನು ಅನುಭವಿಸಿದ ಭಾರತೀಯ ನಾಯಕರುಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಓರ್ವರಾಗಿದ್ದಾರೆ.
Vijaya Karnataka Web look at the positives we took 20 wickets dhoni on test show
ಕೊಹ್ಲಿ ಪಡೆಗೆ ಧೋನಿ ಕಿವಿಮಾತು


ಇದೀಗ ಖಾಯಂ ನಾಯಕತ್ವ ವಹಿಸಿರುವ ಬಳಿ ವಿರಾಟ್ ಕೊಹ್ಲಿ ಸಹ ವಿದೇಶದಲ್ಲಿ ಮೊದಲ ವೈಫಲ್ಯವನ್ನು ಎದುರಿಸಿದ್ದಾರೆ. ಅಷ್ಟೇ ಯಾಕೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ.

ಈ ನಡುವೆ ಹೇಳಿಕೆ ಕೊಟ್ಟಿರುವ ಮಾಜಿ ನಾಯಕ ಎಂಎಸ್ ಧೋನಿ, ಧನಾತ್ಮಕ ಅಂಶಗಳನ್ನು ತೆಗೆದುಕೊಳ್ಳುವಂತೆ ಟೀಮ್ ಇಂಡಿಯಾಗೆ ಕಿವಿ ಮಾತು ಹೇಳಿದ್ದಾರೆ.

ಟೆಸ್ಟ್ ಪಂದ್ಯವೊಂದನ್ನು ಗೆಲ್ಲಲು 20 ವಿಕೆಟುಗಳನ್ನು ತೆಗೆಯಬೇಕು. ನಾವದನ್ನು ಮಾಡಿದ್ದೇವೆ. 20 ವಿಕೆಟುಗಳನ್ನು ಕಬಳಿಸಲು ಸಾಧ್ಯವಾಗದಿದ್ದರೆ ಮುಂದೇನು? ಟೆಸ್ಟ್ ಡ್ರಾ ಮಾಡಬೇಕಾಗುತ್ತದೆ. ಕಡಿಮೆ ರನ್ ಬಿಟ್ಟುಕೊಡುವ ಮತ್ತು ಹೆಚ್ಚು ರನ್ ಗಳಿಸುವ ಮೂಲಕ ಟೆಸ್ಟ್ ಡ್ರಾ ಮಾಡಬಹುದಾಗಿದೆ ಎಂದು ವಿವರಿಸಿದರು.

ಯಾವುದೇ ಪರಿಸ್ಥಿತಿಯಲ್ಲೂ 20 ವಿಕೆಟುಗಳನ್ನು ಪಡೆಯಲು ಸಾಧ್ಯವಾಗದಿದ್ದರೆ ಪಂದ್ಯ ಗೆಲ್ಲಲು ಸಾಧ್ಯವಿಲ್ಲ. ನಮ್ಮ ತಂಡವು ಎದುರಾಳಿ ತಂಡದ ಎಲ್ಲ 20 ವಿಕೆಟುಗಳನ್ನು ಪಡೆದಿದ್ದಾರೆ. ಅದುವೇ ದೊಡ್ಡ ಧನಾತ್ಮಕ ಅಂಶ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌