ಕೋಲ್ಕೊತಾ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಭೀತಿಯ ಹಿನ್ನೆಲೆಯಲ್ಲಿ ದಿಢೀರ್ ಆಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಇದಾದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ತುರಂತ್ ಆಗಿ ತವರಿಗೆ ಮರಳಲು ಅವಕಾಶ ಕಲ್ಪಿಸಲಾಗಿತ್ತು. ಮಾರ್ಚ್ 13 ಶುಕ್ರವಾರದಂದು ತುರ್ತಾಗಿ ಸಭೆ ಸೇರಿದ ಬಿಸಿಸಿಐ, ಭಾರತ ಹಾಗೂ ದಕ್ಷಿಣ ಆಫ್ರಿಕಾ ಸರಣಿಯನ್ನು ಮುಂದೂಡಲು ನಿರ್ಧರಿಸಿತ್ತು. ಈ ನಡುವೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರ್ಧಾರಕ್ಕೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುನಿಸಿಕೊಂಡಿದ್ದು, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಮಾರ್ಚ್ 18ರಂದು ಕೋಲ್ಕೊತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯ ಮುಂದೂಡಿರುವ ಬಿಸಿಸಿಐ ತೀರ್ಮಾನದ ಬಗ್ಗೆ ಮಮತಾ ಬ್ಯಾನರ್ಜಿ ಅಸಮಾಧಾನ ತೋಡಿಕೊಂಡಿದ್ದಾರೆ. ತಮ್ಮ ಸರಕಾರಕ್ಕೆ ಯಾವುದೇ ಮಾಹಿತಿ ನೀಡದೆ, ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಕಿಡಿ ಕಾರಿದ್ದಾರೆ.
ಐಪಿಎಲ್ ನಡೆದರೆ ಪಂದ್ಯಗಳ ಸಂಖ್ಯೆಗೆ ಕತ್ತರಿ ಬೀಳೋದು ಗ್ಯಾರಂಟಿ: ಗಂಗೂಲಿ
ಕೊರೊನಾ ವೈರಸ್ ಸೋಂಕಿನ ಭಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 14ರಂದು ಲಖನೌನಲ್ಲಿ ಹಾಗೂ ಮಾ.18ರಂದು ಈಡನ್ ಗಾರ್ಡನ್ಸ್ನಲ್ಲಿ 2 ಪಂದ್ಯಗಳನ್ನು ನಿಗದಿಗೊಳಿಸಲಾಗಿತ್ತು. ಶುಕ್ರವಾರ ಈ ಕುರಿತು ತುರ್ತು ಸಭೆ ನಡೆಸಿದ ಬಿಸಿಸಿಐ ಅಧಿಕಾರಿಗಳು ಆ ಎರಡು ಪಂದ್ಯಗಳನ್ನು ರದ್ದುಗೊಳಿಸಿ, ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ ತವರಿಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದರು.
ಈ ನಿರ್ಧಾರ ಮಮತಾ ಬ್ಯಾನರ್ಜಿಗೆ ಸಮಾಧಾನ ತಂದಿಲ್ಲ. ಪಂದ್ಯ ಮುಂದೂಡುವ ಮೊದಲು ಪಶ್ಚಿಮ ಬಂಗಾಳ ಸರಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳದವರೇ ಆದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ನೇರವಾಗಿ ಟೀಕೆ ಮಾಡಿದ್ದಾರೆ.
ಐಪಿಎಲ್ ವಿದೇಶಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ; ಸಾರ್ವಜನಿಕ ಆರೋಗ್ಯಕ್ಕೆ ಮೊದಲ ಆದ್ಯತೆ!
‘‘ನೀವು ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳು ಸರಿಯಾಗಿಯೇ ಇವೆ ಸೌರವ್. ಆದರೆ, ಪಂದ್ಯವನ್ನು ಮುಂದೂಡುವ ಮೊದಲು ಸರಕಾರಕ್ಕೆ ಯಾಕೆ ಒಂದು ಸಣ್ಣ ಮಾಹಿತಿ ನೀಡಿಲ್ಲ. ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಆಯುಕ್ತರು ಅಥವಾ ಸರಕಾರದ ಪರವಾಗಿ ಇರುವ ಇನ್ಯಾರಿಗಾದರೂ ಮೊದಲು ಮಾಹಿತಿ ಕೊಡಬಹುದಿತ್ತಲ್ಲವೇ? ಎಲ್ಲ ಮುಗಿದ ಬಳಿಕ ಮಾಹಿತಿ ನೀಡುವುದು ಯಾವ ರೀತಿಯಲ್ಲಿ ಸರಿ’’ ಎಂದು ಪ್ರಶ್ನಿಸಿದ್ದಾರೆ.
ಮಾರ್ಚ್ 18ರಂದು ಕೋಲ್ಕೊತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಬೇಕಿದ್ದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯ ಮುಂದೂಡಿರುವ ಬಿಸಿಸಿಐ ತೀರ್ಮಾನದ ಬಗ್ಗೆ ಮಮತಾ ಬ್ಯಾನರ್ಜಿ ಅಸಮಾಧಾನ ತೋಡಿಕೊಂಡಿದ್ದಾರೆ. ತಮ್ಮ ಸರಕಾರಕ್ಕೆ ಯಾವುದೇ ಮಾಹಿತಿ ನೀಡದೆ, ತೀರ್ಮಾನ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಕಿಡಿ ಕಾರಿದ್ದಾರೆ.
ಐಪಿಎಲ್ ನಡೆದರೆ ಪಂದ್ಯಗಳ ಸಂಖ್ಯೆಗೆ ಕತ್ತರಿ ಬೀಳೋದು ಗ್ಯಾರಂಟಿ: ಗಂಗೂಲಿ
ಕೊರೊನಾ ವೈರಸ್ ಸೋಂಕಿನ ಭಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಮಾರ್ಚ್ 14ರಂದು ಲಖನೌನಲ್ಲಿ ಹಾಗೂ ಮಾ.18ರಂದು ಈಡನ್ ಗಾರ್ಡನ್ಸ್ನಲ್ಲಿ 2 ಪಂದ್ಯಗಳನ್ನು ನಿಗದಿಗೊಳಿಸಲಾಗಿತ್ತು. ಶುಕ್ರವಾರ ಈ ಕುರಿತು ತುರ್ತು ಸಭೆ ನಡೆಸಿದ ಬಿಸಿಸಿಐ ಅಧಿಕಾರಿಗಳು ಆ ಎರಡು ಪಂದ್ಯಗಳನ್ನು ರದ್ದುಗೊಳಿಸಿ, ದಕ್ಷಿಣ ಆಫ್ರಿಕಾ ತಂಡದ ಆಟಗಾರರಿಗೆ ತವರಿಗೆ ಮರಳಲು ಅವಕಾಶ ಮಾಡಿಕೊಟ್ಟಿದ್ದರು.
ಈ ನಿರ್ಧಾರ ಮಮತಾ ಬ್ಯಾನರ್ಜಿಗೆ ಸಮಾಧಾನ ತಂದಿಲ್ಲ. ಪಂದ್ಯ ಮುಂದೂಡುವ ಮೊದಲು ಪಶ್ಚಿಮ ಬಂಗಾಳ ಸರಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳದವರೇ ಆದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ನೇರವಾಗಿ ಟೀಕೆ ಮಾಡಿದ್ದಾರೆ.
ಐಪಿಎಲ್ ವಿದೇಶಕ್ಕೆ ಸ್ಥಳಾಂತರಿಸುವ ಪ್ರಶ್ನೆಯೇ ಇಲ್ಲ; ಸಾರ್ವಜನಿಕ ಆರೋಗ್ಯಕ್ಕೆ ಮೊದಲ ಆದ್ಯತೆ!
‘‘ನೀವು ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳು ಸರಿಯಾಗಿಯೇ ಇವೆ ಸೌರವ್. ಆದರೆ, ಪಂದ್ಯವನ್ನು ಮುಂದೂಡುವ ಮೊದಲು ಸರಕಾರಕ್ಕೆ ಯಾಕೆ ಒಂದು ಸಣ್ಣ ಮಾಹಿತಿ ನೀಡಿಲ್ಲ. ಸರಕಾರದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಆಯುಕ್ತರು ಅಥವಾ ಸರಕಾರದ ಪರವಾಗಿ ಇರುವ ಇನ್ಯಾರಿಗಾದರೂ ಮೊದಲು ಮಾಹಿತಿ ಕೊಡಬಹುದಿತ್ತಲ್ಲವೇ? ಎಲ್ಲ ಮುಗಿದ ಬಳಿಕ ಮಾಹಿತಿ ನೀಡುವುದು ಯಾವ ರೀತಿಯಲ್ಲಿ ಸರಿ’’ ಎಂದು ಪ್ರಶ್ನಿಸಿದ್ದಾರೆ.