ಆ್ಯಪ್ನಗರ

ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯ ಗೆದ್ದ ಮನೀಶ್ ಪಾಂಡೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ನಡೆದ ಪುಣೆ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಏಳು ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿತ್ತು.

ಏಜೆನ್ಸೀಸ್ 27 Apr 2017, 3:17 pm
ಪುಣೆ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಚಾಂಪಿಯನ್‌ಶಿಪ್‌ನಲ್ಲಿ ಬುಧವಾರ ನಡೆದ ಪುಣೆ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಏಳು ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿತ್ತು.
Vijaya Karnataka Web manish pandey speaks in kannada during ipl match
ಕನ್ನಡದಲ್ಲಿ ಮಾತನಾಡಿ ಕನ್ನಡಿಗರ ಹೃದಯ ಗೆದ್ದ ಮನೀಶ್ ಪಾಂಡೆ


ಪಂದ್ಯದ ನಡುವೆ ವಿಶೇಷವಾದ ಘಟನೆಯೊಂದು ನಡೆದಿತ್ತು. ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಪ್ರತಿನಿಧಿಸುತ್ತಿರುವ ಪ್ರತಿಭಾವಂತ ಬ್ಯಾಟ್ಸ್‌ಮನ್ ಮನೀಶ್ ಪಾಂಡೆ, ಕನ್ನಡದಲ್ಲಿ ಮಾತನಾಡುವ ಮೂಲಕ ಕನ್ನಡಾಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಪಂದ್ಯದ ಮೊದಲ ಇನ್ನಿಂಗ್ಸ್ ಕ್ಷೇತ್ರರಕ್ಷಣೆಯ ವೇಳೆ ಕಾಮೆಂಟಟರ್ ಜೊತೆಗೆ ನೇರವಾಗಿ ಮಾತನಾಡುತ್ತಿದ್ದ ಪಾಂಡೆ, ವಿಕೆಟ್ ಕೀಪರ್ ರಾಬಿನ್ ಉತ್ತಪ್ಪ ಜೊತೆಗೆ ಕನ್ನಡದಲ್ಲಿ ಮಾತನಾಡಿದ್ದಾರೆ

'ಮಾಮ್, ಅವರ ಎಡ್ಜಸ್ ಬಂದ್ರೆ ಅಲ್ಲೇ ಬರುತ್ತೇ' ಎಂದು ಉತ್ತಪ್ಪ ಅವರಿಗೆ ಪಾಂಡೆ ಹೇಳಿಕೊಂಡಿದ್ದರು. ಇದನ್ನು ತಕ್ಷಣವೇ ಆಲಿಸಿದ ಜಿಂಬಾಬ್ವಾ ಮೂಲದ ಕಾಮೆಂಟಟರ್ ಪಾಮಿ ಎಂಬಾಂಗ್ವಾ ನೀವು ಕನ್ನಡ ಮಾತನಾಡುತ್ತೀರಿ ತಾನೇ ಎಂದು ಹೇಳಿಕೊಂಡಿರುವುದು ಮತ್ತಷ್ಟು ಅಚ್ಚರಿ ಮೂಡಿಸಿದೆ.

ಮನೀಷ್ ಕನ್ನಡದಲ್ಲಿ ಮಾತನಾಡಿದಿರುವುದಕ್ಕಿಂತಲೂ ಮಿಗಿಲಾಗಿ ಪಾಂಡೆ ಮಾತನಾಡಿರುವ ಕನ್ನಡ ಭಾಷೆಯನ್ನು ಎಂಬಾಂಗ್ವಾ ಗುರುತಿಸಿರುವುದು ಕನ್ನಡಿಗರಲ್ಲಿ ಹೆಚ್ಚಿನ ಸಂತಸವನ್ನುಂಟು ಮಾಡಿದೆ.



ಕಾಮೆಂಟೆಟರ್ ಜೂತೆಗೆ ತಮ್ಮ ಆರ್ಮಿ ಕನಸನ್ನು ಬಿಚ್ಚಿಟ್ಟಿರುವ ಪಾಂಡೆ, ಇತ್ತೀಚೆಗಷ್ಟೇ ನಕ್ಸಲರ ದಾಳಿಯಲ್ಲಿ ಮಡಿದ ಸಿಆರ್‌ಪಿಎಫ್ ಜವಾನರಿಗಾಗಿ ಕೈಗೆ ಕಪ್ಪು ಪಟ್ಟಿಯನ್ನು ಧರಿಸಿರುವುದಾಗಿ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌