ಆ್ಯಪ್ನಗರ

ತಾಯ್ನಾಡಿನಲ್ಲಿ ಡೆಬ್ಯು ಮಾಡಲಿರುವ ಮಯಾಂಕ್ ಅಗರ್ವಾಲ್

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಕರ್ನಾಟಕದ ಯುವ ಭರವಸೆಯ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಹೊಸ ಸವಾಲುಗಳನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.

Vijaya Karnataka Web 17 Sep 2019, 4:17 pm
ಹೊಸದಿಲ್ಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಬಾಕ್ಸಿಂಗ್ ಡೇ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾದಾರ್ಪಣೆ ಮಾಡಿರುವ ಕರ್ನಾಟಕದ ಯುವ ಭರವಸೆಯ ಬ್ಯಾಟ್ಸ್‌ಮನ್ ಮಾಯಾಂಕ್ ಅಗರ್ವಾಲ್ ಇದೀಗ ತಾಯ್ನಾಡಿನಲ್ಲಿ ಡೆಬ್ಯು ಮಾಡಲು ಸಜ್ಜಾಗಿದ್ದಾರೆ.
Vijaya Karnataka Web mayank-agarwal-02


ಆಸ್ಟ್ರೇಲಿಯಾ ಬಳಿಕ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿರುವ 28ರ ಹರೆಯದ ಮಯಾಂಕ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದ್ದಾರೆ. ಈ ಸಂಬಂಧ ವಿಜಯ ಕರ್ನಾಟಕ ಸೋದರ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿಗೆ ಬುಕ್ಕಿಗಳ ಆಮಿಷ; ಮರುಕಳಿಸಿತೇ ಫಿಕ್ಸಿಂಗ್ ಭೂತ?

ಅಂತಾರಾಷ್ಟ್ರೀಯ ಕ್ರಿಕೆಟ್‌‌ನಲ್ಲಿ ಆರಂಭಿಕ ಹೆಜ್ಜೆಗಳ ಬಗ್ಗೆ?
ಇಂದೊಂದು ಅದ್ಭುತ ಪಯಣ. ಹಲವು ತಮಾಷೆ ಹಾಗೂ ವಿಭಿನ್ನ ಅನುಭವ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ರುಚಿಯನ್ನು ಪಡೆಯುತ್ತಿದ್ದೇನೆ. ಆಸ್ಟ್ರೇಲಿಯಾದಿಂದ ಕೆರಿಯರ್ ಆರಂಭಿಸಿ ವೆಸ್ಟ್‌ಇಂಡೀಸ್ ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸಿರುವುದು ನಾನು ಅಂದುಕೊಂಡಿರುವುದಕ್ಕಿಂತಲೂ ವಿಭಿನ್ನ ಅನುಭವವಾಗಿದೆ. ಕೆಲವೊಂದು ಅಂಶಗಳು ನಿಮ್ಮ ಪರವಾಗಿಯೂ ಇನ್ನು ಕೆಲವು ಬಾರಿ ನಿಮ್ಮ ವಿರುದ್ಧವಾಗಿ ನಡೆಯಲಿದೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವುದೇ ದೊಡ್ಡ ಸವಾಲಿನ ವಿಷಯ ಎಂದರು.

ವೆಸ್ಟ್‌ಇಂಡೀಸ್ ಸರಣಿಯಿಂದ ಕಲಿತ ಪಾಠಗಳು...
ವೈಯಕ್ತಿಕ ವಿಚಾರದ ಬಗ್ಗೆ ಹೇಳುವುದಾದರೆ ಇದು ಕಲಿಕಾ ಕಾಲಘಟ್ಟವಾಗಿದೆ. ವಿಭಿನ್ನ ಪರಿಸ್ಥಿತಿಯಲ್ಲಿ ಅನೇಕ ಸವಾಲನ್ನು ಎದುರಿಸಿದ್ದೇವೆ. ವಿಂಡೀಸ್ ವೇಗಿ ಕೆಮರ್ ರೂಚ್ ದಾಳಿಯನ್ನು ಎದುರಿಸುವುದು ನಿಜಕ್ಕೂ ಹೆಚ್ಚಿನ ಅನುಭವ ನೀಡಿದೆ. ಪಂದ್ಯದ ಬಳಿಕ ವೆಸ್ಟ್‌ಇಂಡೀಸ್ ಡ್ರೆಸ್ಸಿಂಗ್ ಕೊಠಡಿಗೆ ತೆರಳಿ ಸಂಭಾಷಣೆಯನ್ನು ಮಾಡಿದ್ದೇನೆ. ಕ್ರಿಕೆಟ್ ಬಗ್ಗೆ ಸಾಕಷ್ಟು ಒಳನೋಟವನ್ನು ರೂಚ್ ಹಂಚಿಕೊಂಡಿದ್ದಾರೆ ಎಂದರು.

ಭಾರತೀಯ ಕ್ರಿಕೆಟ್ ತಂಡದ ಗೆಲುವಿನ ತೀವ್ರತೆಯ ಬಗ್ಗೆ...
ಭಾರತೀಯ ಕ್ರಿಕೆಟ್ ತಂಡದ ಗೆಲುವಿನ ಹಂಬಲವು ನಿಜಕ್ಕೂ ಅದ್ಭುತಗೊಳಿಸುತ್ತಿದೆ. ಪಂದ್ಯ ಗೆಲ್ಲುವುದಷ್ಟೇ ಅಲ್ಲದೆ ಪ್ರತಿಯೊಂದು ಅವಧಿಯನ್ನು ಗೆಲ್ಲುವುದು ಗುರಿಯಾಗಿದೆ. ವೈಯಕ್ತಿಕ ಪ್ರದರ್ಶನಗಳಲ್ಲಿ ಏರಿಳಿತಗಳನ್ನು ಕಾಣಬಹುದು. ಆದರೆ ತಂಡದ ತೀವ್ರತೆ ಉನ್ನತ ಮಟ್ಟದಲ್ಲಿ ಕಾಯ್ದುಕೊಳ್ಳುವುದು ಅತಿ ಮುಖ್ಯ. ಆತ್ಮವಿಶ್ವಾಸ ಭರಿತ ತಂಡವನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ನಾವೇ ನಂಬಿಕೆಯನ್ನಿರಿಸಿದ್ದು, ಅತ್ಯುತ್ತಮ ಕ್ರಿಕೆಟ್ ಆಡುವುದರತ್ತ ಗಮನ ಕೇಂದ್ರಿತರಾಗಿದ್ದೇವೆ ಎಂದರು.

70 ವರ್ಷದ ವೃದ್ಧನಿಗೆ ಪಿವಿ ಸಿಂಧೂ ಅಪಹರಿಸಿ ಮದುವೆಯಾಗುವ ಆಸೆಯಂತೆ!

ವಿರಾಟ್ ಜತೆಗಿನ ಅನುಭವ...
ಪಂದ್ಯದ ಮೇಲಿರುವ ತೀವ್ರತೆ, ಮನೋಸ್ಥಿತಿ ಹಾಗೂ ಗ್ರಹಿಸುವ ರೀತಿ ಇವೆಲ್ಲವೂ ನನ್ನಲ್ಲಿ ಹೆಚ್ಚಿನ ಚೈತನ್ಯವನ್ನು ತುಂಬಿದೆ. ನಾಯಕನಾದವರು ಉದಾಹರಣೆ ಸಹಿತ ತಂಡವನ್ನು ಮುನ್ನಡೆಸುತ್ತಾರೆ. ಈ ತಂಡದ ಭಾಗವಾಗಿರುವುದು ಅತೀವ ಸಂತಸ ನೀಡಿದೆ ಎಂದರು.

ತವರಿನಲ್ಲಿ ಮೊದಲ ಪಂದ್ಯದ ಬಗ್ಗೆ...

ತಾಯ್ನಾಡಿನಲ್ಲಿ ಆಡುವುದು ಯಾವತ್ತೂ ವಿಶೇಷ. ನಿಜಕ್ಕೂ ದಕ್ಷಿಣ ಆಫ್ರಿಕಾ ಸರಣಿಯನ್ನು ಎದುರು ನೋಡುತ್ತಿದ್ದೇನೆ. ಆಸೀಸ್ ಹಾಗೂ ವಿಂಡೀಸ್‌ನಲ್ಲಿ ಅನೇಕ ಅಂಶಗಳನ್ನು ಕಲಿತಿದ್ದೇನೆ. ಈಗ ಈ ಎಲ್ಲ ಪಾಠಗಳನ್ನು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಆಳವಡಿಸಬೇಕಿದೆ ಎಂದರು.

ಓಪನರ್ ಸ್ಥಾನಕ್ಕಿರುವ ಸ್ಪರ್ಧೆಯ ಬಗ್ಗೆ...
ಇದು ನನ್ನ ನಿಯಂತ್ರಣದಲ್ಲಿಲ್ಲ. ಹಾಗಾಗಿ ಹೆಚ್ಚಿನ ಒತ್ತಡವನ್ನು ಬೀರುವುದಿಲ್ಲ. ನನ್ನ ಯೋಚನೆ ಏನೆಂದರೆ, ನನಗೊಂದು ಅವಕಾಶ ದೊರಕಿದ್ದು, ಸಾಧ್ಯವಾದಷ್ಟು ರನ್ ಗಳಿಸಿ ತಂಡವನ್ನು ಉತ್ತಮ ಹಂತದತ್ತ ತಲುಪಿಸಬೇಕು. ಒಳ್ಳೆಯ ದಿನವಾದರೆ ತಂಡಕ್ಕಾಗಿ ಪಂದ್ಯ ಗೆಲ್ಲಿಸಲು ಪ್ರಯತ್ನಿಸಲಿದ್ದೇನೆ. ಉಳಿದೆಲ್ಲವೂ ತನ್ನಿಂದ ತಾನೆ ಸರಿಯಾಗಲಿದೆ ಎಂದರು.

ನಾನೀಗಲೂ ಕಠಿಣ ಪ್ರಯತ್ನವನ್ನು ಮುಂದುವರಿಸಿದ್ದೇನೆ. ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದೇನೆ. ನಾನೀಗ ನನ್ನ ಆಟವನ್ನು ಹೆಚ್ಚು ಅರಿತುಕೊಂಡಿದ್ದೇನೆ. ಅಲ್ಲದೆ ಹೆಚ್ಚಿ ಪಕ್ವತೆ ಪಡೆದಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಹೆಚ್ಚು ಆಡಿರುವುದು ಕ್ರಿಕೆಟ್ ಬಗ್ಗೆ ಅನುಭವ ಸಂಪಾದಿಸಲು ನೆರವಾಯಿತು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌