ಹೊಸದಿಲ್ಲಿ: ವೆಸ್ಟ್ಇಂಡೀಸ್ನಲ್ಲಿ ಸಾಗಿದ ಮಹಿಳಾ ಟ್ವೆಂಟಿ-20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಿಂದ ಹಿರಿಯ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರನ್ನು ಕೈಬಿಟ್ಟಿರುವುದು ಸಾಕಷ್ಟು ವಿವಾದಕ್ಕೆ ಗ್ರಾಸವಾಗಿತ್ತು.
ಲೀಗ್ ಹಂತದಲ್ಲಿ ಅಜೇಯ ಓಟ ಮುಂದುವರಿಸಿದ ಹರ್ಮನ್ ಪ್ರೀತ್ ಬಳಗ ಸೆಮಿಫೈನಲ್ಗೆ ಆಂಗ್ಲರ ಕೈಯಲ್ಲಿ ಹೀನಾಯ ಸೋಲನುಭವಿಸಿ ಕೂಟದಿಂದಲೇ ನಿರ್ಗಮನದ ಹಾದಿ ಹಿಡಿದಿತ್ತು.
ಮಂಗಳವಾರದಂದು ಕೊನೆಗೂ ಮೌನ ಮುರಿದಿರುವ ಭಾರತದ ಏಕದಿನ ತಂಡದ ನಾಯಕಿಯಾಗಿರುವ ಮಿಥಾಲಿ, ಕೋಚ್ ರಮೇಶ್ ಪೊವರ್ ಹಾಗೂ ಬಿಸಿಸಿಐ ಆಡಳಿತಗಾರರ ಸಮಿತಿಯ ಸದಸ್ಯೆ ಡಯಾನಾ ಎದುಲ್ಜಿ ವಿರುದ್ಧ ಕಿಡಿ ಕಾರಿದ್ದಾರೆ.
ನನ್ನನ್ನು ಹೊರದಬ್ಬಲು ಎದುಲ್ಜಿ ತನ್ನ ಅಧಿಕಾರವನ್ನು ಬಳಿಸಿಕೊಂಡಿದ್ದಾರೆ. ಕೆಲವು ಜನರು ನನ್ನ ಕ್ರಿಕೆಟ್ ಜೀವನ ನಾಶಗೊಳಿಸಲು ಯತ್ನಿಸಿದ್ದಾರೆ ಎಂಬ ಆರೋಪವನ್ನು 35ರ ಹರೆಯದ ಮಿಥಾಲಿ ಮಾಡಿದ್ದಾರೆ.
"20 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅವಮಾನ, ಖಿನ್ನತೆ ಹಾಗೂ ಮಾನಸಿಕವಾಗಿ ಹಿನ್ನಡೆಗೊಳಗಾಗಿದ್ದೇನೆ. ಅಧಿಕಾರದಲ್ಲಿರುವ ಕೆಲವು ಮಂದಿ ನನ್ನ ಆತ್ಮವಿಶ್ವಾಸವನ್ನು ನಾಶಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದಾಗಿ ದೇಶಕ್ಕಾಗಿ ನನ್ನ ಸೇವೆಯನ್ನು ಮುಂದುವರಿಸಬೇಕೇ ಎಂಬುದರ ಬಗ್ಗೆ ಮರು ಪರೀಶೀಲಿಸುವಂತೆ ಮಾಡಿದೆ" ಎಂದು ಬಿಸಿಸಿಐ ಸಿಇಎ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ಕಾರ್ಯಾಚರಣೆಯ ಸಿಎಂ ಸಬಾ ಕರೀಂಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
"ಟ್ವೆಂಟಿ-20 ನಾಯಕಿ ಹರ್ಮನ್ಪ್ರೀತ್ ಕೌರ್ರನ್ನು ನಾನು ದೂಷಿಸಲಾರೆ. ಆದರೆ ನನ್ನ ಕೈಬಿಡುವ ಕೋಚ್ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವುದು ಅಚ್ಚರಿ ಹಾಗೂ ನೋವುಂಟುಮಾಡಿದೆ" ಎಂದರು.
"ನಮ್ಮ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸಿದ್ದೆ. ಆದರೆ ನಾವು ಸುವರ್ಣಾವಕಾಶವನ್ನು ಕೈಚೆಲ್ಲಿರುವುದು ಬೇಸರಕ್ಕೆ ಕಾರಣವಾಗಿದೆ" ಎಂದು ಕೊರಗಿದರು.
ಲೀಗ್ ಹಂತದಲ್ಲಿ ಅಜೇಯ ಓಟ ಮುಂದುವರಿಸಿದ ಹರ್ಮನ್ ಪ್ರೀತ್ ಬಳಗ ಸೆಮಿಫೈನಲ್ಗೆ ಆಂಗ್ಲರ ಕೈಯಲ್ಲಿ ಹೀನಾಯ ಸೋಲನುಭವಿಸಿ ಕೂಟದಿಂದಲೇ ನಿರ್ಗಮನದ ಹಾದಿ ಹಿಡಿದಿತ್ತು.
ಮಂಗಳವಾರದಂದು ಕೊನೆಗೂ ಮೌನ ಮುರಿದಿರುವ ಭಾರತದ ಏಕದಿನ ತಂಡದ ನಾಯಕಿಯಾಗಿರುವ ಮಿಥಾಲಿ, ಕೋಚ್ ರಮೇಶ್ ಪೊವರ್ ಹಾಗೂ ಬಿಸಿಸಿಐ ಆಡಳಿತಗಾರರ ಸಮಿತಿಯ ಸದಸ್ಯೆ ಡಯಾನಾ ಎದುಲ್ಜಿ ವಿರುದ್ಧ ಕಿಡಿ ಕಾರಿದ್ದಾರೆ.
ನನ್ನನ್ನು ಹೊರದಬ್ಬಲು ಎದುಲ್ಜಿ ತನ್ನ ಅಧಿಕಾರವನ್ನು ಬಳಿಸಿಕೊಂಡಿದ್ದಾರೆ. ಕೆಲವು ಜನರು ನನ್ನ ಕ್ರಿಕೆಟ್ ಜೀವನ ನಾಶಗೊಳಿಸಲು ಯತ್ನಿಸಿದ್ದಾರೆ ಎಂಬ ಆರೋಪವನ್ನು 35ರ ಹರೆಯದ ಮಿಥಾಲಿ ಮಾಡಿದ್ದಾರೆ.
"20 ವರ್ಷಗಳ ಸುದೀರ್ಘ ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಅವಮಾನ, ಖಿನ್ನತೆ ಹಾಗೂ ಮಾನಸಿಕವಾಗಿ ಹಿನ್ನಡೆಗೊಳಗಾಗಿದ್ದೇನೆ. ಅಧಿಕಾರದಲ್ಲಿರುವ ಕೆಲವು ಮಂದಿ ನನ್ನ ಆತ್ಮವಿಶ್ವಾಸವನ್ನು ನಾಶಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದಾಗಿ ದೇಶಕ್ಕಾಗಿ ನನ್ನ ಸೇವೆಯನ್ನು ಮುಂದುವರಿಸಬೇಕೇ ಎಂಬುದರ ಬಗ್ಗೆ ಮರು ಪರೀಶೀಲಿಸುವಂತೆ ಮಾಡಿದೆ" ಎಂದು ಬಿಸಿಸಿಐ ಸಿಇಎ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ಕಾರ್ಯಾಚರಣೆಯ ಸಿಎಂ ಸಬಾ ಕರೀಂಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದಾರೆ.
"ಟ್ವೆಂಟಿ-20 ನಾಯಕಿ ಹರ್ಮನ್ಪ್ರೀತ್ ಕೌರ್ರನ್ನು ನಾನು ದೂಷಿಸಲಾರೆ. ಆದರೆ ನನ್ನ ಕೈಬಿಡುವ ಕೋಚ್ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವುದು ಅಚ್ಚರಿ ಹಾಗೂ ನೋವುಂಟುಮಾಡಿದೆ" ಎಂದರು.
"ನಮ್ಮ ದೇಶಕ್ಕಾಗಿ ವಿಶ್ವಕಪ್ ಗೆಲ್ಲಲು ಬಯಸಿದ್ದೆ. ಆದರೆ ನಾವು ಸುವರ್ಣಾವಕಾಶವನ್ನು ಕೈಚೆಲ್ಲಿರುವುದು ಬೇಸರಕ್ಕೆ ಕಾರಣವಾಗಿದೆ" ಎಂದು ಕೊರಗಿದರು.