ಆ್ಯಪ್ನಗರ

‘ಮಿಥಾಲಿ ರಾಜ್‌ ಉದಾಸೀನ ಪ್ರವೃತ್ತಿಯವರು’

ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ಜತೆಗಿನ ಬಾಂಧವ್ಯ ಸರಿ ಇರಲಿಲ್ಲ ಎಂಬುದನ್ನು ಭಾರತ ಟಿ20 ತಂಡದ ಕೋಚ್‌ ರಮೇಶ್‌ ಪೊವಾರ್‌ ಒಪ್ಪಿಕೊಂಡಿದ್ದಾರೆ.

PTI 29 Nov 2018, 5:00 am
ಹೊಸದಿಲ್ಲಿ : ಹಿರಿಯ ಆಟಗಾರ್ತಿ ಮಿಥಾಲಿ ರಾಜ್‌ ಜತೆಗಿನ ಬಾಂಧವ್ಯ ಸರಿ ಇರಲಿಲ್ಲ ಎಂಬುದನ್ನು ಭಾರತ ಟಿ20 ತಂಡದ ಕೋಚ್‌ ರಮೇಶ್‌ ಪೊವಾರ್‌ ಒಪ್ಪಿಕೊಂಡಿದ್ದಾರೆ.
Vijaya Karnataka Web mithali was aloof difficult to handle powar tells bcci committee
‘ಮಿಥಾಲಿ ರಾಜ್‌ ಉದಾಸೀನ ಪ್ರವೃತ್ತಿಯವರು’


ಆದರೆ, ಟಿ20 ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಮಿಥಾಲಿಯವರನ್ನು ತಂಡದಿಂದ ಕೈಬಿಡಲು ಕ್ರಿಕೆಟ್‌ ರಣತಂತ್ರ ಕಾರಣವೇ ಹೊರತು ಬೇರೇನೂ ಅಲ್ಲ ಎಂದು ಪೊವಾರ್‌ ಸ್ಪಷ್ಟನೆ ನೀಡಿದ್ದಾರೆ ಎಂಬುದಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಕೋಚ್‌ ರಮೇಶ್‌ ಪೊವಾರ್‌ ತಮಗೆ ಅವಮಾನ ಮಾಡಿದ್ದಾರೆ ಎಂದು ಮಿಥಾಲಿ ಮಂಗಳವಾರ ಬಿಸಿಸಿಐ ಸಿಇಒ ರಾಹುಲ್‌ ಜೊಹ್ರಿ ಮತ್ತು ಪ್ರಧಾನ ವ್ಯವಸ್ಥಾಪಕ (ಕ್ರಿಕೆಟ್‌ ನಿರ್ವಹಣೆ) ಸಾಬಾ ಕರೀಂ ಅವರಿಗೆ ಇ-ಮೇಲ್‌ ರವಾನಿಸಿದ್ದರು. ಅದೇ ವೇಳೆ ಬುಧವಾರ ಕೇಂದ್ರ ಕಚೇರಿಗೆ ಹಾಜರಾಗುವಂತೆ ಪೊವಾರ್‌ಗೆ ಮಂಗಳವಾರ ಸಮನ್ಸ್‌ ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಪೊವಾರ್‌ ಬುಧವಾರ ಮುಂಬಯಿಯಲ್ಲಿರುವ ಬಿಸಿಸಿಐ ಕೇಂದ್ರ ಕಚೇರಿಯಲ್ಲಿ ಬಿಸಿಸಿಐ ಅಧಿಕಾರಿಗಳನ್ನು ಭೇಟಿ ಮಾಡಿ ಸ್ಪಷ್ಟೀಕರಣ ನೀಡಿದ್ದಾರೆ. ಮಿಥಾಲಿ ಉದಾಸೀನ ಪ್ರವೃತ್ತಿಯವರಾಗಿದ್ದು ತಂಡದಲ್ಲಿ ಅವರ ಉಸ್ತುವಾರಿ ಕಷ್ಟ ಎಂದು ಅಧಿಕಾರಿಗಳಿಗೆ ಪೊವಾರ್‌ ತಿಳಿಸಿದ್ದಾರೆ ಎಂಬುದಾಗಿ ಹೆಸರು ಹೇಳಲಿಚ್ಛಿಸದ ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌