ಹೊಸದಿಲ್ಲಿ: ಟೀಮ್ ಇಂಡಿಯಾದ ಹಾಲಿ ನಾಯಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ಇತಿಹಾಸದ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಸತತ ಮೂರು ವರ್ಷಗಳ ಕಾಲ ನಂ.1 ಸ್ಥಾನದಲ್ಲಿ ಉಳಿಯುವಂತೆ ಮಾಡಿದ್ದ ಕೊಹ್ಲಿ, ಸೀಮಿತ ಓವರ್ಗಳ ಕ್ರಿಕೆಟ್ನಲ್ಲೂ ತಂಡಕ್ಕೆ ಅಗ್ರ ಪಟ್ಟ ತಂದುಕೊಟ್ಟಿದ್ದರು. ಇನ್ನು ಕೊಹ್ಲಿ ನಾಯಕತ್ವದಲ್ಲಿ ಬಹುದೊಡ್ಡ ಸಾಧನೆ ಎಂಬಂತೆ 2018-19ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತ ತಂಡ ಮೊತ್ತ ಮೊದಲ ಬಾರಿ ಕಾಂಗರೂ ನೆಲೆದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆದ್ದ ಅಮೋಘ ಸಾಧನೆ ಮಾಡಿತ್ತು.
ಆದರೂ, ಕೊಹ್ಲಿ ನಾಯಕತ್ವದ ಬಗ್ಗೆ ಆಗಾಗ ಅಪಸ್ವರ ಕೇಳಿ ಬರುತ್ತಲೇ ಇದೆ. ಏಕೆಂದರೆ ಕೊಹ್ಲಿ ಮುಂದಾಳತ್ವದಲ್ಲಿ ಭಾರತ ತಂಡ ಈವರೆಗೆ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿಲ್ಲ. ಜೊತೆಗೆ ನಿರ್ಣಾಯಕ ಪಂದ್ಯಗಳಲ್ಲಿ ಆಡುವ 11ರ ಬಳಗದ ಆಯ್ಕೆ ವಿಚಾರದಲ್ಲಿ ಕೊಹ್ಲಿ ಎಡವುದನ್ನು ವ್ಯಾಪಕವಾಗಿ ಟೀಕೆ ಮಾಡಲಾಗಿದೆ. ಇದಕ್ಕೆ ಪೂರಕ ಎಂಬಂತೆ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲೂ ಆರ್ಸಿಬಿ ತಂಡಕ್ಕೆ ಕೊಹ್ಲಿ ನಾಯಕತ್ವದಲ್ಲಿ ಈವರೆಗೆ ಯಶಸ್ಸು ಸಿಕ್ಕಿಲ್ಲ.
ತಮ್ಮನ್ನು ಬಿಟ್ಟುಬಿಡಿ ಎಂದು ಧೋನಿ ಅಭಿಮಾನಿಗಳ ಎದುರು ಅಂಗಲಾಚಿದ್ದ ಆಕಾಶ್ ಛೋಪ್ರ!
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಕೊಹ್ಲಿ ನಾಯಕತ್ವದಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಆಗಾಗ ಬದಲಾವಣೆ ತರುವುದನ್ನು ಮೊದಲು ನಿಲ್ಲಿಸಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ತಂಡದಲ್ಲಿ ಆಡಬೇಕಿರುವ ರಿಷಭ್ ಪಂತ್ ವಾಟರ್ ಬಾಯ್ ಆಗಿರುವುದನ್ನು ಕಟುವಾಗಿ ಟೀಕಿಸಿದ್ದಾರೆ.
"ಕೊಹ್ಲಿ ಹೆಚ್ಚು ಏಕಾಗ್ರತೆ ವಹಿಸಿ ತಮ್ಮ ತಂಡದ ಆಯ್ಕೆ ಮಾಡಬೇಕು. ಕೆಲ ಆಟಗಾರರು ಫಾರ್ಮ್ ಕಳೆದುಕೊಂಡರೆ ಅವರಿಗೆ ಬೆಂಬಲ ನೀಡಬೇಕು. ಆಟಗಾರರನ್ನು ನಿರ್ಮಿಸುವ ಕಡೆಗೆ ಕೊಹ್ಲಿ ಕೆಲಸ ಮಾಡಬೇಕಿದೆ. ಆಗಷ್ಟೇ ಅವರಿಂದ ಬಲಿಷ್ಠ ತಂಡ ರಚಿಸಲು ಸಾಧ್ಯ," ಎಂದು ಕೈಫ್ ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
ಸೆಹ್ವಾಗ್ ದಾಖಲೆ ಮುರಿಯುವುದು ಯುವಿ ನಿರೀಕ್ಷೆಯಾಗಿತ್ತು ಎಂದ ರೋಹಿತ್ ಶರ್ಮಾ
"ಇನ್ನು ತಂಡದಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸಲುವಾಗಿ ಹಲವು ಬದಲಾವಣೆ ಮಾಡಲಾಗುತ್ತಿದೆ. ಭಾರತ ತಂಡಕ್ಕೆ ಪರಿಣತ ಹಾಗೂ ಶಾಶ್ವತ ಕೀಪರ್ನ ಅಗತ್ಯವಿದೆ. ಕೆಎಲ್ ರಾಹುಲ್ ಬ್ಯಾಕ್ ಅಪ್ ಕೀಪರ್ ಆಗಿರಬೇಕು. ಅವರನ್ನೇ ಶಾಶ್ವತ ಕೀಪರ್ ಮಾಡುವುದು ಸರಿಯಲ್ಲ. ಧೋನಿ ಬದಲಿಗೆ ಪಂತ್ ಆಯ್ಕೆ ಮಾಡಿಕೊಂಡರೆ, ಕೊಹ್ಲಿ ಮೊದಲು ಪಂತ್ಗೆ ಬೆಂಬಲ ನೀಡಬೇಕು. ಅವರು ವಾಟರ್ ಬಾಯ್ ಆಗಿರಬಾರದು. ಕೊಹ್ಲಿ ಮತ್ತು ತಂಡ ಈ ಗೊಂದಲವನ್ನು ದಾಟಬೇಕಿದೆ. ಇದು ಸಾಧ್ಯವಾದರೆ ಕೊಹ್ಲಿ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಿ ನಿವೃತ್ತಿ ಹೊಂದುತ್ತಾರೆ," ಎಂದು ಕೈಫ್ ವಿವರಿಸಿದ್ದಾರೆ.
ಆದರೂ, ಕೊಹ್ಲಿ ನಾಯಕತ್ವದ ಬಗ್ಗೆ ಆಗಾಗ ಅಪಸ್ವರ ಕೇಳಿ ಬರುತ್ತಲೇ ಇದೆ. ಏಕೆಂದರೆ ಕೊಹ್ಲಿ ಮುಂದಾಳತ್ವದಲ್ಲಿ ಭಾರತ ತಂಡ ಈವರೆಗೆ ಐಸಿಸಿ ಟೂರ್ನಿಗಳಲ್ಲಿ ಪ್ರಶಸ್ತಿಗಳನ್ನು ಗೆದ್ದಿಲ್ಲ. ಜೊತೆಗೆ ನಿರ್ಣಾಯಕ ಪಂದ್ಯಗಳಲ್ಲಿ ಆಡುವ 11ರ ಬಳಗದ ಆಯ್ಕೆ ವಿಚಾರದಲ್ಲಿ ಕೊಹ್ಲಿ ಎಡವುದನ್ನು ವ್ಯಾಪಕವಾಗಿ ಟೀಕೆ ಮಾಡಲಾಗಿದೆ. ಇದಕ್ಕೆ ಪೂರಕ ಎಂಬಂತೆ ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯಲ್ಲೂ ಆರ್ಸಿಬಿ ತಂಡಕ್ಕೆ ಕೊಹ್ಲಿ ನಾಯಕತ್ವದಲ್ಲಿ ಈವರೆಗೆ ಯಶಸ್ಸು ಸಿಕ್ಕಿಲ್ಲ.
ತಮ್ಮನ್ನು ಬಿಟ್ಟುಬಿಡಿ ಎಂದು ಧೋನಿ ಅಭಿಮಾನಿಗಳ ಎದುರು ಅಂಗಲಾಚಿದ್ದ ಆಕಾಶ್ ಛೋಪ್ರ!
ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಕೊಹ್ಲಿ ನಾಯಕತ್ವದಲ್ಲಿ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಆಗಾಗ ಬದಲಾವಣೆ ತರುವುದನ್ನು ಮೊದಲು ನಿಲ್ಲಿಸಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ತಂಡದಲ್ಲಿ ಆಡಬೇಕಿರುವ ರಿಷಭ್ ಪಂತ್ ವಾಟರ್ ಬಾಯ್ ಆಗಿರುವುದನ್ನು ಕಟುವಾಗಿ ಟೀಕಿಸಿದ್ದಾರೆ.
"ಕೊಹ್ಲಿ ಹೆಚ್ಚು ಏಕಾಗ್ರತೆ ವಹಿಸಿ ತಮ್ಮ ತಂಡದ ಆಯ್ಕೆ ಮಾಡಬೇಕು. ಕೆಲ ಆಟಗಾರರು ಫಾರ್ಮ್ ಕಳೆದುಕೊಂಡರೆ ಅವರಿಗೆ ಬೆಂಬಲ ನೀಡಬೇಕು. ಆಟಗಾರರನ್ನು ನಿರ್ಮಿಸುವ ಕಡೆಗೆ ಕೊಹ್ಲಿ ಕೆಲಸ ಮಾಡಬೇಕಿದೆ. ಆಗಷ್ಟೇ ಅವರಿಂದ ಬಲಿಷ್ಠ ತಂಡ ರಚಿಸಲು ಸಾಧ್ಯ," ಎಂದು ಕೈಫ್ ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
ಸೆಹ್ವಾಗ್ ದಾಖಲೆ ಮುರಿಯುವುದು ಯುವಿ ನಿರೀಕ್ಷೆಯಾಗಿತ್ತು ಎಂದ ರೋಹಿತ್ ಶರ್ಮಾ
"ಇನ್ನು ತಂಡದಲ್ಲಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸಲುವಾಗಿ ಹಲವು ಬದಲಾವಣೆ ಮಾಡಲಾಗುತ್ತಿದೆ. ಭಾರತ ತಂಡಕ್ಕೆ ಪರಿಣತ ಹಾಗೂ ಶಾಶ್ವತ ಕೀಪರ್ನ ಅಗತ್ಯವಿದೆ. ಕೆಎಲ್ ರಾಹುಲ್ ಬ್ಯಾಕ್ ಅಪ್ ಕೀಪರ್ ಆಗಿರಬೇಕು. ಅವರನ್ನೇ ಶಾಶ್ವತ ಕೀಪರ್ ಮಾಡುವುದು ಸರಿಯಲ್ಲ. ಧೋನಿ ಬದಲಿಗೆ ಪಂತ್ ಆಯ್ಕೆ ಮಾಡಿಕೊಂಡರೆ, ಕೊಹ್ಲಿ ಮೊದಲು ಪಂತ್ಗೆ ಬೆಂಬಲ ನೀಡಬೇಕು. ಅವರು ವಾಟರ್ ಬಾಯ್ ಆಗಿರಬಾರದು. ಕೊಹ್ಲಿ ಮತ್ತು ತಂಡ ಈ ಗೊಂದಲವನ್ನು ದಾಟಬೇಕಿದೆ. ಇದು ಸಾಧ್ಯವಾದರೆ ಕೊಹ್ಲಿ ಭಾರತ ತಂಡದ ಸಾರ್ವಕಾಲಿಕ ಶ್ರೇಷ್ಠ ನಾಯಕನಾಗಿ ನಿವೃತ್ತಿ ಹೊಂದುತ್ತಾರೆ," ಎಂದು ಕೈಫ್ ವಿವರಿಸಿದ್ದಾರೆ.