ಆ್ಯಪ್ನಗರ

ಇದೇ ನೋಡಿ ಕ್ಯಾಚ್ ಆಫ್ ದಿ ಇಯರ್

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬೌಂಡರಿ ಗೆರೆ ಬಳಿಯಲ್ಲಿ ಅದ್ಭುತ ಕ್ಯಾಚ್ ಹಿಡಿಯಲು ನೆರವಾಗುವ ಮೂಲಕ ರಾಹುಲ್ ತ್ರಿಪಾಠಿ ಸುದ್ದಿಯಲ್ಲಿದ್ದಾರೆ. ಇದನ್ನು ವರ್ಷದ ಅತ್ಯುತ್ತಮ ಕ್ಯಾಚ್ ಎಂದು ವಿಶ್ಲೇಷಿಸಲಾಗುತ್ತಿದೆ.

Vijaya Karnataka Web 17 Mar 2019, 1:57 pm
ಹೊಸದಿಲ್ಲಿ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರ ಮಣಿಸಿರುವ ಕರ್ನಾಟಕ ತಂಡವು ಕಿರೀಟವನ್ನು ಎತ್ತಿ ಹಿಡಿದಿದೆ.
Vijaya Karnataka Web rahul-tripathi


ಈ ಮೊದಲು ಮಹಾರಾಷ್ಟ್ರದ ರಾಹುಲ್ ತ್ರಿಪಾಠಿ ಅದ್ಭುತ ಕ್ಯಾಚ್ ಹಿಡಿಯಲು ನೆರವಾಗುವ ಮೂಲಕ ಇಡೀ ಕ್ರಿಕೆಟ್ ಲೋಕವನ್ನೇ ನಿಬ್ಬೇರಾಗಿಸಿದ್ದಾರೆ.

ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ 28 ಹರೆಯದ ತ್ರಿಪಾಠಿ, ಬೌಂಡರಿ ಲೈನ್‌ನಲ್ಲಿ ಅಸಾಧ್ಯವೆನಿಸಿದ ಕ್ಯಾಚ್ ಹಿಡಿಯಲು ನೆರವಾಗಿದ್ದರು.

ಚೆಂಡು ಇನ್ನೇನು ಸಿಕ್ಸರ್ ಗೆರೆ ದಾಟುತ್ತಿದೆ ಅನ್ನುವಷ್ಟರಲ್ಲಿ ಚೆಂಡು ಹಿಡಿದ ತ್ರಿಪಾಠಿ, ಸಮತೋಲನ ತಪ್ಪುತ್ತಿದೆ ಅನ್ನುವಷ್ಟರಲ್ಲಿ ಮೈದಾನದಲ್ಲಿದ್ದ ಸಹ ಆಟಗಾರನತ್ತ ಚೆಂಡನ್ನು ಎಸೆದರು. ಈ ಮೂಲಕ ಅಮೋಘ ಸಮಯ ಪ್ರಜ್ಞೆಯನ್ನು ಮೆರೆದರು.

ಪ್ರಸ್ತುತ ಕ್ಯಾಚ್ ಅನ್ನು ವರ್ಷದ ಅತ್ಯುತ್ತಮ ಕ್ಯಾಚ್ ಎಂದೇ ಬಿಂಬಿಸಲಾಗಿದೆ. ಬಳಿಕ ರಿಪ್ಲೇ ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌