ಆ್ಯಪ್ನಗರ

ಎಂಎಸ್ ಧೋನಿ ನೈಜ ನಾಯಕ; ಶ್ರೇಯಸ್ ಅಯ್ಯರ್ ಮನದಾಳದ ಮಾತು

ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಎಲ್ಲರೂ ಮನೆಯಲ್ಲೇ ಇರುವಂತಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಕ್ರಿಕೆಟಿಗ ಶ್ರೇಯಸ್ ಅಯ್ಯರ್, ಟ್ವಿಟರ್ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

Vijaya Karnataka Web 27 Mar 2020, 3:20 pm

ಹೈಲೈಟ್ಸ್‌:

  • ಕೊರೊನಾ ವೈರಸ್ ಮಟ್ಟ ಹಾಕಲು ಸ್ಫೂರ್ತಿದಾಯಕ ವಿಡಿಯೋ ಹಂಚಿದ ಶ್ರೇಯಸ್ ಅಯ್ಯರ್.
  • ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ.
  • ಈ ಮಧ್ಯೆ ಮ್ಯೂಸಿಕ್ ಹೊರತಾಗಿ ಬದಕಲು ಕಷ್ಟ ಎಂದು ಅಭಿಮಾನಿಯ ಪ್ರಶ್ನೆಗೆ ಉತ್ತರವಾಗಿ ತಿಳಿಸಿದ್ದಾರೆ.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಶ್ರೇಯಸ್ ಅಯ್ಯರ್
ಹೊಸದಿಲ್ಲಿ: ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಏಪ್ರಿಲ್ 14ರ ವರೆಗೆ ಸಂಪೂರ್ಣವಾಗಿ ಲಾಕ್‌ಡೌನ್ ಮಾಡಲಾಗಿದೆ.
ಈ ಅವಧಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಮನೆಯಲ್ಲೇ ಉಳಿದುಕೊಳ್ಳುವಂತೆ ತಿಳಿಸಲಾಗಿದೆ. ಅಲ್ಲದೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಸೂಚಿಸಲಾಗಿದೆ.

ಕೋವಿಡ್ 19 ವೈರಸ್ ಸೋಂಕು ಪ್ರಕರಣದ ಭೀತಿಯ ಹಿನ್ನೆಲೆಯಲ್ಲಿ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳನ್ನು ನಿಲುಗಡೆಗೊಳಿಸಲಾಗಿದೆ. ಇದರಿಂದ ಕ್ರಿಕೆಟಿಗರೂ ಮನೆಯಲ್ಲೇ ಕಾಲ ಕಳೆಯುವಂತಾಗಿದೆ.

ಚೊಚ್ಚಲ ಕಪ್ ಗೆಲ್ಲಲು ಆರ್‌ಸಿಬಿ ಮಾಡಲೇಬಾರದ 5 ತಪ್ಪುಗಳು!

ಕೆಲವು ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಇದ್ದುಕೊಂಡು ಸೋದರಿ ಜೊತೆಗೆ ಮ್ಯಾಜಿಕ್ ಟ್ರಿಕ್ಸ್ ಪ್ರದರ್ಶಿಸಿರುವ ಶ್ರೇಯಸ್ ಅಯ್ಯರ್, ಜಾದೂ ಮೆರೆದಿದ್ದರು. ಬಳಿಕ ಮನೆಯಲ್ಲಿ ಸಾಕು ನಾಯಿಯೊಂದಿಗೂ ಆಟವಾಡುವ ವಿಡಿಯೋವನ್ನು ಹಂಚಿದ್ದರು.

ಇದೀಗ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ #AskShreyas ಹ್ಯಾಶ್‌ಟ್ಯಾಗ್ ಮೂಲಕ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಉತ್ತರವನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಭಿಮಾನಿಯೊಬ್ಬರು ಮಾಜಿ ನಾಯಕ ಹಾಗೂ ಹಿರಿಯ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಬಗ್ಗೆ ಅಭಿಪ್ರಾಯವನ್ನು ಕೇಳಿದ್ದರು.

ಸಿಡಿಲಮರಿ ಸಚಿನ್ ಓಪನರ್; ಭಾರತೀಯ ಕ್ರಿಕೆಟ್ ಬದಲಾಯಿಸಿದ ಅಂದಿನ ಈ ದಿನ!

ಇದಕ್ಕೆ ಉತ್ತರವಾಗಿ ಶ್ರೇಯಸ್ 'ಅಯ್ಯರ್, ಕೂಲ್, ಶಾಂತ, ಸ್ಥಿರತೆ ಮತ್ತು ನೈಜವಾದ ಕಪ್ತಾನ' ಎಂಬ ಉತ್ತರ ನೀಡಿದ್ದಾರೆ. ಈ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

2019ನೇ ಸಾಲಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಕೊನೆಯದಾಗಿ ಆಡಿರುವ ಮಹೇಂದ್ರ ಸಿಂಗ್ ಧೋನಿ ಅಲ್ಲಿಂದ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರವುಳಿದಿದ್ದರು.

ಈ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪುನರಾಗಮನವನ್ನು ಎದುರು ನೋಡುತ್ತಿರುವ ಮಹಿ ಪೂರ್ವ ಸಿದ್ಧತೆಯನ್ನು ಆರಂಭಿಸಿದ್ದರು. ಇದರಿಂದಾಗಿ ಟಿ20 ವಿಶ್ವಕಪ್ ತಂಡಕ್ಕೆ ಮರಳುವ ಸೂಚನೆ ನೀಡಿದ್ದರು.

21 ದಿನ ಲಾಕ್‌ಡೌನ್; ಪ್ರಧಾನಿ ಮೋದಿ ಆದೇಶ ಪಾಲಿಸುವಂತೆ ಸಚಿನ್, ಗಂಗೂಲಿ, ಕೊಹ್ಲಿ ಕರೆ

ಈ ಮಧ್ಯೆ ಕೊರೊನಾ ವೈರಸ್ ಭೀತಿಯಿಂದಾಗಿ ಐಪಿಎಲ್ ಏಪ್ರಿಲ್ 15ರ ವರೆಗೆ ಮುಂದೂಡಲಾಗಿದೆ. ಹಾಗೆಯೇ ಚೆನ್ನೈ ಸೂಪರ್ ಕಿಂಗ್ಸ್ ಅಭ್ಯಾಸ ಅವಧಿಯನ್ನು ನಿಲುಗಡೆಗೊಳಿಸಲಾಗಿದೆ. ಹಾಗೊಂದು ವೇಳೆ ಐಪಿಎಲ್ ರದ್ದಾದರೆ ಧೋನಿ ಭವಿಷ್ಯ ಏನಾಗಲಿದೆ ಎಂಬುದು ಗೊಂದಲಕ್ಕೆ ಕಾರಣವಾಗಿದೆ.

ಏತನ್ಮಧ್ಯೆ ಅಭಿಮಾನಿಯೊಬ್ಬರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಶ್ರೇಯಸ್ ಅಯ್ಯರ್, ಸಂಗೀತದ ಹೊರತಾಗಿ ಜೀವಿಸಲು ಅಸಾಧ್ಯ ಎಂದು ಹೇಳಿದ್ದಾರೆ.

ಲಾಕ್‌ಡೌನ್ ಬಗ್ಗೆ 7 ವರ್ಷಗಳ ಹಿಂದೆಯೇ ಭವಿಷ್ಯ; ಮತ್ತೆ ವೈರಲ್ ಆದ ಜೋಫ್ರಾ ಆರ್ಚರ್

ಹಾಗೆಯೇ ಈ ಕಠಿಣ ಸಮಯದಲ್ಲಿ ಜನರೊಂದಿಗೆ ಏನಾದರೂ ಸಂದೇಶ ಹಂಚಿಕೊಳ್ಳಲು ಬಯಸುತ್ತೀರಾ ಎಂಬುದಾಗಿ ಬಿಸಿಸಿಐ ಕೇಳಿದಾಗ, 'ಎಲ್ಲರೂ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಿದರು. ಈ ಸಂಬಂಧ ವಿಡಿಯೋ ಹಂಚಿರುವ ಶ್ರೇಯಸ್, ಕೊರೊನಾ ವೈರಸ್ ವಿರುದ್ಧ ನಾವೆಲ್ಲರೂ ಹೋರಾಡುತ್ತಿದ್ದೇವೆ. ನಮ್ಮ ಸರಕಾರ, ವೈದ್ಯಕೀಯ ಇಲಾಖೆ, ಪೊಲೀಸ್ ಹಾಗೂ ಆಡಳಿತ ವಿಭಾಗವು ಹಗಳಿರುಳು ದುಡಿಯುತ್ತಿದೆ. ನಾವು ಕೂಡಾ ಮನೆಯಲ್ಲೇ ಇರುವ ಮೂಲಕ ನಮ್ಮ ಕೊಡುಗೆಯ್ನನು ಸಲ್ಲಿಸಬೇಕಿದೆ. ಅನಿವಾರ್ಯ ಪರಿಸ್ಥಿತಿಯ ಹೊರತಾಗಿ ಮನೆಯಿಂದ ಹೊರಗೆ ಹೋಗಬೇಡಿ. ಆಗಾಗ ಕೈ ತೊಳೆಯುತ್ತಿರಿ. ಭಯ ಬೇಡ, ನಾವೆಲ್ಲರೂ ಒಗ್ಗಟ್ಟಾಗಿ ಈ ಪರಿಸ್ಥಿತಿಯಿಂದ ಹಾದು ಹೋಗಲಿದ್ದೇವೆ' ಎಂಬ ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು.
ಶ್ರೇಯಸ್ ಅಯ್ಯರ್ ಮ್ಯಾಜಿಕ್ ಟ್ರಿಕ್ಸ್; ಬಿಸಿಸಿಐನಿಂದ ಶಭಾಷ್‌ಗಿರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌