ಬೆಂಗಳೂರು: ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಪರ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ವಿಕೆಟ್ಕೀಪಿಂಗ್ ಜವಾಬ್ದಾರಿ ನಿಭಾಯಿಸಿ ತಾಯ್ನಾಡಿಗೆ ಹಿಂದಿರುಗಿರುವ ಅನುಭವಿ ಆಟಗಾರ ಎಂ.ಎಸ್ ಧೋನಿ, ತಮ್ಮ ಬಿಡುವಿನ ಸಮಯವನ್ನು ಹೊಸ ಪ್ರಯೋಗಗಳೊಂದಿಗೆ ಕಳೆಯುತ್ತಿದ್ದಾರೆ.
ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಕಾಲ ಕಳೆಯುತ್ತಿರುವ ಕ್ಯಾಪ್ಟನ್ ಕೂಲ್ ಖ್ಯಾತಿಯ ಆಟಗಾರ ಧೋನಿ, ಇತ್ತೀಚೆಗಷ್ಟೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ ಮೂಲಕ ವಿಡಿಯೊ ಒಂದನ್ನು ಪ್ರಕಟಿಸಿ ಸುದ್ದಿಯಾಗಿದ್ದಾರೆ. ಮನೆಯಲ್ಲಿದ್ದ ಸೈಕಲ್ ಬೆನ್ನೇರಿ ಅದಕ್ಕೆ ವಿವಿಧ ಸಲಕರಣೆಗಳನ್ನು ಜೋಡಿಸಿ ಬಾಯಲ್ಲಿ ಮರದ ಹಲಗೆಯೊಂದನ್ನು ಕಚ್ಚಿ ಹಿಡಿದು ಸೈಕಲ್ ಓಡಿಸಿರುವ ನಿಧಾನ ಗತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಪಾಯಕಾರಿ ಅಲ್ಲದ ಸಾಹಸವನ್ನು 'ನೀವೆಲ್ಲರೂ ಪ್ರಯತ್ನಿಸಿ' ಎಂದು ಅಭಿಮಾನಿಗಳೊಂದಿಗೆ ಧೋನಿ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ 37 ವರ್ಷದ ಧೋನಿ, ಏಕದಿನ ಕ್ರಿಕೆಟ್ನಲ್ಲಿ 10,000 ರನ್ಗಳನ್ನು ಪೂರೈಸಿದ ವಿಶ್ವದ 12ನೇ ಆಟಗಾರ ಎಂಬ ದಾಖಲೆ ಬರೆದಿದ್ದರು. ಅಲ್ಲದೆ ಭಾರತ ತಂಡ ಏಕದಿನ ಸರಣಿ ಸೋತ ಬಳಿಕ ಧೋನಿ ಅಂಪೈರ್ ಬಳಿ ಚೆಂಡನ್ನು ಕೇಳಿ ಪಡೆದ ಬೆನ್ನಲ್ಲೇ ಅವರ ನಿವೃತ್ತಿ ಕುರಿತಾದ ಸುದ್ದಿಗಳು ಹಬ್ಬಿದ್ದವು. ಆದರೆ, ಚೆಂಡನ್ನು ಪಡೆದದ್ದು ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಬಳಿ ಅದರ ಪರಿಶೀಲನೆ ನಡೆಸಿ ಸಲಹೆ ಪಡೆಯಲು ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಸ್ಪಷ್ಟ ಪಡಿಸಿದ್ದರು.
ರಾಂಚಿಯಲ್ಲಿರುವ ತಮ್ಮ ನಿವಾಸದಲ್ಲಿ ಕಾಲ ಕಳೆಯುತ್ತಿರುವ ಕ್ಯಾಪ್ಟನ್ ಕೂಲ್ ಖ್ಯಾತಿಯ ಆಟಗಾರ ಧೋನಿ, ಇತ್ತೀಚೆಗಷ್ಟೇ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆ ಮೂಲಕ ವಿಡಿಯೊ ಒಂದನ್ನು ಪ್ರಕಟಿಸಿ ಸುದ್ದಿಯಾಗಿದ್ದಾರೆ. ಮನೆಯಲ್ಲಿದ್ದ ಸೈಕಲ್ ಬೆನ್ನೇರಿ ಅದಕ್ಕೆ ವಿವಿಧ ಸಲಕರಣೆಗಳನ್ನು ಜೋಡಿಸಿ ಬಾಯಲ್ಲಿ ಮರದ ಹಲಗೆಯೊಂದನ್ನು ಕಚ್ಚಿ ಹಿಡಿದು ಸೈಕಲ್ ಓಡಿಸಿರುವ ನಿಧಾನ ಗತಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಪಾಯಕಾರಿ ಅಲ್ಲದ ಸಾಹಸವನ್ನು 'ನೀವೆಲ್ಲರೂ ಪ್ರಯತ್ನಿಸಿ' ಎಂದು ಅಭಿಮಾನಿಗಳೊಂದಿಗೆ ಧೋನಿ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿ 37 ವರ್ಷದ ಧೋನಿ, ಏಕದಿನ ಕ್ರಿಕೆಟ್ನಲ್ಲಿ 10,000 ರನ್ಗಳನ್ನು ಪೂರೈಸಿದ ವಿಶ್ವದ 12ನೇ ಆಟಗಾರ ಎಂಬ ದಾಖಲೆ ಬರೆದಿದ್ದರು. ಅಲ್ಲದೆ ಭಾರತ ತಂಡ ಏಕದಿನ ಸರಣಿ ಸೋತ ಬಳಿಕ ಧೋನಿ ಅಂಪೈರ್ ಬಳಿ ಚೆಂಡನ್ನು ಕೇಳಿ ಪಡೆದ ಬೆನ್ನಲ್ಲೇ ಅವರ ನಿವೃತ್ತಿ ಕುರಿತಾದ ಸುದ್ದಿಗಳು ಹಬ್ಬಿದ್ದವು. ಆದರೆ, ಚೆಂಡನ್ನು ಪಡೆದದ್ದು ಬೌಲಿಂಗ್ ಕೋಚ್ ಭರತ್ ಅರುಣ್ ಅವರ ಬಳಿ ಅದರ ಪರಿಶೀಲನೆ ನಡೆಸಿ ಸಲಹೆ ಪಡೆಯಲು ಎಂದು ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ ಸ್ಪಷ್ಟ ಪಡಿಸಿದ್ದರು.