ಆ್ಯಪ್ನಗರ

ಧೋನಿ, ಯುವಿ ಸ್ಥಾನವನ್ನು ತುಂಬುವುದು ಅಸಾಧ್ಯ: ಎಂಎಸ್‌ಕೆ ಪ್ರಸಾದ್

ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಲೆಜೆಂಡ್‌ಗಳಾಗಿದ್ದು, ಅವರ ಸ್ಥಾನಗಳನ್ನು ತುಂಬುವುದು ಅಸಾಧ್ಯ ಎಂದು ಆಯ್ಕೆ ಸಮಿತಿ ಮಾಜಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 7 Mar 2020, 11:19 am
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ತಮ್ಮ ಅಧಿಕಾರವಧಿಯಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ಅವರ ಆಯ್ಕೆಗೆ ಸಂಬಂಧಿಸಿದಂತೆ ಎಂಎಸ್‌ಕೆ ಪ್ರಸಾದ್ ನಿಲುವುಗಳು ಸಾಕಷ್ಟು ವದಂತಿಗಳು ಹಬ್ಬಲು ಕಾರಣವಾಗಿತ್ತು. ಇದೀಗ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸಿರುವ ಎಂಎಸ್‌ಕೆ ಪ್ರಸಾದ್, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಯುವರಾಜ್ ಸಿಂಗ್ ಬಗ್ಗೆ ಗಮನಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.
Vijaya Karnataka Web ಯುವರಾಜ್ ಸಿಂಗ್, ಮಹೇಂದ್ರ ಸಿಂಗ್ ಧೋನಿ


ಮಹೇಂದ್ರ ಸಿಂಗ್ ಧೋನಿ ಮತ್ತು ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ದಿಗ್ಗಜರಾಗಿದ್ದಾರೆ. ಅವರ ಸ್ಥಾನಗಳನ್ನು ತುಂಬುವುದು ಅಸಾಧ್ಯ. ಹಾಗಾಗಿ ಓರ್ವ ಆಯ್ಕೆಗಾರನಾಗಿ ಧೋನಿ ಮತ್ತು ಯುವಿ ವಿಚಾರಗಳನ್ನು ನಿಭಾಯಿಸುವುದು ಕಷ್ಟಕರವೆನಿಸಿತ್ತು ಎಂದಿದ್ದಾರೆ. ಯುವ ಪ್ರತಿಭೆಗಳನ್ನು ಗುರುತಿಸುವುದು ನಮ್ಮ ಮುಖ್ಯ ಧ್ಯೇಯವಾಗಿತ್ತು. ಯುವ ಆಟಗಾರರನ್ನು ಬೆಂಬಲಿಸುವುದು ನಮ್ಮ ಉದ್ದೇಶವಾಗಿತ್ತು. ಅದನ್ನೇ ಮಾಡಿದ್ದೇವೆ ಎಂದು ಸೇರಿಸಿದರು.

ಅದೇ ಹೊತ್ತಿಗೆ ಮಹೇಂದ್ರ ಸಿಂಗ್ ಧೋನಿ ಅವರ ಉತ್ತರಾಧಿಕಾರಿಯನ್ನು ಕಂಡು ಹುಡುಕುವುದು ತಮ್ಮ ಅಧಿಕಾರವಧಿಯಲ್ಲಿ ಎದುರಾದ ಅತ್ಯಂತ ಕಠಿಣ ಜವಾಬ್ದಾರಿಯಾಗಿತ್ತು ಎಂಬುದನ್ನು ಉಲ್ಲೇಖಿಸಿದರು. ಭಾರತೀಯ ಕ್ರಿಕೆಟ್‌ ಅನ್ನು ಉತ್ತುಂಗಕ್ಕೇರಿಸಿದ ಲೆಜೆಂಡ್‌ಗಳ ಸ್ಥಾನಕ್ಕೆ ಆಟಗಾರರನ್ನು ಹುಡುಕುವುದು ಕಷ್ಟದ ಕೆಲಸ ಎಂದವರು ಹೇಳಿದರು.

6, 6, 6, 6, 6: ಸತತ ಐದು ಸಿಕ್ಸರ್ ಬಾರಿಸಿ ತಾಕತ್ತು ಮೆರೆದ ಧೋನಿ ಬಾಸ್!

ಅದೇ ರೀತಿ ಬಿಳಿ ಚೆಂಡಿನಾಟದಿಂದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರನ್ನು ಕೈಬಿಟ್ಟಿರುವುದು ಕಷ್ಟಕರವಾದ ವಿಚಾರವಾಗಿತ್ತು ಎಂದು ಸೇರಿಸಿದರು.

ನಾಲ್ಕನೇ ಸ್ಥಾನಕ್ಕೆ ಸೂಕ್ತ ಆಟಗಾರನನ್ನು ಕಂಡು ಹಿಡಿಯುವಲ್ಲಿ ಎಂಎಸ್‌ಕೆ ಪ್ರಸಾದ್ ವಿಫಲವಾಗಿದ್ದರು. ಈ ಬಗ್ಗೆ ಕೇಳಿದಾಗ ನಾಲ್ಕನೇ ಕ್ರಮಾಂಕದ ಆಟಗಾರನ ಕೊರತೆಯಿಂದಾಗಿ ನಾವು ವಿಶ್ವಕಪ್ ಸೋತಿಲ್ಲ. ಅಗ್ರಸ್ಥಾನಿಯಾಗಿ ನಾವು ಸೆಮಿಫೈನಲ್ ತಲುಪಿದ್ದರು. ಆದರೆ ಒಂದು ಕೆಟ್ಟ ನಿರ್ಧಾರವು ಹಿನ್ನೆಡೆಗೆ ಕಾರಣವಾಯಿತು ಎಂದು ನುಡಿದರು.

ಆಟಗಾರರ ಜೊತೆಗೆ ಸಂವಹನ ಕೊರತೆಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಎಂಎಸ್‌ಕೆ ಪ್ರಸಾದ್, ನಮ್ಮ ಸಮಿತಿಯು ಆಟಗಾರರೊಂದಿಗೆ ವೈಯಕ್ತಿಕವಾಗಿ ಸಂಪರ್ಕ ಮಾಡಿ ಎಷ್ಟೊಂದು ಮಾತುಕತೆ ಮಾಡಿದ್ದೇವೆ ಎಂಬುದು ನನಮೆ ತಿಳಿದಿದೆ. ಇದನ್ನು ಸಾಬೀತು ಮಾಡುವ ಅಗತ್ಯವಿಲ್ಲ ಎಂದರು.

ಧೋನಿ ಭವಿಷ್ಯದ ಬಗ್ಗೆ ನಿಮ್ಮ ನಿಲುವೇನು? ಅಭ್ಯರ್ಥಿಗಳಿಗೆ ಎದುರಾಗಿತ್ತು ವಿಚಿತ್ರ ಪ್ರಶ್ನೆ!

ಎಂಎಸ್‌ಕೆ ಪ್ರಸಾದ್ ಸ್ಥಾನಕ್ಕೆ ಕರ್ನಾಟಕದ ಮಾಜಿ ಸ್ಪಿನ್ ಮಾಂತ್ರಿಕ ಸುನಿಲ್ ಜೋಶಿ ಆಯ್ಕೆಯಾಗಿದ್ದಾರೆ. ಹಾಗೆಯೇ ಆಯ್ಕೆ ಸಮಿತಿಯಲ್ಲಿ ಕೇಂದ್ರ ವಲಯದ ಸದಸ್ಯರಾಗಿ ಹರ್ವಿಂದರ್ ಸಿಂಗ್ ನೇಮಕಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌