ಹೊಸದಿಲ್ಲಿ: ಟೀಮ್ ಇಂಡಿಯಾ ನವೆಂಬರ್ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, 14 ದಿನಗಳ ಕ್ವಾರಂಟೈನ್ಗೆ ಒಳಪಟ್ಟ ಬಳಿಕ ಟಿ20, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ಸರಣಿಗಳನ್ನು ಆಡಲಿದೆ. ಈ ಸಲುವಾಗಿ ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳು ಇಂಗ್ಲೆಂಡ್ ಪ್ರವಾಸ ಸಲುವಾಗಿ ಪ್ರಕಟಿಸಿದ ದೊಡ್ಡ ತಂಡಗಳ ರೀತಿ ಟೀಮ್ ಇಂಡಿಯಾ ಕೂಡ 26 ಮಂದಿ ಸದಸ್ಯರನ್ನು ಹೆಸರಿಸುವುದು ಉತ್ತಮ ಎಂದು ಮಾಜಿ ಚೀಫ್ ಸೆಲೆಕ್ಟರ್ ಎಂಎಸ್ಕೆ ಪ್ರಸಾದ್ ಹೇಳಿದ್ದಾರೆ. "ಟೀಮ್ ಮ್ಯಾನೇಜ್ಮೆಂಟ್ಗೆ ಇದೊಂದು ಉತ್ತಮ ಅವಕಾಶ. ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕದ ತಟ್ಟುತ್ತಿರುವ ಯುವ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಇಲ್ಲಿ ಸಾಧ್ಯವಾಗಲಿದೆ. ಈ ಮೂಲಕ ಭವಿಷ್ಯದಲ್ಲಿ ತಂಡದಲ್ಲಿ ಮಿಂಚಬಲ್ಲ ಆಟಗಾರರನ್ನು ಗುರುತಿಸಲು ಸಾಧ್ಯವಾಗಲಿದೆ," ಎಂದು ಪ್ರಸಾದ್ ಅಭಿಪ್ರಾಯ ಪಟ್ಟಿದ್ದಾರೆ.
ಐಪಿಎಲ್ ಟೂರ್ನಿ ನವೆಂಬರ್ 8ಕ್ಕೆ ಅಂತ್ಯಗೊಳ್ಳಲಿದ್ದು, ನ.10ಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ನಂತರ ಅಡಿಲೇಡ್ನಲ್ಲಿ 14 ದಿನಗಳ ಕ್ವಾರಂಟೈನ್ಗೆ ಒಳಪಡಲಿದ್ದು, ಈ ಅವಧಿಯಲ್ಲಿ ಅಭ್ಯಾಸ ಪಂದ್ಯವನ್ನೂ ಆಡಲಿದೆ.
2014ರ ಇಂಗ್ಲೆಂಡ್ ಪ್ರವಾಸದ ವೈಫಲ್ಯದಿಂದ ಕಂಗಾಲಾಗಿದ್ದ ಕೊಹ್ಲಿಗೆ ನೆರವಾಗಿದ್ದು ದೇವರು!
"ಅಲ್ಲಿ ಒದಗಿಸುವ ನೆಟ್ಸ್ಬೌಲರ್ಗಳನ್ನು ನಾವು ಕೋವಿಡ್-19 ಸೋಂಕಿನ ಕಾರಣ ನಂಬುವ ಹಾಗಿಲ್ಲ. ಹೀಗಾಗಿ ದೊಡ್ಡ ತಂಡ ಕಟ್ಟಿ ಕಳುಹಿಸಿದರೆ ಅಭ್ಯಾಸಕ್ಕೂ ಅನುಕೂಲ ಆಗಲಿದೆ. ಇನ್ನು ಯಾವುದಾದರೂ ಆಟಗಾರನಿಗೆ ಸೋಂಕು ತಗುಲಿದರೂ ಕೂಡಲೇ ಬದಲು ಆಟಗಾರನನ್ನು ಹೊಂದುವುದು ಕೂಡ ಸಾಧ್ಯವಾಗುತ್ತದೆ," ಎಂದು ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದ ವೇಳೆ ಪ್ರಸಾದ್ ಹೇಳಿದ್ದಾರೆ.
ಇದೇ ವೇಳೆ ಪ್ರಸಾದ್ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಇದಕ್ಕೆ ತಮ್ಮ ಆಯ್ಕೆ 26 ಸದಸ್ಯರ ಬಲಿಷ್ಠ ತಂಡವನ್ನು ಮಾಜಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಪ್ರಸಾದ್ ರಚಿಸಿದ್ದಾರೆ.
ಬಾಬರ್ ಆಝಮ್ ಬೆಸ್ಟ್ ಬ್ಯಾಟ್ಸ್ಮನ್ ಎಂದ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್!
ಎಂಎಸ್ಕೆ ಪ್ರಸಾದ್ ಆಯ್ಕೆ ಮಾಡಿದ ಟೀಮ್ ಇಂಡಿಯಾ ಹೀಗಿದೆ.
ಓಪನರ್ಸ್: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ ಮತ್ತು ಕೆಎಲ್ ರಾಹುಲ್.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಸ್: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್.
ವಿಕೆಟ್ ಕೀಪರ್ಸ್: ರಿಷಭ್ ಪಂತ್, ವೃದ್ಧಿಮಾನ್ ಸಹಾ.
ಸ್ಪಿನ್ನರ್ಸ್: ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಹಬಾಝ್ ನದೀಮ್, ರಾಹುಲ್ ಚಹರ್, ಕುಲ್ದೀಪ್ ಯಾದವ್.
ಆಲ್ರೌಂಡರ್ಸ್: ಹಾರ್ದಿಕ್ ಪಾಂಡ್ಯ.
ವೇಗಿಗಳು: ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ನವದೀಪ್ ಸೈನಿ, ಖಲೀಲ್ ಅಹ್ಮದ್, ಶಾದುಳ್ ಠಾಕೂರ್.
ವೈಟ್ಬಾಲ್ ಕ್ರಿಕೆಟ್ ಸಲುವಾಗಿ: ದೀಪಕ್ ಚಹರ್, ಯುಜ್ವೇಂದ್ರ ಚಹಲ್, ಕೃಣಾಲ್ ಪಾಂಡ್ಯ.
ಐಪಿಎಲ್ ಟೂರ್ನಿ ನವೆಂಬರ್ 8ಕ್ಕೆ ಅಂತ್ಯಗೊಳ್ಳಲಿದ್ದು, ನ.10ಕ್ಕೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ನಂತರ ಅಡಿಲೇಡ್ನಲ್ಲಿ 14 ದಿನಗಳ ಕ್ವಾರಂಟೈನ್ಗೆ ಒಳಪಡಲಿದ್ದು, ಈ ಅವಧಿಯಲ್ಲಿ ಅಭ್ಯಾಸ ಪಂದ್ಯವನ್ನೂ ಆಡಲಿದೆ.
2014ರ ಇಂಗ್ಲೆಂಡ್ ಪ್ರವಾಸದ ವೈಫಲ್ಯದಿಂದ ಕಂಗಾಲಾಗಿದ್ದ ಕೊಹ್ಲಿಗೆ ನೆರವಾಗಿದ್ದು ದೇವರು!
"ಅಲ್ಲಿ ಒದಗಿಸುವ ನೆಟ್ಸ್ಬೌಲರ್ಗಳನ್ನು ನಾವು ಕೋವಿಡ್-19 ಸೋಂಕಿನ ಕಾರಣ ನಂಬುವ ಹಾಗಿಲ್ಲ. ಹೀಗಾಗಿ ದೊಡ್ಡ ತಂಡ ಕಟ್ಟಿ ಕಳುಹಿಸಿದರೆ ಅಭ್ಯಾಸಕ್ಕೂ ಅನುಕೂಲ ಆಗಲಿದೆ. ಇನ್ನು ಯಾವುದಾದರೂ ಆಟಗಾರನಿಗೆ ಸೋಂಕು ತಗುಲಿದರೂ ಕೂಡಲೇ ಬದಲು ಆಟಗಾರನನ್ನು ಹೊಂದುವುದು ಕೂಡ ಸಾಧ್ಯವಾಗುತ್ತದೆ," ಎಂದು ಪಿಟಿಐಗೆ ನೀಡಿರುವ ವಿಶೇಷ ಸಂದರ್ಶನದ ವೇಳೆ ಪ್ರಸಾದ್ ಹೇಳಿದ್ದಾರೆ.
ಇದೇ ವೇಳೆ ಪ್ರಸಾದ್ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡುವಂತೆ ಕೇಳಲಾಗಿತ್ತು. ಇದಕ್ಕೆ ತಮ್ಮ ಆಯ್ಕೆ 26 ಸದಸ್ಯರ ಬಲಿಷ್ಠ ತಂಡವನ್ನು ಮಾಜಿ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಪ್ರಸಾದ್ ರಚಿಸಿದ್ದಾರೆ.
ಬಾಬರ್ ಆಝಮ್ ಬೆಸ್ಟ್ ಬ್ಯಾಟ್ಸ್ಮನ್ ಎಂದ ದಕ್ಷಿಣ ಆಫ್ರಿಕಾದ ಮಾಜಿ ಸ್ಪಿನ್ನರ್!
ಎಂಎಸ್ಕೆ ಪ್ರಸಾದ್ ಆಯ್ಕೆ ಮಾಡಿದ ಟೀಮ್ ಇಂಡಿಯಾ ಹೀಗಿದೆ.
ಓಪನರ್ಸ್: ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಪೃಥ್ವಿ ಶಾ ಮತ್ತು ಕೆಎಲ್ ರಾಹುಲ್.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಸ್: ವಿರಾಟ್ ಕೊಹ್ಲಿ (ಕ್ಯಾಪ್ಟನ್), ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ, ಹನುಮ ವಿಹಾರಿ, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್.
ವಿಕೆಟ್ ಕೀಪರ್ಸ್: ರಿಷಭ್ ಪಂತ್, ವೃದ್ಧಿಮಾನ್ ಸಹಾ.
ಸ್ಪಿನ್ನರ್ಸ್: ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಹಬಾಝ್ ನದೀಮ್, ರಾಹುಲ್ ಚಹರ್, ಕುಲ್ದೀಪ್ ಯಾದವ್.
ಆಲ್ರೌಂಡರ್ಸ್: ಹಾರ್ದಿಕ್ ಪಾಂಡ್ಯ.
ವೇಗಿಗಳು: ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಉಮೇಶ್ ಯಾದವ್, ನವದೀಪ್ ಸೈನಿ, ಖಲೀಲ್ ಅಹ್ಮದ್, ಶಾದುಳ್ ಠಾಕೂರ್.
ವೈಟ್ಬಾಲ್ ಕ್ರಿಕೆಟ್ ಸಲುವಾಗಿ: ದೀಪಕ್ ಚಹರ್, ಯುಜ್ವೇಂದ್ರ ಚಹಲ್, ಕೃಣಾಲ್ ಪಾಂಡ್ಯ.