ಆ್ಯಪ್ನಗರ

ಯುವಿ ಪ್ರಕಾರ ಟಿ20 ತರಹನೇ ಕ್ರಾಂತಿಯನ್ನುಂಟು ಮಾಡಲಿರುವ ಹೊಸ ಮಾದರಿ ಯಾವುದು ಗೊತ್ತೇ?

ಟಿ20 ತರಹನೇ 100 ಬಾಲ್ ಕ್ರಿಕೆಟ್ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಭಾರತದ ಮಾಜಿ ಡ್ಯಾಶಿಂಗ್ ಓಪನರ್ ಯುವರಾಜ್ ಸಿಂಗ್ ಭವಿಷ್ಯ ನುಡಿದಿದ್ದಾರೆ. ಅಲ್ಲದೆ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಸೂಕ್ತವೆನಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 18 Nov 2019, 2:43 pm
ಅಬು ದಾಬಿ: ದಶಕದ ಹಿಂದೆಯಷ್ಟೇ ಟ್ವೆಂಟಿ-20 ಕ್ರಿಕೆಟ್ ವಿಶ್ವ ಕ್ರಿಕೆಟ್‌ನಲ್ಲಿ ಭಾರಿ ಸಂಚಲನವನ್ನುಂಟು ಮಾಡಿತು. ಅಲ್ಲದೆ ಕೆಲವೇ ವರ್ಷಗಳಲ್ಲಿ ವಿಶ್ವದೆಲ್ಲೆಡೆ ಹೆಚ್ಚಿನ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಇದೀಗ ಟ್ವೆಂಟಿ20 ಕ್ರಿಕೆಟ್ ತರಹನೇ ಮಗದೊಂದು ಆವೃತ್ತಿಯು ಕ್ರಾಂತಿಯನ್ನುಂಟು ಮಾಡಲಿದೆ ಎಂದು ಭಾರತದ ಮಾಜಿ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web ಯುವರಾಜ್ ಸಿಂಗ್


ಅದು ಬೇರೆ ಯಾವುದು ಅಲ್ಲ. ಟ್ವೆಂಟಿ-20 ಪ್ರಕಾರದಂತೆ ಕ್ರಿಕೆಟ್ ಜನಕ ಇಂಗ್ಲೆಂಡ್‌ನಲ್ಲೇ ಹುಟ್ಟಿಕೊಂಡಿರುವ 100 ಬಾಲ್ ಕ್ರಿಕೆಟ್.

2011 ವಿಶ್ವಕಪ್ ಫೈನಲ್‌ನಲ್ಲಿ ಗಂಭೀರ್‌ಗೆ ಶತಕ ಮಿಸ್ ಆಗಲು ಧೋನಿ ಕಾರಣ?

ಹೊಸತಾದ 100 ಎಸೆತಗಳ ಪಂದ್ಯವು ಈಗಾಗಲೇ ರೋಚಕತೆಗೆ ಸಾಕ್ಷಿಯಾಗಿದೆ. ಟಿ20 ಮಾದರಿತಂತೆ ಇದು ಕೂಡಾ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಯುವಿ ಭವಿಷ್ಯ ನುಡಿದಿದ್ದಾರೆ.

2020ನೇ ಇಸವಿಯಲ್ಲಿ 100 ಬಾಲ್ ಗೇಮ್, ಸಾಂಪ್ರಾದಾಯಿಕ ಕೌಂಟಿ ಕ್ರಿಕೆಟ್‌ನ್ನು ಮೆಟ್ಟಿ ನಿಲ್ಲುವ ಸಾಧ್ಯತೆಯಿದೆ. ಟಿ20 ಯಶಸ್ಸಿನ ಬಳಿಕ ಹುಟ್ಟಿಕೊಂಡಿರುವ ಹೊಸ ಪ್ರಕಾರವು ಕ್ರಿಕೆಟ್‌ಗೆ ಹೊಸ ಆಯಾಮವನ್ನು ತುಂಬಲಿದೆ.

ವಿರಾಟ್ ಕೊಹ್ಲಿ ಭೇಟಿಯಾಗಲು ಬೇಲಿ ಹಾರಿದ ಅಭಿಮಾನಿ; ಮುಂದೇನಾಯ್ತು?

ಪ್ರಸ್ತುತ ಯುವರಾಜ್ ಸಿಂಗ್ ಅಬುದಾಬಿಯಲ್ಲಿ ನಡೆಯುತ್ತಿರುವ ಟಿ10 ಕ್ರಿಕೆಟ್ ಲೀಗ್‌ನಲ್ಲಿ ಮರಾಠಾ ಅರಬಿಯನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಮೊದಲ ಪಂದ್ಯದಲ್ಲಿ ಕೇವಲ ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಅಲ್ಲದೆ ಚುಟುಕು ಪ್ರಕಾರದಲ್ಲಿ ಬ್ಯಾಟ್ಸ್‌ಮನ್‌ಗಳು ಬಹುಬೇಗನೇ ಒತ್ತಡಕ್ಕೆ ಸಿಲುಕಲಿದ್ದಾರೆ ಎಂದು ಯುವಿ ಅಭಿಪ್ರಾಯಪಟ್ಟರು.

ಟಿ10 ಪ್ರಕಾರ ಹೆಚ್ಚು ರೋಚಕತೆಗೆ ಕಾರಣವಾಗಿದ್ದು, ಇನ್ನಿಂಗ್ಸ್ ಬೆಳೆಸಿಕೊಳ್ಳಲು ಹೆಚ್ಚು ಸಮಯ ಇರುವುದಿಲ್ಲ. ಹಾಗಾಗಿ ಬಿಗ್ ಹಿಟ್ಟರ್‌ಗಳು ಹಾಗೂ ನಾವೀನ್ಯತೆ ಹುಡುಕುವ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಸೂಕ್ತವೆನಿಸಲಿದೆ ಎಂದರು.

ಟೆಸ್ಟ್ ಕ್ರಿಕೆಟ್‌ಗೆ ಪುನರುಜ್ಜೀವನದ ಅಗತ್ಯವಿದೆ: ಸೌರವ್ ಗಂಗೂಲಿ

ಅದೇ ಹೊತ್ತಿಗೆ 100 ಎಸೆತಗಳ ಕ್ರಿಕೆಟ್ ಒಲಿಂಪಿಕ್ ಕ್ರೀಡಾಕೂಟಕ್ಕೂ ಹೊಂದಿಕೆಯಾಗಲಿದೆ ಎಂದು ಯುವಿ ಅಭಿಪ್ರಾಯಪಟ್ಟರು.

ತಾವೀಗ ನಿವೃತ್ತಿ ಜೀವನವನ್ನು ಆನಂದಿಸುತ್ತಿದ್ದೇನೆ. ವರ್ಷದಲ್ಲಿ ಎರಡು ಮೂರು ಟೂರ್ನಿಗಳಲ್ಲಿ ಭಾಗವಹಿಸುವುದು ನನ್ನ ಪಾಲಿಗೆ ಸೂಕ್ತವೆನಿಸಿದೆ. ಕಳೆದ 17 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಏರಿಳಿತಗಳನ್ನು ಕಂಡಿದ್ದು, ಇದೀಗ ಕುಟುಂಬದ ಜತೆ ಹೆಚ್ಚಿನ ಸಮಯ ವಿನಿಯೋಗಿಸಲು ಬಯಸುತ್ತೇನೆ. ಹಾಗಾಗಿ ಜಾಸ್ತಿ ಕ್ರಿಕೆಟ್ ಆಡಲು ಇಷ್ಟಪಡುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌