ಆ್ಯಪ್ನಗರ

ದ. ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಟೀಮ್‌ ಇಂಡಿಯಾ ಆಯ್ಕೆ ಕುರಿತು ಮಾತನಾಡಿದ ಗಂಗೂಲಿ!

ಭಾರತ ತಂಡ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ಏಕದಿನ ಸರಣಿಯನ್ನಾಡಲಿದ್ದು, ಟೀಮ್‌ ಇಂಡಿಯಾ ಆಯ್ಕೆ ಕುರಿತಾಗಿ ಬಿಸಿಸಿಐ ಬಾಸ್‌ ಸೌರವ್‌ ಗಂಗೂಲಿ ಮಾತನಾಡಿದ್ದಾರೆ. ಭಾರತ ತಂಡ 3 ಪಂದ್ಯಗಳ ಒಡಿಐನಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಲಿದೆ.

Vijaya Karnataka Web 27 Jan 2020, 9:27 pm
ಹೊಸದಿಲ್ಲಿ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮಾರ್ಚ್‌ನಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಗೆ ನೂತನ ಮುಖ್ಯಸ್ಥರನ್ನು ಒಳಗೊಂಡ ಆಯ್ಕೆ ಸಮಿತಿಯು ಭಾರತ ತಂಡವನ್ನು ಆಯ್ಕೆ ಮಾಡಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹೇಳಿದ್ದಾರೆ.
Vijaya Karnataka Web Sourav Ganguly 2020 bcci


ಹಾಲಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ ಅವರ ಅಧಿಕಾರ ಅವಧಿ ಅಂತ್ಯಗೊಂಡಿದ್ದು, ಆ ಸ್ಥಾನಕ್ಕೆ ಹೊಸಬರನ್ನು ನೇಮಕ ಮಾಡಲು ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಕೆಗೆ ಜ.24 ಅಂತಿಮ ಗಡುವಾಗಿತ್ತು. ಈ ಹುದ್ದೆ ಅಲಂಕರಿಸಲು ಭಾರತ ತಂಡದ ಮಾಜಿ ದಿಗ್ಗಜರುಗಳಾದ ಲಕ್ಷ್ಮಣ್‌ ಶಿವರಾಮಕೃಷ್ಣನ್‌, ಅಜಿತ್‌ ಅಗರ್ಕರ್‌, ರಾಜೇಶ್‌ ಚೌಹಾಣ್‌ ಮತ್ತು ವೆಂಕಟೇಶ್‌ ಪ್ರಸಾದ್‌ ಸೇರಿದಂತೆ ಮೊದಲಾದವರು ಮುಂಚೂಣಿಯಲ್ಲಿದ್ದಾರೆ.

ಐದು ಮಂದಿ ಸದಸ್ಯರನ್ನು ಹೊಂದಿರುವ ಟೀಮ್‌ ಇಂಡಿಯಾ ಆಯ್ಕೆ ಸಮಿತಿಯಲ್ಲಿ ಎಂಎಸ್‌ಕೆ ಪ್ರಸಾದ್‌ (ದಕ್ಷಿಣ ವಲಯ) ಮತ್ತು ಗಗನ್‌ ಖೋಡಾ (ಕೇಂದ್ರ ವಲಯ) ಅವರ ಅಧಿಕಾರ ಅವಧಿ ಕಳೆದ ವರ್ಷ ಭಾರತದ ವೆಸ್ಟ್‌ ಇಂಡೀಸ್‌ ಪ್ರವಾಸದೊಂದಿಗೆ ಅಂತ್ಯಗೊಂಡಿದೆ.

ಟೀಮ್‌ ಇಂಡಿಯಾ ಬಸ್‌ನಲ್ಲಿ ಧೋನಿಗೆ ಮೀಸಲಿಟ್ಟ ಸೀಟ್‌ನಲ್ಲಿ ಯಾರೂ ಕುಳಿತುಕೊಳ್ಳುವುದಿಲ್ಲ!

"ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಹಳೆಯ ಆಯ್ಕೆ ಸಮಿತಿಯೇ ತಂಡವನ್ನು ಆಯ್ಕೆ ಮಾಡಿದೆ. ಹೀಗಾಗಿ ಹೊಸ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಮೊದಲ ಸಭೆ ನಡೆಸಲಿದೆ. ಇದೇ ವೇಳೆ ಆಯ್ಕೆ ಸಮಿತಿ ಸದಸ್ಯರ ಸ್ಥಾನಕ್ಕೆ ಅರ್ಜಿ ಸಲ್ಲಿಸಿರುವವರ ಸಂದರ್ಶನ ಶೀಘ್ರದಲ್ಲೇ ನಡೆಯಲಿದೆ," ಎಂದು ಸೌರವ್‌ ಗಂಗೂಲಿ ಹೇಳಿದ್ದಾರೆ.

ಐಪಿಎಲ್‌ 2020 ಟೂರ್ನಿಯ ಮಹತ್ವದ ಬದಲಾವಣೆಗಳನ್ನು ತಿಳಿಸಿದ ಬಿಸಿಸಿಐ ಬಾಸ್‌!

ಈ ಮಧ್ಯೆ ಮದನ್‌ ಲಾಲ್‌ ಮತ್ತು ಸುಲಕ್ಷಣ ನಾಯಕ್‌ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯ ಸದಸ್ಯರಾಗಲಿದ್ದಾರೆ ಎಂದು ಬಿಸಿಸಿಐ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. ಗೌತಮ್‌ ಗಂಭೀರ್‌ ಸಂಸದರಾಗಿರುವ ಕಾರಣ ಅವರಿಗೆ ಬಿಸಿಸಿಐನಲ್ಲಿ ಯಾವುದೇ ಸ್ಥಾನ ಹೊಂದಲು ಸಾಧ್ಯವಿಲ್ಲ. ಹೀಗಾಗಿ ಅವರ ಸ್ಥಾನಕ್ಕೆ ಬೇರೆಯವರನ್ನು ಕರೆ ತರುವ ಕಡೆಗೆ ಆಲೋಚಿಸಲಾಗಿದೆ. "ಗೌತಮ್‌ ಗಂಭೀರ್‌ ಅವರ ಬದಲಾಗಿ ಯಾರು ಸ್ಥಾನ ಪಡೆಯುತ್ತಾರೆ ಎಂಬುದನ್ನು ಶೀಘ್ರದಲ್ಲೇ ಘೋಷಿಸಲಿದ್ದೇವೆ. ಈ ಸಮಿತಿಯಲ್ಲಿ ಮದನ್‌ ಲಾಲ್‌ ಮತ್ತು ಸುಲಕ್ಷಣ ಈಗಾಗಲೇ ಸ್ಥಾನ ಪಡೆದಿದ್ದಾರೆ," ಎಂದು ಹೇಳಿದ್ದಾರೆ.

ಬುಮ್ರಾ ಎದುರು ಬ್ಯಾಟ್‌ ಬೀಸೋದು ಬಲು ಕಷ್ಟ ಎಂದು ಕಿವೀಸ್‌ ಬ್ಯಾಟ್ಸ್‌ಮನ್‌!

ಹಾರ್ದಿಕ್‌ ಪಾಂಡ್ಯ ಇನ್ನು ಚೇತರಿಸಿಲ್ಲಇದೇ ವೇಳೆ ಟೀಮ್‌ ಇಂಡಿಯಾದ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರ ಫಿಟ್ನೆಸ್‌ ಕುರಿತಾಗಿ ಮಾತನಾಡಿರುವ ಸೌರವ್‌, ಪಂದ್ಯವನ್ನು ಆಡಲು ಬೇಕಿರುವ ಫಿಟ್ನೆಸ್‌ಗೆ ಪಾಂಡ್ಯ ಇನ್ನು ಮರಳಿಲ್ಲ ಎಂದಿದ್ದಾರೆ. "ಹಾರ್ದಿಕ್‌ ಈಗ ಆಡಲು ಸಾಧ್ಯವಿಲ್ಲ. ಅವರು ಫಿಟ್ನೆಸ್‌ಗೆ ಮರಳಲು ಇನ್ನು ಸಮಯ ಬೇಕಿದೆ," ಎಂದಿದ್ದಾರೆ. ನ್ಯೂಜಿಲೆಂಡ್‌ ಪ್ರವಾಸಕ್ಕೆ ಭಾರತ ತಂಡ ಪ್ರಕಟಿಸುವುದಕ್ಕೂ ಮುನ್ನ ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಹಾರ್ದಿಕ್‌ ತಮ್ಮ ಫಿಟ್ನೆಸ್‌ ಸಾಬೀತು ಪಡಿಸುವಲ್ಲಿ ವಿಫಲರಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌