ಆ್ಯಪ್ನಗರ

ಮುಂದಿನ ಪೀಳಿಗೆಯ ಕ್ರಿಕೆಟಿಗರ ಭವಿಷ್ಯ ರೂಪಿಸುತ್ತಿರುವ ಶಿಲ್ಪಿ ರಾಹುಲ್ ದ್ರಾವಿಡ್

ದ್ರಾವಿಡ್‌ ಗರಡಿಯಲ್ಲಿ ಪಳಗಿದ ಮಯಾಂಕ್ ಅಗರ್‌ವಾಲ್‌, ಪೃಥ್ವಿ ಶಾ, ಹನುಮ ವಿಹಾರಿ ಭಾರತದ ಟೆಸ್ಟ್‌ ತಂಡದಲ್ಲಿ ಈಗಾಗಲೇ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ, ವಿಜಯ್‌ ಶಂಕರ್ ಹಾಗೂ ಶುಭಮನ್ ಗಿಲ್‌ ಸಹ ದ್ರಾವಿಡ್‌ರನ್ನು ಹೊಗಳಿದರೆ, ಕಳಪೆ ಫಾರ್ಮ್‌ನಲ್ಲಿದ್ದ ತನ್ನನ್ನು ಸುಧಾರಿಸಿದ ರಾಹುಲ್‌ ದ್ರಾವಿಡ್‌ರನ್ನು ಕೆ.ಎಲ್‌.ರಾಹುಲ್ ಶ್ಲಾಘಿಸಿದ್ದಾರೆ.

TIMESOFINDIA.COM 6 Mar 2019, 10:52 am
ಹೊಸದಿಲ್ಲಿ: 'ದಿ ವಾಲ್‌' ಖ್ಯಾತಿಯ ದ್ರಾವಿಡ್ ನಿವೃತ್ತಿ ಹೊಂದಿದ 7 ವರ್ಷಗಳು ಕಳೆದರೂ ದೇಶದ ಕ್ರಿಕೆಟ್‌ಗೆ ಈಗಲೂ ಪ್ರಮುಖ ಕೊಡುಗೆ ಕೊಡುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಆಟಗಾರರಾಗಿದ್ದ ದ್ರಾವಿಡ್, ಮುಂದಿನ ಪೀಳಿಗೆಯ ಕ್ರಿಕೆಟಿಗರನ್ನು ತಯಾರು ಮಾಡುತ್ತಿದ್ದಾರೆ.
Vijaya Karnataka Web rahul dravid


16 ವರ್ಷಗಳ ಕಾಲ ಟೆಸ್ಟ್‌ ತಂಡದಲ್ಲಿದ್ದ ರಾಹುಲ್ ದ್ರಾವಿಡ್ ಭಾರತದ ತಂಡದ ರಕ್ಷಣಾ ಕವಚವಾಗಿದ್ದರು. ಅಲ್ಲದೆ, ಟೀಂ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್‌ನಲ್ಲಿದ್ದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್‌ ಲಕ್ಷ್ಮಣ್‌ ಜತೆಯಲ್ಲಿ ದ್ರಾವಿಡ್‌ ಸಹಾ ಇದ್ದರು. ತಂಡದ ಸದಸ್ಯರು ದ್ರಾವಿಡ್‌ಗಿಂತ ಹೆಚ್ಚು ರನ್‌ ಗಳಿಸಿ ಅವರ ಸಾಧನೆ ಮರೆಮಾಚುತ್ತಿದ್ದರೂ, ಕ್ಲಾಸ್‌ ಪರ್ಫಾಮೆನ್ಸ್, ಉತ್ತಮ ಡಿಫೆನ್ಸ್‌ ಮೂಲಕ ರಾಹುಲ್‌ ಹೆಸರುವಾಸಿಯಾಗಿದ್ದರು.

ಉದಾಹರಣೆಗೆ 1996ರಲ್ಲಿ ಪದಾರ್ಪಣೆ ಪಂದ್ಯದಲ್ಲೇ ದ್ರಾವಿಡ್ 95 ರನ್‌ ಸಿಡಿಸಿದ್ದರೆ, ಅದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಸೌರವ್ ಗಂಗೂಲಿ ಶತಕ ಬಾರಿಸುವ ಮೂಲಕ ಲಾರ್ಡ್ಸ್‌ನಲ್ಲಿ ದ್ರಾವಿಡ್‌ಗಿಂತ ಹೆಚ್ಚು ಮಿಂಚು ಹರಿಸಿದ್ದರು. ನಂತರ, 3 ವರ್ಷಗಳ ಬಳಿಕ ವಿಶ್ವಕಪ್ ಪಂದ್ಯದಲ್ಲಿ 145 ರನ್‌ ಸಿಸಿಡಿದ್ದರೆ ಅದೇ ಪಂದ್ಯದಲ್ಲಿ ಗಂಗೂಲಿ ಹೊಡೆದಿದ್ದ 183 ರನ್‌ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ನಂತರ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಗೆಲ್ಲಲು ದ್ರಾವಿಡ್‌ ರ 180 ರನ್‌ ಉತ್ತಮ ಕಾಣಿಕೆ ನೀಡಿದರೂ, ಲಕ್ಷ್ಮಣ್‌ರ 281 ರನ್‌ ಹೆಚ್ಚು ಸದ್ದು ಮಾಡಿತ್ತು.

ಇನ್ನು, 24,000ಕ್ಕೂ ಅಧಿಕ ರನ್‌ಗಳನ್ನು ಸಿಡಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಧನೆ ಮಾಡಿರುವ ದ್ರಾವಿಡ್‌, ನಂತರ ಟೀಂ ಇಂಡಿಯಾದ ಅಂಡರ್ 19 ಹಾಗೂ ಎ ತಂಡದ ಕೋಚ್‌ ಆಗಿದ್ದು, ಯುವಕರನ್ನು ಭಾರತದ ಹಿರಿಯರ ತಂಡಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ದ್ರಾವಿಡ್‌ ಗರಡಿಯಲ್ಲಿ ಪಳಗಿದ ಮಯಾಂಕ್ ಅಗರ್‌ವಾಲ್‌, ಪೃಥ್ವಿ ಶಾ, ಹನುಮ ವಿಹಾರಿ ಭಾರತದ ಟೆಸ್ಟ್‌ ತಂಡದಲ್ಲಿ ಈಗಾಗಲೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು, ಮಂಗಳವಾರ ( ಮಾರ್ಚ್ 5,2019)ರಲ್ಲಿ ನಡೆದ ಆಸೀಸ್‌ ವಿರುದ್ಧ ಏಕದಿನ ಪಂದ್ಯ ಗೆಲ್ಲಲು ಪ್ರಮುಖ ಕಾರಣರಾದ ಆಲ್‌ ರೌಂಡರ್ ವಿಜಯ್‌ ಶಂಕರ್ ವಿಶ್ವಕಪ್‌ನಲ್ಲಿ ಆಡುವ ಕನಸು ಕಾಣುತ್ತಿದ್ದರೆ, ಶುಭಮನ್ ಗಿಲ್‌ ನ್ಯೂಜಿಲೆಂಡ್‌ ವಿರುದ್ಧ ಏಕದಿನ ಪಂದ್ಯದಲ್ಲಿ ಆಡಿದ್ದರು.

ಆಸ್ಟ್ರೇಲಿಯಾ ಪ್ರವಾಸದಲ್ಲಿ ಉತ್ತಮ ಆಟವಾಡಿದ್ದ ಮಯಾಂಕ್ ಅಗರ್‌ವಾಲ್‌ ದಿ ವಾಲ್‌ ಬಗ್ಗೆ ಮಾತನಾಡಿದ್ದು, '' ಅವರು ನಮಗೆಲ್ಲ ಉತ್ತಮ ಮಾರ್ಗದರ್ಶಿ'' ಎಂದಿದ್ದಾರೆ. ಟೆಸ್ಟ್‌ ಪಂದ್ಯಗಳಲ್ಲಿ ಮಾನಸಿಕ ಶಕ್ತಿ ನಿರ್ವಹಣೆ ಮಾಡುವ ಬಗ್ಗೆ ದ್ರಾವಿಡ್‌ರಿಂದ ಹೆಚ್ಚು ಕಲಿತಿದ್ದೇನೆ'' ಎಂದೂ ಅಗರ್‌ವಾಲ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಕೆರಿಯರ್ ಪರಿವರ್ತನೆಗೆ ದ್ರಾವಿಡ್ ಸರ್ ಅವರಿಗೆ ಗಿಲ್ ಶ್ರೇಯ ಸಲ್ಲಿಸಿದ್ದರು.

ಅಲ್ಲದೆ, ಕಳಪೆ ಫಾರ್ಮ್‌ನಲ್ಲಿದ್ದ ಕೆ.ಎಲ್‌.ರಾಹುಲ್ ಹಾಗೂ ನಂತರ ಟಿವಿ ಶೋನಲ್ಲಿ ಸೂಕ್ತವಲ್ಲದ ಕಾಮೆಂಟ್‌ಗಳನ್ನು ಮಾಡಿ ಅಮಾನತಿಗೊಳಗಾಗಿದ್ದ ಕರ್ನಾಟಕದ ಆಟಗಾರ ಎ ಟೀಂ ಸೇರಿದ ಬಳಿಕ ದ್ರಾವಿಡ್‌ ಗರಡಿಯಲ್ಲಿ ಪಳಗಿ ಹಾಗೂ ಅವರ ಜತೆಯಲ್ಲಿ ಹೆಚ್ಚು ಸಮಯ ಕಳೆದು ಮತ್ತೆ ತನ್ನ ಅದ್ಭುತ ಫಾರ್ಮ್ ಕಂಡುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌