ಆ್ಯಪ್ನಗರ

ನಂ.4 ಗೊಂದಲ; ವಿರಾಟ್ ಟೀಕಿಸಿದ ಗಂಭೀರ್

ಮುಂಬರುವ ಏಕದಿನ ವಿಶ್ವಕಪ್‌ಗಿಂತಲೂ ಮುಂಚಿತವಾಗಿ ಯಾವ ಆಟಗಾರ ನಂ.4 ಕ್ರಮಾಂಕದಲ್ಲಿ ಆಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಗೊಂದಲವನ್ನು ಪರಿಹರಿಸಬೇಕಿತ್ತು ಎಂದು ಮಾಜಿ ನಾಯಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 19 Mar 2019, 1:59 pm
ಹೊಸದಿಲ್ಲಿ: ಏಕದಿನ ವಿಶ್ವಕಪ್ ಸಮೀಪಿಸುತ್ತಿರುವಂತೆಯೇ ಟೀಮ್ ಇಂಡಿಯಾದ ನಂ.4 ಕ್ರಮಾಂಕದ ಗೊಂದಲ ಇನ್ನು ಕೊನೆಗೊಂಡಿಲ್ಲ. ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ ಎಂಬುದು ಬಹಳಷ್ಟು ಕುತೂಹಲವೆನಿಸಿದೆ.
Vijaya Karnataka Web virat-kohli-team-india-02


ಈ ನಡುವೆ ನಂ.4 ಕ್ರಮಾಂಕಕ್ಕೆ ಪರಿಹಾರ ಕಂಡು ಹುಡುಕದೇ ಇರುವುದಕ್ಕೆ ನಾಯಕ ವಿರಾಟ್ ಕೊಹ್ಲಿ ಅವರನ್ನು ಮಾಜಿ ನಾಯಕ ಗೌತಮ್ ಗಂಭೀರ್ ಟೀಕಿಸಿದ್ದಾರೆ.

ಪ್ರಮುಖವಾಗಿಯೂ ಅಂಬಟಿ ರಾಯುಡು ಅವರನ್ನು ನಂ.4 ಕ್ರಮಾಂಕದಲ್ಲಿ ಪರಿಗಣಿಸಲಾಗಿತ್ತಾದರೂ ನಿರ್ಣಾಯಕ ಆಸ್ಟ್ರೇಲಿಯಾ ಸರಣಿಯಿಂದ ಕಡೆಗಣಿಸಲಾಗಿತ್ತು. ಇದು ಗಂಭೀರ್ ಕೋಪಕ್ಕೆ ಕಾರಣವಾಗಿದೆ.

ವಿಶ್ವಕಪ್‌ಗಿಂತ ಮುಂಚಿತವಾಗಿ ನಂ.4 ಕ್ರಮಾಂಕದ ಗೊಂದಲವನ್ನು ಪರಿಹಾರಿಸಬೇಕಾದ್ದಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರನನ್ನು ಆರಿಸಿ, ಆತನ ಬೆನ್ನಿಗೆ ನಿಲ್ಲಬೇಕಿತ್ತು ಎಂದು ಹೇಳಿದರು.

2017 ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ನಂ.4 ಕ್ರಮಾಂಕದಲ್ಲಿ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 11 ಆಟಗಾರರನ್ನು ಪರೀಕ್ಷಿಸಿದೆ. ಆದರೆ ಧೋನಿ ಹಾಗೂ ಧವನ್‌ಗೆ ಬೆಂಬಲ ನೀಡಿದ ಹಾಗೆಯೇ ರಾಯುಡುರನ್ನು ಕೊಹ್ಲಿ ಬೆಂಬಲಿಸಬೇಕಿತ್ತು ಎಂದು ಗಂಭೀರ್ ಒತ್ತಿ ಹೇಳಿದರು.

ಕಳೆದ ವರ್ಷ ಧೋನಿ ಹಾಗೂ ವರ್ಷಾರಂಭದಲ್ಲಿ ಧವನ್‌ಗೆ ಬೆಂಬಲ ನೀಡಿದ್ದೀರಿ. ರಾಯುಡು ಏಕದಿನದಲ್ಲಿ 50ರ ಸರಾಸರಿ ಹೊಂದಿದ್ದು, ಹೆಚ್ಚೇನು ತಪ್ಪು ಮಾಡಿಲ್ಲ. ವೈಫಲ್ಯಗಳು ಸಾಮಾನ್ಯ. ಒಂದೆರಡು ವೈಫಲ್ಯದ ಬೆನ್ನಲ್ಲೇ ಆಟಗಾರರನ್ನು ಕೈಬಿಡಬಾರದು ಎಂದು ಸೇರಿಸಿದರು.

ಅದೇ ಹೊತ್ತಿಗೆ 2011ನೇ ವಿಶ್ವಕಪ್‌ನಲ್ಲಿ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದರು. ಅವರನ್ನು ಸಂಪೂರ್ಣ ತಂಡವೇ ಬೆಂಬಲಿಸಿತು ಎಂಬುದನ್ನು ಗಂಭೀರ್ ನೆನಪಿಸಿಕೊಂಡರು. ಅಲ್ಲದೆ ವಿಶ್ವಕಪ್‌ಗೂ ಮೊದಲೇ ನಂ.4 ಸಮಸ್ಯೆ ಪರಿಹಾರವಾಗಬೇಕಿತ್ತು. ಯಾಕೆಂದರೆ ಮಧ್ಯಮ ಕ್ರಮಾಂಕ ಅತಿ ಮುಖ್ಯ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌