ಆ್ಯಪ್ನಗರ

ರಿಲಾಕ್ಸ್ ಮಾಡಲ್ಲ, ಕ್ಲೀನ್ ಸ್ವೀಪ್ ಮಾಡುವುದೇ ಟೀಮ್ ಇಂಡಿಯಾ ಗುರಿ

ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಈಗಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡರೂ ಅಂತಿಮ ಪಂದ್ಯವನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ.

Vijaya Karnataka Web 14 Oct 2019, 9:44 am
ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 137 ರನ್‌ಗಳ ಗೆಲುವು ದಾಖಲಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿದೆ. ತವರಿನಲ್ಲಿ 2013ರ ಬಳಿಕ ಸತತವಾಗಿ 11 ಟೆಸ್ಟ್ ಸರಣಿ ಗೆದ್ದ ವಿಶ್ವದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಟೀಮ್ ಇಂಡಿಯಾ ಭಾಜನವಾಗಿದೆ.
Vijaya Karnataka Web virat-kohli-20


ವಿಶ್ವ ನಂ.1 ಟೆಸ್ಟ್ ತಂಡ ಎಂಬುದನ್ನು ಮಗದೊಮ್ಮೆ ಸಾಬೀತು ಮಾಡಿರುವ ಟೀಮ್ ಇಂಡಿಯಾ, ಇದೀಗ ರಿಲಾಕ್ಸ್ ಮಾಡುವ ಮೂಡ್‌ನಲ್ಲಿಲ್ಲ. ಇದನ್ನು ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದ್ದು, ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನಿಟ್ಟುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ನಾಟಕೀಯ ಬೆಳವಣಿಗೆಯೊಂದರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಪಂದ್ಯವೂ ಅತಿ ಮುಖ್ಯ. ತವರೇ ಆಗಲಿ ಅಥವಾ ವಿದೇಶವಾಗಲಿ ಪ್ರತಿಯೊಂದು ಗೆಲುವು ಹಾಗೂ ಅಂಕಗಳು ಮುಖ್ಯವೆನಿಸುತ್ತದೆ. ಹಾಗಾಗಿ ಮೂರನೇ ಟೆಸ್ಟ್‌ನಲ್ಲೂ ಕಾಲು ಹಿಂದಕ್ಕಿಡುವ ಪ್ರಶ್ನೆಯೇ ಇಲ್ಲ ಎಂದು ನುಡಿದರು.

ಯಾವ ಹಂತದಲ್ಲೂ ಯಾರೂ ರಿಲಾಕ್ಸ್ ಮಾಡುವುದಿಲ್ಲ. ಮೂರನೇ ಟೆಸ್ಟ್‌ನಲ್ಲೂ ಫಲಿತಾಂಶ ಬಯಸುತ್ತೇವೆ. ಹಾಗೆಯೇ 3-0 ಅಂತರದಲ್ಲಿ ಗೆಲುವು ದಾಖಲಿಸುವ ಗುರಿ ಹೊಂದಿದ್ದೇವೆ ಎಂದರು.

ಹರಿಣ ಪಡೆಯನ್ನು ಬಗ್ಗುಬಡಿದು ವಿಶ್ವ ದಾಖಲೆ ಮುರಿದ ಟೀಮ್‌ ಇಂಡಿಯಾ!

ಟೆಸ್ಟ್ ಕ್ರಿಕೆಟ್‌ನಲ್ಲಿ ಏಳು ದ್ವಿಶತಕಗಳನ್ನು ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿರಾಟ್ ಕೊಹ್ಲಿ, ಅನೇಕ ದಾಖಲೆಗಳನ್ನು ಮುರಿದಿದ್ದರು.

ತಂಡದ ಪ್ರತಿಯೊಬ್ಬ ಆಟಗಾರನ ಪ್ರದರ್ಶನವನ್ನು ವಿರಾಟ್ ಕೊಂಡಾಡಿದ್ದರು. ಪ್ರಮುಖವಾಗಿಯೂ ವೃದ್ಧಿಮಾನ್ ಸಹಾ ವಿಕೆಟ್ ಕೀಪಿಂಗ್ ಕೌಶಲ್ಯವನ್ನು ಉಲ್ಲೇಖಿಸಿದರು. ಗೆಲುವಿಗಾಗಿನ ಹಸಿವು ಹಾಗೂ ಉತ್ತಮ ನಿರ್ವಹಣೆ ನೀಡಬೇಕೆಂಬ ಹಂಬಲ ಪ್ರತಿಯೊಬ್ಬ ಆಟಗಾರನಲ್ಲೂ ಅಡಗಿದೆ ಎಂದರು.

ಭಾರತ vs ದ. ಆಫ್ರಿಕಾ 2ನೇ ಟೆಸ್ಟ್‌: ಟೀಮ್‌ ಇಂಡಿಯಾಗೆ ಇನಿಂಗ್ಸ್‌ ಮತ್ತು 137 ರನ್‌ ಭರ್ಜರಿ ಜಯ

ದಕ್ಷಿಣ ಆಫ್ರಿಕಾ ನಾಯಕ ಫಾಫ್ ಡು ಪ್ಲೆಸಿಸ್ ಸಹ ಟೀಮ್ ಇಂಡಿಯಾ ನಾಯಕನ ಮನೋಬಲದ ಬಗ್ಗೆ ಮಾತನಾಡಿದ್ದಾರೆ. ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದ ರೀತಿ, ರನ್‌ಗಾಗಿನ ಹಸಿವು, ಮನೋಸ್ಥಿತಿ, 100-150ರಲ್ಲಿ ತೃಪ್ತಿ ಹೊಂದುವುದಿಲ್ಲ ಎಂದು ಪ್ರಶಂಸಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌