ಲಂಡನ್: ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಬ್ಯಾಟ್ಸ್ಮನ್ ಪೃಥ್ವಿ ಶಾ ಡೋಪಿಂಗ್ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಎಂಟು ತಿಂಗಳುಗಳ ಕಾಲ ನಿಷೇಧ ಶಿಕ್ಷೆಯನ್ನು ಎದುರಿಸಿದ್ದಾರೆ.
ಆದರೆ ನಾಲ್ಕು ವರ್ಷಗಳ ಹಿಂದೆಯೇ ಶಾ ಬಗ್ಗೆ ಆರ್ಚರ್ ಮಾಡಿರುವ ಟ್ವೀಟ್ವೊಂದು ಭಾರಿ ವೈರಲ್ ಆಗಿ ಹರಡಿತ್ತು. ಅಂದು 'ನತದೃಷ್ಟ ಶಾ' ಎಂದು ಆರ್ಚರ್ ಬೊಟ್ಟು ಮಾಡಿದ್ದರು. ಈ ಮೂಲಕ ಆರ್ಚರ್ ಭವಿಷ್ಯ ನುಡಿಯುವುದರಲ್ಲಿ ನಿಸ್ಸೀಮರು ಎಂದೇ ವ್ಯಾಖ್ಯಾನಿಸಲಾಗಿತ್ತು.
ಕಾಕತಾಳೀಯವೆಂಬಂತೆ ಆರ್ಚರ್ ಆರು ವರ್ಷಗಳ ಹಿಂದೆ 2013 ಮೇ 5ರಂದು ಮಾಡಿರುವ ಮಗದೊಂದು ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ಎಲ್ಲ ಬ್ಯಾಟ್ಸ್ಮನ್ಗಳು ಎರಡು ಹೆಲ್ಮೆಟ್ಗಳನ್ನು ಬಳಕೆ ಮಾಡಬೇಕು ಎಂದು ಆರ್ಚರ್ ಸಲಹೆ ಮಾಡಿದ್ದರು.
ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಯಲ್ಲಂತೂ ಆರ್ಚರ್ ಮಾತುಗಳು ಅಕ್ಷರಶ: ನಿಜವೆನಿಸಿದೆ. ಆರ್ಚರ್ ಉರಿ ಚೆಂಡುಗಳಿಂದ ಪಾರಾಗಲು ಆಸೀಸ್ ದಾಂಡಿಗರು ಹರಸಾಹಸವನ್ನೇ ಪಡಬೇಕಾಯಿತು. ಈ ಪೈಕಿ ಆರ್ಚರ್ ದಾಳಿ ಕುತ್ತಿಗೆಗೆ ಬಡಿದು ಸ್ಟೀವ್ ಸ್ಮಿತ್ ಸಂಪೂರ್ಣ ಸರಣಿಗೆ ಅಲಭ್ಯವಾಗಿದ್ದಾರೆ.
ಒಟ್ಟಿನಲ್ಲಿ ಆರು ವರ್ಷಗಳ ಹಿಂದೆಯೇ ಬ್ಯಾಟ್ಸ್ಮನ್ಗಳಿಗೆ ಎರಡು ಹೆಲ್ಮೆಟ್ ಬಳಕೆ ಮಾಡುವಂತೆಯೇ ಆರ್ಚರ್ ನುಡಿದಿರುವ ಭವಿಷ್ಯವು ಹೆಚ್ಚಿನ ಕುತೂಹಲಕ್ಕೆಡೆ ಮಾಡಿದೆ. ಅಲ್ಲದೆ ಕ್ರಿಕೆಟ್ ಅಭಿಮಾನಿಗಳಂತೂ ಆರ್ಚರ್ ಹಳೆಯ ಟ್ವೀಟ್ಗಳನ್ನು ಹುಡುಕಾಡುತ್ತಿದ್ದು, ಮುಂದೇನು ನಡೆಯಲಿದೆ ಎಂಬುದನ್ನು ತಿಳಿಯಲು ಕಾತರದಲ್ಲಿದ್ದಾರೆ.
ಆದರೆ ನಾಲ್ಕು ವರ್ಷಗಳ ಹಿಂದೆಯೇ ಶಾ ಬಗ್ಗೆ ಆರ್ಚರ್ ಮಾಡಿರುವ ಟ್ವೀಟ್ವೊಂದು ಭಾರಿ ವೈರಲ್ ಆಗಿ ಹರಡಿತ್ತು. ಅಂದು 'ನತದೃಷ್ಟ ಶಾ' ಎಂದು ಆರ್ಚರ್ ಬೊಟ್ಟು ಮಾಡಿದ್ದರು. ಈ ಮೂಲಕ ಆರ್ಚರ್ ಭವಿಷ್ಯ ನುಡಿಯುವುದರಲ್ಲಿ ನಿಸ್ಸೀಮರು ಎಂದೇ ವ್ಯಾಖ್ಯಾನಿಸಲಾಗಿತ್ತು.
ಕಾಕತಾಳೀಯವೆಂಬಂತೆ ಆರ್ಚರ್ ಆರು ವರ್ಷಗಳ ಹಿಂದೆ 2013 ಮೇ 5ರಂದು ಮಾಡಿರುವ ಮಗದೊಂದು ಟ್ವೀಟ್ ಇದೀಗ ವೈರಲ್ ಆಗುತ್ತಿದೆ. ಎಲ್ಲ ಬ್ಯಾಟ್ಸ್ಮನ್ಗಳು ಎರಡು ಹೆಲ್ಮೆಟ್ಗಳನ್ನು ಬಳಕೆ ಮಾಡಬೇಕು ಎಂದು ಆರ್ಚರ್ ಸಲಹೆ ಮಾಡಿದ್ದರು.
ಇಂಗ್ಲೆಂಡ್ ವಿರುದ್ಧ ಆ್ಯಶಸ್ ಸರಣಿಯಲ್ಲಂತೂ ಆರ್ಚರ್ ಮಾತುಗಳು ಅಕ್ಷರಶ: ನಿಜವೆನಿಸಿದೆ. ಆರ್ಚರ್ ಉರಿ ಚೆಂಡುಗಳಿಂದ ಪಾರಾಗಲು ಆಸೀಸ್ ದಾಂಡಿಗರು ಹರಸಾಹಸವನ್ನೇ ಪಡಬೇಕಾಯಿತು. ಈ ಪೈಕಿ ಆರ್ಚರ್ ದಾಳಿ ಕುತ್ತಿಗೆಗೆ ಬಡಿದು ಸ್ಟೀವ್ ಸ್ಮಿತ್ ಸಂಪೂರ್ಣ ಸರಣಿಗೆ ಅಲಭ್ಯವಾಗಿದ್ದಾರೆ.
ಒಟ್ಟಿನಲ್ಲಿ ಆರು ವರ್ಷಗಳ ಹಿಂದೆಯೇ ಬ್ಯಾಟ್ಸ್ಮನ್ಗಳಿಗೆ ಎರಡು ಹೆಲ್ಮೆಟ್ ಬಳಕೆ ಮಾಡುವಂತೆಯೇ ಆರ್ಚರ್ ನುಡಿದಿರುವ ಭವಿಷ್ಯವು ಹೆಚ್ಚಿನ ಕುತೂಹಲಕ್ಕೆಡೆ ಮಾಡಿದೆ. ಅಲ್ಲದೆ ಕ್ರಿಕೆಟ್ ಅಭಿಮಾನಿಗಳಂತೂ ಆರ್ಚರ್ ಹಳೆಯ ಟ್ವೀಟ್ಗಳನ್ನು ಹುಡುಕಾಡುತ್ತಿದ್ದು, ಮುಂದೇನು ನಡೆಯಲಿದೆ ಎಂಬುದನ್ನು ತಿಳಿಯಲು ಕಾತರದಲ್ಲಿದ್ದಾರೆ.