ಆ್ಯಪ್ನಗರ

ಇದು ಕೇವಲ ಮೊದಲ ಹೆಜ್ಜೆ; ಗೆಲುವೇ ನಮ್ಮ ಗುರಿ: ವಿರಾಟ್

ಮೊದಲ ಪಂದ್ಯ ಗೆಲುವಿನಿಂದ ಸಂತುಷ್ಟರಾಗಿಲ್ಲ. ಇದು ಕೇವಲ ಮೊದಲ ಹೆಜ್ಜೆಯಾಗಿದ್ದು, ಮುಂದಿನ ಪಂದ್ಯಗಳಲ್ಲೂ ಗೆಲುವನ್ನು ಗುರಿಯಾಗಿರಿಸಿರುವುದಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

Vijaya Karnataka Web 12 Dec 2018, 10:31 am
ಪರ್ತ್: ಆಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಾಖಲಾದ ಸ್ಮರಣೀಯ ಗೆಲುವಿನ ಬಳಿಕ ಪ್ರತಿಕ್ರಿಯಿಸಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇದು ಕೇವಲ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web virat-kohli-smile


31 ರನ್ ಅಂತರದ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಇದೇ ಮೊದಲ ಬಾರಿಗೆ ಆಸೀಸ್ ಪ್ರವಾಸದಲ್ಲಿ ಸರಣಿ ಮೊದಲ ಟೆಸ್ಟ್ ಪಂದ್ಯದಲ್ಲೇ ಗೆಲುವು ದಾಖಲಿಸಿತ್ತು.

ಅತ್ತ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನೆಲದಲ್ಲಿ ಗೆಲುವು ದಾಖಲಿಸಿದ ಭಾರತದ ಮೊದಲ ನಾಯಕ ಎಂಬ ಕೀರ್ತಿಗೆ ಪಾತ್ರವಾಗಿದ್ದರು.

ಹಿಂದೆಲ್ಲ ನಾವು ಚೆನ್ನಾಗಿ ಆಡಿದ್ದೇವೆ. ಆದರೆ ಗೆಲ್ಲಲ್ಲು ಸಾಧ್ಯವಾಗಿಲ್ಲ ಎಂದು ಹೇಳುತ್ತಿದ್ದೇವೆ. ಆದರೆ ಇಲ್ಲಿಂದ ಬಳಿಕ ಅಂತಹ ಪರಿಸ್ಥಿತಿಯನ್ನು ಯೋಚಿಸಲು ಕೂಡಾ ಇಷ್ಟಪಡುವುದಿಲ್ಲ. ಗೆಲುವೇ ನಮ್ಮ ಗುರಿಯಾಗಿದೆ ಎಂದು ವಿವರಿಸಿದರು.

ಅವಕಾಶವಿದ್ದರೆ ಗೆಲುವಿಗಾಗಿ ಪ್ರಯತ್ನಿಸಲಿದ್ದೇವೆ. ಗೆಲುವು ಅಥವಾ ಡ್ರಾಗಿಂತ ಕಡಿಮೆ ಫಲಿತಾಂಶವನ್ನು ಬಯಸುವುದಿಲ್ಲ. ಸೋಲು ಎಂಬುದನ್ನು ಚಿಂತಿಸಲು ಸಾಧ್ಯವಿಲ್ಲ. ಇದೇ ಗೆಲುವಿನ ಮನೋಭಾವದಿಂದ ಮುಂದಕ್ಕೆ ಹೋಗಲು ಬಯಸುತ್ತೇವೆ ಎಂದರು.

ಆಡಿಲೇಡ್ ಪಂದ್ಯದಲ್ಲಿ ತಾವು ಹೆಚ್ಚು ಭಾವುಕರಾಗಿದ್ದೆವು ಎಂದು ವಿರಾಟ್ ಹೇಳಿದರು. ನಾಲ್ಕು ವರ್ಷಗಳ ಹಿಂದೆ 48 ರನ್‌ಗಳಿಂದ ಪಂದ್ಯ ಕಳೆದುಕೊಂಡೆವು. ಈಗ 31 ರನ್ ಅಂತರದ ಗೆಲುವು ದಾಖಲಿಸಿದ್ದೇವೆ. ಇದು ನಿಜಕ್ಕೂ ಅದ್ಭುತ ಅನುಭವ. ನಾವು ಯಾವತ್ತೂ ಆಸೀಸ್‌ನಲ್ಲಿ ಮುನ್ನಡೆ ದಾಖಲಿಸಿರಲಿಲ್ಲ. ಹಾಗಾಗಿ ಮಹತ್ತರ ಸರಣಿಯ ಸ್ಮರಣೀಯ ಸಮಯವಿದು. ಅಲ್ಲದೆ ಅತ್ಯುತ್ತಮ ಸಾಧನೆಯಾಗಿದೆ ಎಂದು ನೀಡಿದರು.

ಕೇವಲ ಒಂದು ಟೆಸ್ಟ್ ಪಂದ್ಯ ಗೆಲುವಿನಿಂದ ಮಾತ್ರ ಸಂತುಷ್ಟರಾಗಿಲ್ಲ. ಹೌದು ಗೆಲುವು ಸಂತಸ ತಂದಿದೆ. ಆದರೆ ಇದು ಮೊದಲ ಹೆಜ್ಜೆ ಮಾತ್ರ. ನಾವು ಆಸೀಸ್ ವಿರುದ್ಧ ಕೊನೆಯ ಸರಣಿಯನ್ನು ಸ್ವದೇಶದಲ್ಲಿ ಗೆದ್ದಿದ್ದೇವೆ. ಇದೀಗ ತಪ್ಪುನ್ನು ಅರಿತುಕೊಂಡು ಇಲ್ಲೂ ಗೆಲುವು ದಾಖಲಿಸಬೇಕಿದೆ ಎಂದರು.

ನಾವು ಯಾವುದನ್ನು ಅನುದಾನವಾಗಿ ಪಡೆಯಲು ಇಚ್ಛಿಸುವುದಿಲ್ಲ. ಆಸ್ಟ್ರೇಲಿಯಾ ಉತ್ತಮ ತಂಡ ಎಂಬುದು ತಿಳಿದಿದೆ. ಅಲ್ಲದೆ ತವರಿನ ತಂಡದಿಂದ ಫೈಟ್ ಬ್ಯಾಕ್ ನಿರೀಕ್ಷೆ ಮಾಡಿದ್ದೆವು ಎಂದು ತಿಳಿಸಿದರು.

ಅದೇ ಹೊತ್ತಿಗೆ ಭಾರತೀಯ ಬೌಲರ್‌ಗಳ ಸಾಂಘಿಕ ಪ್ರದರ್ಶನವನ್ನು ಅಶ್ವಿನ್ ಕೊಂಡಾಡಿದರು. ಇನ್ನು ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಚೇತೇಶ್ವರ ಪೂಜಾರ ಹಾಗೂ ಅಜಿಂಕ್ಯ ರಹಾನೆ ತಾಂತ್ರಿಕವಾಗಿ ಅಧ್ಭುತ ಕೌಶಲ್ಯವನ್ನು ಹೊಂದಿದ್ದು, ಪರಿಪೂರ್ಣ ಟೆಸ್ಟ್ ಆಟಗಾರರಾಗಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌