ಆ್ಯಪ್ನಗರ

ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದು ನಮ್ಮ ಕೆಲಸ: ದ್ರಾವಿಡ್

ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದು ನಮ್ಮ ಕೆಲಸ ಎಂದು ಭಾರತ ಅಂಡರ್-19 ಹಾಗೂ ಭಾರತ 'ಎ' ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

TOI.in 9 Aug 2018, 7:38 pm
ಬೆಂಗಳೂರು: ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದು ನಮ್ಮ ಕೆಲಸ ಎಂದು ಭಾರತ ಅಂಡರ್-19 ಹಾಗೂ ಭಾರತ 'ಎ' ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web rahul-dravid-06


ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಭಾರತೀಯ ಕ್ರಿಕೆಟ್‌ಗೆ ತಮ್ಮ ಅಮೂಲ್ಯ ಸೇವೆಯನ್ನು ಮುಂದುವರಿಸಿದ ದ್ರಾವಿಡ್, 2015 ಜೂನ್ ತಿಂಗಳಲ್ಲಿ ಅಂಡರ್-19 ಹಾಗೂ ಭಾರತ 'ಎ' ತಂಡದ ಮುಖ್ಯ ತರಬೇತುದಾರನ ಹುದ್ದೆಯನ್ನು ವಹಿಸಿದ್ದರು.

"ಭಾರತ 'ಎ' ಹಂತದಲ್ಲಿ ಆಟಗಾರರ ತಂತ್ರಗಾರಿಕೆ ಹೆಚ್ಚು ಪ್ರಾಮುಖ್ಯತೆ ಗಿಟ್ಟಿಸುವುದಿಲ್ಲ. ನೀವು ಕೌಶಲ್ಯದ ಬಗ್ಗೆ ಮಾತನಾಡಬಹುದು. ಆದರೆ ಕೆರಿಯರ್‌ನಲ್ಲಿ ನೀವು ಯಾವ ಹಂತದಲ್ಲಿದ್ದೀರಿ ಎಂಬುದು ಗಮನಾರ್ಹವೆನಿಸುತ್ತದೆ. ತಮ್ಮ ವೃತ್ತಿ ಜೀವನದ ವಿವಿಧ ಹಂತಗಳಲ್ಲಿ ಪ್ರತಿಯೊಬ್ಬರೂ ಭಾರತ 'ಎ' ತಂಡದ ಭಾಗವಾಗಿದ್ದು, ಕೆಲವರು ರಾಷ್ಟ್ರೀಯ ತಂಡದ ಸನಿಹಕ್ಕೆ ತಲುಪಿದ್ದಾರೆ. ಹಾಗಾಗಿ ಅವರಿಗೆಲ್ಲ ಉತ್ತಮ ವಾತಾವರಣ ಸೃಷ್ಟಿ ಮಾಡುವುದು ನಮ್ಮ ಹಾಗೂ ಸಹಾಯಕ ಸಿಬ್ಬಂದಿಗಳ ಕೆಲಸವಾಗಿದೆ" ಎಂದು ದ್ರಾವಿಡ್ ಸೇರಿಸಿದರು.

"ರಿಲ್ಯಾಕ್ಸ್ ಮಾಡಿ ಪಂದ್ಯವನ್ನು ಆನಂದಿಸಲು ಏನು ಬೇಕೋ ಅದನ್ನು ನಾವು ನೀಡಲಿದ್ದೇವೆ. ನಾವು ಅವರಿಗೂ ಸವಾಲೊಡ್ಡಲಿದ್ದೇವೆ. ಅದು ಅತಿ ಮುಖ್ಯ. ಉತ್ತಮ ಪ್ರದರ್ಶನ ನೀಡಲು ನಾವು ಅವರನ್ನು ಮುಂದಕ್ಕೆ ತಳ್ಳಲಿದ್ದು, ಉನ್ನತ ಮಟ್ಟದ ಪ್ರದರ್ಶನವನ್ನು ಬೇಡಿಕೆ ಮಾಡಲಿದ್ದೇವೆ" ಎಂದರು.

ಗೆಲುವು ಹಾಗೂ ಸೋಲು ಪಂದ್ಯದ ಭಾಗ ಎಂದು ಹೇಳಿರುವ ದ್ರಾವಿಡ್, ಈ ಮಟ್ಟದಲ್ಲಿ ಯುವ ಪ್ರತಿಭೆಗಳಿಗೆ ಅವಕಾಶ ನೀಡುವುದು ನಮ್ಮ ಕೆಲಸವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ತಂಡದ ಅಗತ್ಯಗಳನ್ನು ಅರಿತು ಅದನ್ನು ಈಡೇರಿಸುವ ಪ್ರಯತ್ನ ಮಾಡಲಿದ್ದೇವೆ. ರಾಷ್ಟ್ರೀಯ ತಂಡದಿಂದ ಬರುವ ಆಟಗಾರರಿಗೂ ಅವಕಾಶ ನೀಡಬೇಕು. ಹೊಸ ಪ್ರತಿಭೆಯ ಹುಡುಕಾಟದಲ್ಲೂ ನಾವಿದ್ದೇವೆ ಎಂದು ಸೇರಿಸಿದರು.

ದಕ್ಷಿಣ ಆಫ್ರಿಕಾ 'ಎ' ತಂಡದ ವಿರುದ್ಧ ಗಮನಾರ್ಹ ಪ್ರದರ್ಶನಗಳನ್ನು ನೀಡಿರುವ ಮಯಾಂಕ್ ಅಗರ್ವಾಲ್, ಪೃಥ್ವಿ ಶಾ ಹಾಗೂ ಮೊಹಮ್ಮದ್ ಸಿರಾಜ್ ಅವರ ಬಗ್ಗೆಯೂ ದ್ರಾವಿಡ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌