ಆ್ಯಪ್ನಗರ

ಭಾರತವನ್ನು ಮಣಿಸುವುದಷ್ಟೇ ಅಲ್ಲ, ಟೂರ್ನಿ ಗೆಲ್ಲುವುದು ಪಾಕ್ ಗುರಿ!

ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯೋಜಿಸುತ್ತಿರುವ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳ ಮಾತ್ರ ಬಾಕಿ ಉಳಿದಿರುವಂತೆಯೇ ಪಾಕಿಸ್ತಾನ ಕ್ರಿಕೆಟ್ ತಂಡ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ಕ್ರಿಕೆಟ್ ದಿಗ್ಗಜ ಇನ್ಜಮಾಮ್ ಉಲ್ ಹಕ್ ಗಮನಾರ್ಹ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

ಏಜೆನ್ಸೀಸ್ 20 May 2017, 3:45 pm
ಹೊಸದಿಲ್ಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆಯೋಜಿಸುತ್ತಿರುವ ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಇನ್ನೇನು ಕೆಲವೇ ಕೆಲವು ದಿನಗಳ ಮಾತ್ರ ಬಾಕಿ ಉಳಿದಿರುವಂತೆಯೇ ಪಾಕಿಸ್ತಾನ ಕ್ರಿಕೆಟ್ ತಂಡ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿರುವ ಮಾಜಿ ಕ್ರಿಕೆಟ್ ದಿಗ್ಗಜ ಇನ್ಜಮಾಮ್ ಉಲ್ ಹಕ್ ಗಮನಾರ್ಹ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.
Vijaya Karnataka Web pakistan can beat india insists inzamam
ಭಾರತವನ್ನು ಮಣಿಸುವುದಷ್ಟೇ ಅಲ್ಲ, ಟೂರ್ನಿ ಗೆಲ್ಲುವುದು ಪಾಕ್ ಗುರಿ!


ಭಾರತವನ್ನು ಮಣಿಸುವುದಷ್ಟೇ ಅಲ್ಲ. ಟೂರ್ನಿ ಗೆಲ್ಲುವುದು ಪಾಕ್ ತಂಡದ ಗುರಿಯಾಗಿರಲಿದೆ ಎಂದು ಹಕ್ ಉದ್ಗರಿಸಿದ್ದಾರೆ.

ಬಹಳ ಸಮಯಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಜೂನ್ 4ರಂದು ನಡೆಯಲಿರುವ ಪಂದ್ಯದಲ್ಲಿ ಸೆಣಸಲಿದೆ.

ನಾವು ಇಂಗ್ಲೆಂಡ್‌ಗೆ ಹೋಗುತ್ತಿರುವುದು ಕೇವಲ ಭಾರತವನ್ನು ಮಣಿಸುವುದಷ್ಟೇ ಅಲ್ಲ. ಚಾಂಪಿಯನ್ಸ್‌ಶಿಪ್ ಗೆಲ್ಲುವುದು ನಮ್ಮ ಪ್ರಮುಖ ಗುರಿ ಎಂದಿದ್ದಾರೆ.

ಇತ್ತೀಚೆಗಿನ ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಜಯವು ತಂಡಕ್ಕೆ ಮತ್ತಷ್ಟು ಸ್ಪೂರ್ತಿ ತುಂಬಲಿದೆ ಎಂದವರು ಅಭಿಪ್ರಾಯಪಟ್ಟರು.

2004ರಲ್ಲಿ ಇನ್ಜಮಾಮ್ ನಾಯಕತ್ವದಲ್ಲೇ ಟೀಮ್ ಇಂಡಿಯಾದವನ್ನು ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಮಣಿಸಿತ್ತು. ಈಗ ತಮ್ಮ ತಂಡ ಮತ್ತದೇ ಸಾಧನೆಯನ್ನು ಪುನರಾವರ್ತಿಸುವ ನಂಬಿಕೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌