ಆ್ಯಪ್ನಗರ

ಪಾಕ್ ತಂಡದಲ್ಲಿ ಹಿರಿಯ ಕ್ರಿಕೆಟಿಗರು ಅವಾಜ್ ಎತ್ತುವಂತಿಲ್ಲ!

ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಏಕದಿನ ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಎದುರಾದ ಸೋಲಿನ ಆಘಾತದ ಬಳಿಕ ಪುಟಿದೆದ್ದು ಬಂದಿರುವ ಪಾಕಿಸ್ತಾನವೀಗ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮತ್ತದೇ ಟೀಮ್ ಇಂಡಿಯಾ ಸವಾಲನ್ನು ಎದುರಿಸಲಿದೆ.

Indiatimes 18 Jun 2017, 12:54 pm
ಹೊಸದಿಲ್ಲಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2017 ಏಕದಿನ ಕ್ರಿಕೆಟ್ ಟೂರ್ನಮೆಂಟ್‌ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಎದುರಾದ ಸೋಲಿನ ಆಘಾತದ ಬಳಿಕ ಪುಟಿದೆದ್ದು ಬಂದಿರುವ ಪಾಕಿಸ್ತಾನವೀಗ ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಮತ್ತದೇ ಟೀಮ್ ಇಂಡಿಯಾ ಸವಾಲನ್ನು ಎದುರಿಸಲಿದೆ.
Vijaya Karnataka Web pakistan cricket has a bizarre policy seniors cant advise the skipper unless he asks like seriously
ಪಾಕ್ ತಂಡದಲ್ಲಿ ಹಿರಿಯ ಕ್ರಿಕೆಟಿಗರು ಅವಾಜ್ ಎತ್ತುವಂತಿಲ್ಲ!


ಹಿರಿಯ ಆಟಗಾರರನ್ನು ಒಳಗೊಂಡಿರುವ ಪಾಕ್ ಪಡೆಯನ್ನು ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸರ್ಫರಾಜ್ ಅಹ್ಮದ್ ಪಡೆ ಮುನ್ನಡೆಸುತ್ತಿದ್ದಾರೆ.

ಆದರೆ ಪಾಕ್ ತಂಡದಲ್ಲಿ ಹಿರಿಯ ಆಟಗಾರರು ಸಲಹೆ ನೀಡುವಂತಿಲ್ಲ. ಇದನ್ನು ಸ್ವತ: ಪಾಕಿಸ್ತಾನದ ಮಾಜಿ ನಾಯಕ ಹಾಗೂ ಹಿರಿಯ ಆಟಗಾರನಾಗಿರುವ ಮೊಹಮ್ಮದ್ ಹಫೀಜ್ ಬಹಿರಂಗಪಡಿಸಿದ್ದಾರೆ.

ನಾಯಕ ಸರ್ಫರಾಜ್‌ಗೆ ಯಾವುದೇ ಸಲಹೆ ಕೊಡದಂತೆ ಹಿರಿಯ ಆಟಗಾರರಿಗೆ ಸೂಚನೆ ನೀಡಲಾಗಿದೆ. ಈ ನಿರ್ಣಯವನ್ನು ವಕಾರ್ ಯೂನಿಸ್ ಪಾಕ್ ತಂಡದ ಕೋಚ್ ಆಗಿದ್ದಾಗ ತೆಗೆದುಕೊಳ್ಳಲಾಗಿತ್ತು ಎಂದವರು ವಿವರಿಸಿದರು.

ತಂಡದ ಆಯ್ಕೆ ಮತ್ತು ಇನ್ನಿತರ ವಿಚಾರಗಳನ್ನು ನಾಯಕ ಹಾಗೂ ಕೋಚ್ ಮಿಕ್ಕಿ ಅರ್ಥುರ್ ನಿರ್ಧರಿಸಲಿದ್ದಾರೆ. ನಾಯಕ ಸಮೀಪಿಸದ ಹೊರತಾಗಿ ಹಿರಿಯ ಆಟಗಾರರು ಯಾವುದೇ ಸಲಹೆ ನೀಡಬಾರದು ಎಂದು ಹಫೀಜ್ ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌