ಆ್ಯಪ್ನಗರ

ಯುವಿ ಮಾನವೀಯತೆಗೆ ಪಾಕ್ ಕ್ರಿಕೆಟಿಗರ ಭೇಷ್!

ಮಾರಕ ಕ್ಯಾನ್ಸರ್ ವಿರುದ್ಧ ಸಮರ ಸಾರಿರುವ ಭಾರತದ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಅವರ ಮಾನವೀಯ ಕಾರ್ಯಕ್ರಮವನ್ನು ಪಾಕಿಸ್ತಾನ ಮಾಜಿ ನಾಯಕರಾದ ಶಾಹೀದ್ ಆಫ್ರಿದಿ ಹಾಗೂ ಶೋಯಿಬ್ ಮಲಿಕ್ ಕೊಂಡಾಡಿದ್ದಾರೆ.

Vijaya Karnataka Web 7 Aug 2019, 7:11 pm
ಹೊಸದಿಲ್ಲಿ: ಕ್ಯಾನ್ಸರ್ ರೋಗದಿಂದ ಗೆದ್ದು ಬಂದು ಇದೀಗ ಅದೇ ಮಾರಕ ರೋಗದ ವಿರುದ್ಧ ಹೋರಾಟ ಸಾರಿರುವ ಭಾರತ ಕ್ರಿಕೆಟ್ ತಂಡದ ಮಾಜಿ ವಿಶ್ವಕಪ್ ಹೀರೊ ಯುವರಾಜ್ ಸಿಂಗ್ ಅವರ ಮಾನವೀಯ ಗುಣವನ್ನು ಪಾಕಿಸ್ತಾನದ ಕ್ರಿಕೆಟಿಗರು ಮೆಚ್ಚಿದ್ದಾರೆ.
Vijaya Karnataka Web yuvi-afridi-malik


ಗ್ಲೋಬಲ್ ಟಿ20 ಕೆನೆಡಾ ಟೂರ್ನಮೆಂಟ್ ವೇಳೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡಲು ತಮ್ಮ ಸಹಾಯಾರ್ಥ ಸಂಸ್ಥೆ ಯೂವಿಕ್ಯಾನ್ ಮುಖಾಂತರ ಯುವಿ ಡಿನ್ನರ್ ಕೂಟವನ್ನು ಏರ್ಪಡಿಸಿದ್ದರು. ಪಾಕಿಸ್ತಾನದ ಮಾಜಿ ನಾಯಕರಾದ ಶಾಹೀದ್ ಆಫ್ರಿದಿ ಹಾಗೂ ಶೋಯಿಬ್ ಮಲಿಕ್ ಸಹ ಇದರ ಭಾಗವಾಗಿದ್ದರು.

ಇದೀಗ ಸಮಾಜಕ್ಕೆ ಯುವಿ ಕೊಡುಗೆಯನ್ನು ಮೆಚ್ಚಿರುವ ಆಫ್ರಿದಿ, ಚಾಂಪಿಯನ್ ಆಟಗಾರನಿಗೆ ಶಾಹೀದ್ ಆಫ್ರಿದಿ ಫೌಂಡೇಷನ್ ಮೂಲಕ ಬೆಂಬಲ ಸಾರುವುದಾಗಿ ತಿಳಿಸಿದ್ದಾರೆ.

ಓರ್ವ ಹೀರೊ ತರಹನೇ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿರುವ ಯುವಿ ಪರಿಶ್ರಮವನ್ನು ಶೋಯಿಬ್ ಮಲಿಕ್ ಸಹ ಕೊಂಡಾಡಿದ್ದಾರೆ.

ಇದಾದ ಬೆನ್ನಲ್ಲೇ ತಮ್ಮ ಸಹಾಯಾರ್ಥಕ್ಕೆ ಬೆಂಬಲ ಸೂಚಿಸಿರುವ ಮಲಿಕ್ ಹಾಗೂ ಆಫ್ರಿದಿಗೆ ಯುವಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈ ಮೊದಲು ಜಮ್ಮು ಮತ್ತು ಕಾಶ್ಮೀರ ವಿಚಾರ ಸಂಬಂಧ ತಗಾದೆ ಎತ್ತಿರುವ ಶಾಹೀದ್ ಆಫ್ರಿದಿ ಟ್ವೀಟ್‌ಗೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಗೌತಮ್ ಗಂಭೀರ್ ತಕ್ಕ ಉತ್ತರ ನೀಡಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌