ಆ್ಯಪ್ನಗರ

ಭಾರತಕ್ಕೆ ವಿಶೇಷ ಸಂದೇಶ ರವಾನಿಸಿದ ಪಾಕ್ ಅಭಿಮಾನಿ

ಕಳೆದ ವರ್ಷ ಏಷ್ಯಾ ಕಪ್‌ನಲ್ಲಿ ಭಾರತೀಯ ರಾಷ್ಟ್ರಗೀತೆ ಹಾಡುವ ಮೂಲಕ ಹೃದಯ ಗೆದ್ದಿರುವ ಪಾಕಿಸ್ತಾನ ಅಭಿಮಾನಿ ಆದಿಲ್ ತಾಜ್, ಭಾರತವು ಮಂಬರುವ ವಿಶ್ವಕಪ್ ಪಂದ್ಯ ಆಡುವಂತೆ ಮನವಿ ಮಾಡಿದ್ದಾರೆ.

Vijaya Karnataka Web 22 Feb 2019, 12:39 pm
ಹೊಸದಿಲ್ಲಿ: ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ಭಾರತ ಮುಂಬರುವ ಏಕದಿನ ವಿಶ್ವಕಪ್‌ನಿಂದ ಹಿಂಜರಿಯುವಂತೆ ವ್ಯಾಪಕ ಜನಾಗ್ರಹ ಕೇಳಿಬರುತ್ತಿದೆ.
Vijaya Karnataka Web ind-vs-pak-01


ಈ ನಡುವೆ ಕಳೆದ ವರ್ಷ ಏಷ್ಯಾ ಕಪ್ ವೇಳೆ ಭಾರತೀಯ ರಾಷ್ಟ್ರಗೀತೆ ಹಾಡಿ ಹೃದಯ ಗೆದ್ದಿರುವ ಪಾಕಿಸ್ತಾನ ಅಭಿಮಾನಿ ಆದಿಲ್ ತಾಜ್ ವಿಶೇಷವಾದ ಮನವಿಯೊಂದಿಗೆ ಮುಂದೆ ಬಂದಿದ್ದಾರೆ.

ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯ ನಿಗದಿಯಂತೆ ಆಡುವಂತೆ ಭಾರತಕ್ಕೆ ಕರೆ ನೀಡಿದ್ದಾರೆ.

ಕ್ರಿಕೆಟ್ ಜತೆ ರಾಜಕೀಯ ಬೆರೆಸಬಾರದು ಎಂದು ಆದಿಲ್ ವಿನಂತಿ ಮಾಡಿಕೊಂಡಿದ್ದಾರೆ. ಯುಎಇನಲ್ಲಿ ಇಂದಿಗೂ ಪಾಕ್ ಹಾಗೂ ಭಾರತೀಯರು ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ. ಅತ್ತ ಪಾಕಿಸ್ತಾನ ಆಟಗಾರರು ಭಾರತದ ಜತೆ ಉತ್ತಮ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಎಂಬುದನ್ನು ಉಲ್ಲೇಖಿಸಿದರು.

ಶಾಹಿದ್ ಆಫ್ರಿದಿ ಮನೆಯಲ್ಲಿ ಇಂದಿಗೂ ಸಚಿನ್ ತೆಂಡೂಲ್ಕರ್ ಹಸ್ತಾಕ್ಷರದ ಫ್ರೇಮ್ ಹಾಕಿದ ಚಿತ್ರವಿದೆ. ಭಾರತ ನಾಯಕ ವಿರಾಟ್ ಕೊಹ್ಲಿ ಸಹ ಹಸ್ತಾಕ್ಷರದ ಬ್ಯಾಟ್ ನೀಡಿದ್ದಾರೆ. ಮೊಹಮ್ಮದ್ ಆಮೀರ್‌ಗೂ ಕೊಹ್ಲಿ ಹಸ್ತಾಕ್ಷರದ ಬ್ಯಾಟ್ ನೀಡಲಾಗಿದೆ ಎಂದು ಉತ್ತಮ ಬಾಂಧವ್ಯವನ್ನು ಮೆಲುಕು ಹಾಕಿದ್ದರು.

ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವನ್ನು 'ಮದರ್ ಆಫ್ ಆಲ್ ಬ್ಯಾಟಲ್ಸ್' ಎಂದು ವಿಶ್ಲೇಷಿಸಲಾಗುತ್ತದೆ. ಐಸಿಸಿ ಕೂಡಾ ಭಾರತ-ಪಾಕ್ ವಿಶ್ವಕಪ್ ಪಂದ್ಯದ ಟಿಕೆಟ್‌ಗಾಗಿ 4 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಲಭಿಸಿದೆ ಎಂಬುದನ್ನು ಖಚಿತಪಡಿಸಿದೆ. ಹಾಗಿರಬೇಕೆಂದರೆ ಕ್ರಿಕೆಟ್‌ಗೆ ಹಾನಿ ಮಾಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌