ಆ್ಯಪ್ನಗರ

ಪರಿಹಾರಕ್ಕಾಗಿ ಬಿಸಿಸಿಐಗೆ ಐಸಿಸಿ ಸೂಚನೆ

2016ರ ವಿಶ್ವ ಟಿ20 ಕ್ರಿಕೆಟ್‌ ಟೂರ್ನಿ ಆತಿಥ್ಯದಲ್ಲಿ ತೆರಿಗೆ ವಿನಾಯ್ತಿ ನೀಡದ ಸಂಬಂಧ ವರ್ಷಾಂತ್ಯಕ್ಕೆ 160 ಕೋಟಿ ರೂ. ಪರಿಹಾರ ನೀಡಿ ಅಥವಾ 2023ರ ವಿಶ್ವಕಪ್‌ ಆತಿಥ್ಯದ ಹಕ್ಕನ್ನು ಕಳೆದುಕೊಳ್ಳಿ ಎಂದು ಬಿಸಿಸಿಐಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಶನಿವಾರ ಎಚ್ಚರಿಸಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ದೊಡ್ಡ ಹಿನ್ನಡೆ ಉಂಟಾಗಿದೆ.

TNN 23 Dec 2018, 5:00 am
ಹೊಸದಿಲ್ಲಿ : 2016ರ ವಿಶ್ವ ಟಿ20 ಕ್ರಿಕೆಟ್‌ ಟೂರ್ನಿ ಆತಿಥ್ಯದಲ್ಲಿ ತೆರಿಗೆ ವಿನಾಯ್ತಿ ನೀಡದ ಸಂಬಂಧ ವರ್ಷಾಂತ್ಯಕ್ಕೆ 160 ಕೋಟಿ ರೂ. ಪರಿಹಾರ ನೀಡಿ ಅಥವಾ 2023ರ ವಿಶ್ವಕಪ್‌ ಆತಿಥ್ಯದ ಹಕ್ಕನ್ನು ಕಳೆದುಕೊಳ್ಳಿ ಎಂದು ಬಿಸಿಸಿಐಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಶನಿವಾರ ಎಚ್ಚರಿಸಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ದೊಡ್ಡ ಹಿನ್ನಡೆ ಉಂಟಾಗಿದೆ.
Vijaya Karnataka Web pay 23 million or lose 2023 world cup icc to bcci
ಪರಿಹಾರಕ್ಕಾಗಿ ಬಿಸಿಸಿಐಗೆ ಐಸಿಸಿ ಸೂಚನೆ


ರಾಜ್ಯ ಅಥವಾ ಕೇಂದ್ರ ಸರಕಾರ ತೆರಿಗೆ ವಿನಾಯ್ತಿ ನೀಡಲು ನಿರಾಕರಿಸಿದ ನಂತರ ಕಳೆದ ಅಕ್ಟೋಬರ್‌ನಲ್ಲಿ ಸಿಂಗಾಪುರದಲ್ಲಿ ನಡೆದ ಐಸಿಸಿ ಮಂಡಳಿ ಸಭೆಯಲ್ಲಿ ತೆರಿಗೆ ವಿನಾಯ್ತಿಯನ್ನು ಬಿಸಿಸಿಐ ಸರಿದೂಗಿಸಬೇಕು ಎಂದು ನಿರ್ಧರಿಸಿಲಾಗಿತ್ತು. ಈ ಮಧ್ಯೆ, ಬೇಡಿಕೆ ಈಡೇರಿಸುವಲ್ಲಿ ಒಂದು ವೇಳೆ ವಿಫಲವಾದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಬಿಸಿಸಿಐಗೆ ಹಂಚಿಕೆಯಾಗಲಿರುವ ಆದಾಯದಲ್ಲಿ ಕಡಿತಗೊಳಿಸಲಾಗುವುದು ಎಂದು ಐಸಿಸಿ ಈಗಾಗಲೇ ಸುಳಿವು ನೀಡಿದೆ.

ವರದಿ ಪ್ರಕಾರ, ತೆರಿಗೆ ಮನ್ನಾ ಮಾಡುವ ಬಗ್ಗೆ ಭರವಸೆ ನೀಡಿರುವ ಕುರಿತು ಸಭೆಯ ಟಿಪ್ಪಣಿಯನ್ನು ಹಂಚಿಕೊಳ್ಳುವಂತೆ ಐಸಿಸಿಗೆ ಬಿಸಿಸಿಐ ಕೇಳಿದೆ. ಆದರೆ ಐಸಿಸಿ ಈ ಕುರಿತಂತೆ ಯಾವುದನ್ನು ಹಂಚಿಕೊಂಡಿಲ್ಲ. ವರದಿ ಪ್ರಕಾರ, ಅಂದಿನ ಅಧ್ಯಕ್ಷ ಎನ್‌. ಶ್ರೀನಿವಾಸನ್‌, ಕೂಡ ಒಂದು ವೇಳೆ ಸರಕಾರ ತೆರಿಗೆ ಮನ್ನಾ ಮಾಡದಿದ್ದರೆ ಬಿಸಿಸಿಐ ಪರಿಹಾರ ನೀಡಲಿದೆ ಎಂಬುದರ ಬಗ್ಗೆ ಯಾವುದೇ ಭರವಸೆ ನೀಡಿಲ್ಲ. ಆದಾಗ್ಯೂ ಐಸಿಸಿ ಈಗ ಪರಿಹಾರ ನೀಡುವಂತೆ ಒತ್ತಾಯಿಸಿದೆ. ಭಾರತ 2021ರ ಚಾಂಪಿಯನ್ಸ್‌ ಟ್ರೋಫಿ ಮತ್ತು 2023ರ ವಿಶ್ವಕಪ್‌ಗೆ ಆತಿಥ್ಯ ವಹಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌