ಹೊಸದಿಲ್ಲಿ: ಇತ್ತೀಚಿನ ಆಧುನಿಕ ಕ್ರಿಕೆಟ್ ಅನ್ನು ನಿವು ನೋಡುವುದಾದರೆ ಎಂಎಸ್ ಧೋನಿಗಿಂತ ಬೇರೆ ದೊಡ್ಡ ಆಟಗಾರ ನಿಮ್ಮ ಕಣ್ಣ ಮುಂದೆಗೆ ಬರಲು ಸಾಧ್ಯವೇ ಇಲ್ಲ. ಟೀಮ್ ಇಂಡಿಯಾ ಮಾಜಿ ನಾಯಕ ಭಾರತೀಯ ಕ್ರಿಕೆಟ್ಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅಲ್ಲದೆ ತಮ್ಮ ನಾಯಕತ್ವದಲ್ಲಿ 2009ರಲ್ಲಿ ಭಾರತ ತಂಡವನ್ನು ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಬಾರಿ ಅಗ್ರ ಸ್ಥಾನಕ್ಕೇರಿಸಿದ್ದರು. ಇತ್ತೀಚಿನ ಸಂದರ್ಶನದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ರಶೀದ್ ಲತೀಫ್ ಮಾತನಾಡಿ, ಮೊದಲ ಬಾರಿ ಎಂಎಸ್ ಧೋನಿಯನ್ನು ಫೋನ್ ಕರೆಯ ಮೂಲಕ ಮಾಜಿ ವೇಗಿ ತನ್ವೀರ್ ಪರಿಚಯ ಮಾಡಿಸಿದ್ದನ್ನು ಸ್ಮರಿಸಿಕೊಂಡರು.
2004ರಲ್ಲಿ ಕೀನ್ಯಾ ಪ್ರವಾಸಕ್ಕೆ ತೆರಳಿದ್ದ ತನ್ವೀರ್ ಅಹ್ಮದ್ ಅವರ ಬಳಿ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ. ಆ ವೇಳೆ ನಾನು ಇಂಗ್ಲೆಂಡ್ನಲ್ಲಿದ್ದೆ ಹಾಗೂ ಅವರ ಜತೆ ಫೋನ್ನಲ್ಲಿ ಮಾತನಾಡಿದೆ," ಎಂದು ಲತೀಫ್ ಅವರು ಯೂಟ್ಯೂಬ್ ಶೋ "ಕಾಟ್ ಬಿಹೈಂಡ್"ನ ಇತ್ತೀಚಿನ ಸಂಚಿಕೆಯಲ್ಲಿ ತಿಳಿಸಿದರು.
ಕ್ರಿಕೆಟ್ ಬೆಟ್ಟಿಂಗ್ ಕಾನೂನುಬದ್ಧಗೊಳಿಸುವಂತೆ ಸಂಸದ ಶಶಿ ತರೂರ್ ಆಗ್ರಹ.!
"ರಶೀದ್ ಭಾಯ್, ಸಚಿನ್ ತೆಂಡೂಲ್ಕರ್ ಅವರನ್ನು ಜನರು ಮರೆಯುಂತ ಆಟಗಾರ ಈಗ ಭಾರತ ತಂಡಕ್ಕೆ ಬಂದಿದ್ದಾರೆ ಎಂದು ತನ್ವೀರ್ ಹೇಳಿದ್ದರು. ಅದಕ್ಕೆ ನಾನು 'ಇದು ಸಾಧ್ಯವೇ ಇಲ್ಲ, ನಿಮಗೆ ಈ ವಿಷಯ ಹೇಗೆ ಗೊತ್ತಾಯಿತು' ಎಂದು ಹೇಳಿದೆ. ಆದರೆ, ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನ ಸಚಿನ್ ತೆಂಡೂಲ್ಕರ್ ಹಾದಿಯ ಸಮೀಪ ಬಂದಿತು," ಎಂದು ಲತೀಫ್ ಹೇಳಿದರು.
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಇದೀಗ ಸೆ.19 ರಿಂದ ಯುಎಇಯಲ್ಲಿ ಆರಂಭವಾಗಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪದಾರ್ಪಣೆಗೂ ಮುನ್ನ ಭಯಪಟ್ಟಿದ್ದ ಮಯಾಂಕ್ ಅಗರ್ವಾಲ್! : ಕಾರಣ?
2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಓಡಿಐ ಪಂದ್ಯದಲ್ಲಿ 23ನೇ ಪ್ರಾಯದಲ್ಲಿ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಅವರು ಪಾಕಿಸ್ತಾನದ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದಿದ್ದ ಓಡಿಐ ಪಂದ್ಯದಲ್ಲಿ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ್ದರು. 148 ರನ್ಗಳನ್ನು ಗಳಿಸುವ ಮೂಲಕ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು.
ನಂತರ ಅದೇ ವರ್ಷದ ಕೊನೆಯಲ್ಲಿ ಎಂಎಸ್ ಧೋನಿ ಶ್ರೀಲಂಕಾ ವಿರುದ್ಧ ಜೈಪುರದಲ್ಲಿ ಅಜೇಯ 183 ರನ್ ಸಿಡಿಸಿದ್ದರು ಹಾಗೂ ಇದು ತಮ್ಮ ವೃತ್ತಿ ಜೀವನದ ವೈಯಕ್ತಿಕ ಗರಿಷ್ಠ ಮೊತ್ತವಾಗಿ ಉಳಿಯಿತು. ಅಲ್ಲದೆ ಭಾರತ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಆಗಿ ದೊಡ್ಡ ಹೆಸರು ಮಾಡಿದರು. 2006ರಲ್ಲಿ ಪಾಕಿಸ್ತಾನದ ವಿರುದ್ಧ ಫೈಸಲಾಬಾದ್ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದರು ಹಾಗೂ ಓಡಿಐ ಸರಣಿಯಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4-1 ಅಂತರದಲ್ಲಿ ಭಾರತದ ಗೆಲುವಿಗೆ ನೆರವಾಗಿದ್ದರು.
2004ರಲ್ಲಿ ಕೀನ್ಯಾ ಪ್ರವಾಸಕ್ಕೆ ತೆರಳಿದ್ದ ತನ್ವೀರ್ ಅಹ್ಮದ್ ಅವರ ಬಳಿ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ. ಆ ವೇಳೆ ನಾನು ಇಂಗ್ಲೆಂಡ್ನಲ್ಲಿದ್ದೆ ಹಾಗೂ ಅವರ ಜತೆ ಫೋನ್ನಲ್ಲಿ ಮಾತನಾಡಿದೆ," ಎಂದು ಲತೀಫ್ ಅವರು ಯೂಟ್ಯೂಬ್ ಶೋ "ಕಾಟ್ ಬಿಹೈಂಡ್"ನ ಇತ್ತೀಚಿನ ಸಂಚಿಕೆಯಲ್ಲಿ ತಿಳಿಸಿದರು.
ಕ್ರಿಕೆಟ್ ಬೆಟ್ಟಿಂಗ್ ಕಾನೂನುಬದ್ಧಗೊಳಿಸುವಂತೆ ಸಂಸದ ಶಶಿ ತರೂರ್ ಆಗ್ರಹ.!
"ರಶೀದ್ ಭಾಯ್, ಸಚಿನ್ ತೆಂಡೂಲ್ಕರ್ ಅವರನ್ನು ಜನರು ಮರೆಯುಂತ ಆಟಗಾರ ಈಗ ಭಾರತ ತಂಡಕ್ಕೆ ಬಂದಿದ್ದಾರೆ ಎಂದು ತನ್ವೀರ್ ಹೇಳಿದ್ದರು. ಅದಕ್ಕೆ ನಾನು 'ಇದು ಸಾಧ್ಯವೇ ಇಲ್ಲ, ನಿಮಗೆ ಈ ವಿಷಯ ಹೇಗೆ ಗೊತ್ತಾಯಿತು' ಎಂದು ಹೇಳಿದೆ. ಆದರೆ, ಮಹೇಂದ್ರ ಸಿಂಗ್ ಧೋನಿ ಅವರ ಕ್ರಿಕೆಟ್ ವೃತ್ತಿ ಜೀವನ ಸಚಿನ್ ತೆಂಡೂಲ್ಕರ್ ಹಾದಿಯ ಸಮೀಪ ಬಂದಿತು," ಎಂದು ಲತೀಫ್ ಹೇಳಿದರು.
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಆಗಸ್ಟ್ 15 ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರು. ಇದೀಗ ಸೆ.19 ರಿಂದ ಯುಎಇಯಲ್ಲಿ ಆರಂಭವಾಗಲಿರುವ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪದಾರ್ಪಣೆಗೂ ಮುನ್ನ ಭಯಪಟ್ಟಿದ್ದ ಮಯಾಂಕ್ ಅಗರ್ವಾಲ್! : ಕಾರಣ?
2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಓಡಿಐ ಪಂದ್ಯದಲ್ಲಿ 23ನೇ ಪ್ರಾಯದಲ್ಲಿ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಅವರು ಪಾಕಿಸ್ತಾನದ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದಿದ್ದ ಓಡಿಐ ಪಂದ್ಯದಲ್ಲಿ ವೃತ್ತಿ ಜೀವನದ ಚೊಚ್ಚಲ ಶತಕ ಸಿಡಿಸಿದ್ದರು. 148 ರನ್ಗಳನ್ನು ಗಳಿಸುವ ಮೂಲಕ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದರು.
ನಂತರ ಅದೇ ವರ್ಷದ ಕೊನೆಯಲ್ಲಿ ಎಂಎಸ್ ಧೋನಿ ಶ್ರೀಲಂಕಾ ವಿರುದ್ಧ ಜೈಪುರದಲ್ಲಿ ಅಜೇಯ 183 ರನ್ ಸಿಡಿಸಿದ್ದರು ಹಾಗೂ ಇದು ತಮ್ಮ ವೃತ್ತಿ ಜೀವನದ ವೈಯಕ್ತಿಕ ಗರಿಷ್ಠ ಮೊತ್ತವಾಗಿ ಉಳಿಯಿತು. ಅಲ್ಲದೆ ಭಾರತ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಆಗಿ ದೊಡ್ಡ ಹೆಸರು ಮಾಡಿದರು. 2006ರಲ್ಲಿ ಪಾಕಿಸ್ತಾನದ ವಿರುದ್ಧ ಫೈಸಲಾಬಾದ್ನಲ್ಲಿ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದರು ಹಾಗೂ ಓಡಿಐ ಸರಣಿಯಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡುವ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4-1 ಅಂತರದಲ್ಲಿ ಭಾರತದ ಗೆಲುವಿಗೆ ನೆರವಾಗಿದ್ದರು.