ಕೋಲ್ಕತ್ತಾ: ಪ್ರವಾಸಿ ಶ್ರೀಲಂಕಾ ವಿರುದ್ಧ ಇಲ್ಲಿನ ಈಡೆನ್ ಗಾರ್ಡೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಕೇವಲ 172 ರನ್ಗಳಿಗೆ ಆಲೌಟಾಗಿತ್ತು.
ಟೀಮ್ ಇಂಡಿಯಾ ಪರ ಏಕಾಂಕಿ ಹೋರಾಟ ನಡೆಸಿದ್ದ ಚೇತೇಶ್ವರ ಪೂಜಾರ ಮಾತ್ರ ಸಮಯೋಚಿತ ಅರ್ಧಶತಕ (52) ಬಾರಿಸುವ ಮೂಲಕ ನೆರವಾಗಿದ್ದರು.
ಐದು ದಿನಗಳ ಕ್ರಿಕೆಟ್ನಲ್ಲಿ ಮಾತ್ರ ಸ್ಪೆಷಲಿಷ್ಟ್ ಎನಿಸಿಕೊಂಡಿರುವ ಪೂಜಾರ ಈ ಮೊದಲು ಭಾರತದ ಸೀಮಿತ ಓವರ್ಗಳ ವೇಳಾಪಟ್ಟಿಯ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೇ ಇಂಗ್ಲೆಂಡ್ಗೆ ಪ್ರಯಾಣ ಬೆಳಿಸಿ ಕೌಂಟಿ ಕ್ರಿಕೆಟ್ನಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾರ ಕೌಂಟಿ ಕ್ರಿಕೆಟ್ ಆಡಿರುವುದು ಖಂಡಿತವಾಗಿಯೂ ನನಗೆ ನೆರವಾಗಿದೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಕಠಿಣ ಸವಾಲು ಭರಿತ ವಿಕೆಟ್ಗಳಲ್ಲಿ ಆಡುವ ಮೂಲಕ ನಾನು ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ. ಅಂತೆಯೇ ನನ್ನ ಕ್ರಿಕೆಟ್ನಲ್ಲಿ ಸುಧಾರಣೆ ಹಾಗೂ ಅರ್ಥ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಅದೇ ಹೊತ್ತಿಗೆ ಲಂಕಾ ಪಂದ್ಯದ ಬಗ್ಗೆ ಮಾತನಾಡಿರುವ ಪೂಜಾರ, ಈಗಲೂ ಪಂದ್ಯ ಭಾರತದ ಕೈಯಲ್ಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತದ 172 ರನ್ಗಳಿಗೆ ಉತ್ತರವಾಗಿ ಮೂರನೇ ದಿನದಂತ್ಯಕ್ಕೆ ಲಂಕಾ ನಾಲ್ಕು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.
ಭಾರತದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿರುವ ಪೂಜಾರ, ಯಾವುದೇ ರೀತಿಯ ಪಿಚ್ನಲ್ಲಿ ಆಡಲು ನಾವು ರೆಡಿಯಾಗಿದ್ದೇವೆ. ವೈಯಕ್ತಿಕವಾಗಿಯೂ ನಾನು ಆಡಲು ರೆಡಿಯಾಗಿದ್ದೇನೆ ಎಂದಿದ್ದಾರೆ.
ಟೀಮ್ ಇಂಡಿಯಾ ಪರ ಏಕಾಂಕಿ ಹೋರಾಟ ನಡೆಸಿದ್ದ ಚೇತೇಶ್ವರ ಪೂಜಾರ ಮಾತ್ರ ಸಮಯೋಚಿತ ಅರ್ಧಶತಕ (52) ಬಾರಿಸುವ ಮೂಲಕ ನೆರವಾಗಿದ್ದರು.
ಐದು ದಿನಗಳ ಕ್ರಿಕೆಟ್ನಲ್ಲಿ ಮಾತ್ರ ಸ್ಪೆಷಲಿಷ್ಟ್ ಎನಿಸಿಕೊಂಡಿರುವ ಪೂಜಾರ ಈ ಮೊದಲು ಭಾರತದ ಸೀಮಿತ ಓವರ್ಗಳ ವೇಳಾಪಟ್ಟಿಯ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡದೇ ಇಂಗ್ಲೆಂಡ್ಗೆ ಪ್ರಯಾಣ ಬೆಳಿಸಿ ಕೌಂಟಿ ಕ್ರಿಕೆಟ್ನಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೂಜಾರ ಕೌಂಟಿ ಕ್ರಿಕೆಟ್ ಆಡಿರುವುದು ಖಂಡಿತವಾಗಿಯೂ ನನಗೆ ನೆರವಾಗಿದೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.
ಕಠಿಣ ಸವಾಲು ಭರಿತ ವಿಕೆಟ್ಗಳಲ್ಲಿ ಆಡುವ ಮೂಲಕ ನಾನು ಸಾಕಷ್ಟು ವಿಷಯಗಳನ್ನು ಕಲಿತುಕೊಂಡಿದ್ದೇನೆ. ಅಂತೆಯೇ ನನ್ನ ಕ್ರಿಕೆಟ್ನಲ್ಲಿ ಸುಧಾರಣೆ ಹಾಗೂ ಅರ್ಥ ಮಾಡಿಕೊಂಡಿದ್ದೇನೆ ಎಂದಿದ್ದಾರೆ.
ಅದೇ ಹೊತ್ತಿಗೆ ಲಂಕಾ ಪಂದ್ಯದ ಬಗ್ಗೆ ಮಾತನಾಡಿರುವ ಪೂಜಾರ, ಈಗಲೂ ಪಂದ್ಯ ಭಾರತದ ಕೈಯಲ್ಲಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ಭಾರತದ 172 ರನ್ಗಳಿಗೆ ಉತ್ತರವಾಗಿ ಮೂರನೇ ದಿನದಂತ್ಯಕ್ಕೆ ಲಂಕಾ ನಾಲ್ಕು ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತ್ತು.
ಭಾರತದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡಿರುವ ಪೂಜಾರ, ಯಾವುದೇ ರೀತಿಯ ಪಿಚ್ನಲ್ಲಿ ಆಡಲು ನಾವು ರೆಡಿಯಾಗಿದ್ದೇವೆ. ವೈಯಕ್ತಿಕವಾಗಿಯೂ ನಾನು ಆಡಲು ರೆಡಿಯಾಗಿದ್ದೇನೆ ಎಂದಿದ್ದಾರೆ.