ಹೊಸದಿಲ್ಲಿ: ಭಾರತದಲ್ಲಿ ಆಯೋಜನೆಗೊಂಡಿರುವ ಅಂಡರ್-17 ವಿಶ್ವಕಪ್ ದೊಡ್ಡ ಯಶಸ್ಸು ಕಂಡಿರುವುದಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಫಿಫಾ ಅಂಡರ್-17 ವಿಶ್ವಕಪ್ ಯಶಸ್ವಿ ಆಯೋಜನೆ ಕುರಿತು ಮಾತನಾಡುತ್ತಾ ಮೋದಿ ಈ ರೀತಿಯಾಗಿ ನುಡಿದರು.
ಅದೇ ರೀತಿ 10 ವರ್ಷಗಳ ಬಳಿಕ ಏಷ್ಯಾ ಕಪ್ನಲ್ಲಿ ಪ್ರಶಸ್ತಿ ಜಯಿಸಿರುವ ಭಾರತೀಯ ಹಾಕಿ ತಂಡದ ಸಾಧನೆ ಮತ್ತು ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆದ್ದ ಕಿಡಂಬಿ ಶ್ರೀಕಾಂತ್ ಪರಿಶ್ರಮವನ್ನು ಮೋದಿ ಕೊಂಡಾಡಿದರು.
ಫಿಫಾ ಅಂಡರ್ 17 ವಿಶ್ವಕಪ್ನಲ್ಲಿ ಭಾರತದ ಯುವ ತಂಡವು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತದ ಪುಟ್ಬಾಲ್ ಭವಿಷ್ಯವು ಉಜ್ವಲವಾಗಿದೆ ಎಂದು ಮೋದಿ ಸೇರಿಸಿದರು.
10 ವರ್ಷಗಳ ಬಳಿಕ ಭಾರತ ಏಷ್ಯಾ ಕಪ್ ಗೆದ್ದಿದೆ. ಈ ಸಂದರ್ಭದಲ್ಲಿ ಸಂಪೂರ್ಣ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಹಾಗೆಯೇ ಡೆನ್ಮಾರ್ಕ್ ಓಪನ್ ಗೆದ್ದಿರುವ ಕಿಡಂಬಿ ಹಾಗೂ ಸಹಾಯಕ ಸಿಬ್ಬಂದಿಗಳು ನನ್ನ ಅಭಿನಂದನೆಗಳು ಎಂದರು.
'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಫಿಫಾ ಅಂಡರ್-17 ವಿಶ್ವಕಪ್ ಯಶಸ್ವಿ ಆಯೋಜನೆ ಕುರಿತು ಮಾತನಾಡುತ್ತಾ ಮೋದಿ ಈ ರೀತಿಯಾಗಿ ನುಡಿದರು.
ಅದೇ ರೀತಿ 10 ವರ್ಷಗಳ ಬಳಿಕ ಏಷ್ಯಾ ಕಪ್ನಲ್ಲಿ ಪ್ರಶಸ್ತಿ ಜಯಿಸಿರುವ ಭಾರತೀಯ ಹಾಕಿ ತಂಡದ ಸಾಧನೆ ಮತ್ತು ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆದ್ದ ಕಿಡಂಬಿ ಶ್ರೀಕಾಂತ್ ಪರಿಶ್ರಮವನ್ನು ಮೋದಿ ಕೊಂಡಾಡಿದರು.
ಫಿಫಾ ಅಂಡರ್ 17 ವಿಶ್ವಕಪ್ನಲ್ಲಿ ಭಾರತದ ಯುವ ತಂಡವು ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಭಾರತದ ಪುಟ್ಬಾಲ್ ಭವಿಷ್ಯವು ಉಜ್ವಲವಾಗಿದೆ ಎಂದು ಮೋದಿ ಸೇರಿಸಿದರು.
10 ವರ್ಷಗಳ ಬಳಿಕ ಭಾರತ ಏಷ್ಯಾ ಕಪ್ ಗೆದ್ದಿದೆ. ಈ ಸಂದರ್ಭದಲ್ಲಿ ಸಂಪೂರ್ಣ ತಂಡವನ್ನು ಅಭಿನಂದಿಸಲು ಬಯಸುತ್ತೇನೆ. ಹಾಗೆಯೇ ಡೆನ್ಮಾರ್ಕ್ ಓಪನ್ ಗೆದ್ದಿರುವ ಕಿಡಂಬಿ ಹಾಗೂ ಸಹಾಯಕ ಸಿಬ್ಬಂದಿಗಳು ನನ್ನ ಅಭಿನಂದನೆಗಳು ಎಂದರು.