ಆ್ಯಪ್ನಗರ

ಪೃಥ್ವಿ ಶಾ ವರ್ಷನ್ 2.0; ಮುಂಬಯಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಯುವ ಬ್ಯಾಟ್ಸ್‌ಮನ್

ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದು ಎಂಟು ತಿಂಗಳುಗಳ ನಿಷೇಧ ಶಿಕ್ಷೆಯನ್ನು ಎದುರಿಸಿರುವ 20ರ ಹರೆಯದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಮುಂಬಯಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಇದೀಗ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾಗವಹಿಸಲಿದ್ದಾರೆ.

Vijaya Karnataka Web 15 Nov 2019, 11:19 am
ಮುಂಬಯಿ: ಉದ್ದೀಪನಾ ಮದ್ದು ಸೇವನೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ (ಬಿಸಿಸಿಐ) ಎಂಟು ತಿಂಗಳುಗಳ ನಿಷೇಧ ಶಿಕ್ಷೆಯನ್ನು ಎದುರಿಸಿರುವ ಉದಯೋನ್ಮುಖ ಬ್ಯಾಟ್ಸ್‌ಮನ್ ಪೃಥ್ವಿ ಶಾ, ಕ್ರಿಕೆಟ್‌ಗೆ ಮರಳುವ ತವಕದಲ್ಲಿದ್ದಾರೆ.
Vijaya Karnataka Web ಪೃಥ್ವಿ ಶಾ


ಇದರ ಮೊದಲ ಹೆಜ್ಜೆಯೆಂಬಂತೆ ದೇಶೀಯ ಕ್ರಿಕೆಟ್‌ನಲ್ಲಿ ಆಡಲು ಮುಕ್ತವಾಗಿದ್ದಾರೆ. ಅಲ್ಲದೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬಯಿ ತಂಡದಲ್ಲಿ ಹೆಸರಿಸಿದ್ದಾರೆ.

ಭಾರತ vs ಬಾಂಗ್ಲಾದೇಶ Live ಅಪ್‌ಡೇಟ್ಸ್

ಎಂಟು ತಿಂಗಳುಗಳ ನಿಷೇಧ ಎದುರಿಸಿರುವ ಪೃಥ್ವಿ ಶಾ ನವೆಂಬರ್ 17ರಿಂದ ಆಡಲು ಮುಕ್ತವಾಗಿದ್ದಾರೆ. ಇದರಂತೆ ಮುಂಬಯಿ 15 ಸದಸ್ಯರ ತಂಡದಲ್ಲಿ ಅವಕಾಶ ನೀಡಲಾಗಿದೆ.

ಮುಂಬಯಿ ಮೂಲದ ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ನವೆಂಬರ್ 9ರಂದು 20ನೇ ವರ್ಷಕ್ಕೆ ಕಾಲಿರಿಸಿದ್ದರು. ಕೆಮ್ಮಿನ ಔಷಧಿ ಸೇವನೆಯ ವೇಳೆ ತಮ್ಮ ಅರಿವಿಗೆ ಬಾರದೆ ನಿಷೇಧಿತ ರಾಸಾಯನಿಕ ಅಂಶವು ಪೃಥ್ವಿ ದೇಹವನ್ನು ಸೇರಿತ್ತು. ಇದರಿಂದ ಡೋಪಿಂಗ್ ನಿಯಮಗಳನ್ನು ಉಲ್ಲಂಘಿಸಿದ ಪರಿಣಾಮ ಬಿಸಿಸಿಐ ನಿಷೇಧವನ್ನು ಹೇರಿತ್ತು.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ ಕನ್ನಡಿಗರ ದರ್ಬಾರ್; ಮಗದೋರ್ವ ಸ್ಟಾರ್ ಆಲ್‌ರೌಂಡರ್ ಸೇರ್ಪಡೆ

2019 ಮಾರ್ಚ್ 16ರಿಂದ ನವೆಂಬರ್ 15ರ ವರೆಗೆ ಪೃಥ್ವಿ ನಿಷೇಧ ಶಿಕ್ಷೆಯನ್ನು ಎದುರಿಸಿದ್ದಾರೆ. ಇದೀಗ ಮುಂಬಯಿ ಕ್ರಿಕೆಟ್ ಸಂಸ್ಥೆಯು ಯುವ ಆಟಗಾರನಿಗೆ ಅವಕಾಶ ನೀಡುವ ಮೂಲಕ ಗಮನ ಸೆಳೆದಿದೆ.

ನವೆಂಬರ್ 17ರಂದು ವಾಂಖೆಡೆ ಮೈದಾನದಲ್ಲಿ ಅಸ್ಸಾಂ ವಿರುದ್ಧ ನಡೆಯಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಪೃಥ್ವಿ ಆಡುವುದು ಖಚಿತವೆನಿಸಿದೆ. ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿರುವ ಮುಂಬಯಿ ಆಡಿರುವ ಎಲ್ಲ ಐದು ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಸೂಪರ್ ಲೀಗ್ ಹಂತವನ್ನು ತಲುಪುವುದು ಬಹುತೇಕ ಖಚಿತವೆನಿಸಿದೆ.

ಬಾಂಗ್ಲಾ ವಿರುದ್ಧ ಡಕ್ ಔಟ್ ಅಪಖ್ಯಾತಿಗೊಳಗಾದ ಕಿಂಗ್ ಕೊಹ್ಲಿ

2018ರಲ್ಲಿ ಅಂಡರ್ 19 ವಿಶ್ವಕಪ್ ವಿಜೇತ ಭಾರತ ಕಿರಿಯ ತಂಡದ ನಾಯಕರಾಗಿದ್ದ ಪೃಥ್ವಿ ಶಾ, ತದಾ ಬಳಿಕ ವೆಸ್ಟ್‌ಇಂಡೀಸ್ ವಿರುದ್ಧದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಶತಕ ಸಾಧನೆ ಮಾಡಿದ್ದರು.

ಅಲ್ಲದೆ ತಾವಾಡಿದ ಎರಡು ಪಂದ್ಯಗಳಲ್ಲೇ ಶತಕ ಹಾಗೂ ಅರ್ಧಶತಕ ಸೇರಿದಂತೆ ಒಟ್ಟು 237 ರನ್ ಪೇರಿಸಿದ್ದರು. ಆದರೆ ಗಾಯದಿಂದಾಗಿ ಆಸ್ಟ್ರೇಲಿಯಾ ಸರಣಿ ಮಿಸ್ ಮಾಡಿಕೊಂಡಿದ್ದರು. ಐಪಿಎಲ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಪರ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ.

ಇದೀಗ ಟೀಮ್ ಇಂಡಿಯಾದಲ್ಲೂ ಪೃಥ್ವಿ ಶಾಗೆ ಅವಕಾಶ ನೀಡಲಾಗುವುದೇ ಎಂಬುದನ್ನು ಕಾದು ನೋಡಬೇಕಿದೆ. ಪೃಥ್ವಿ ಅಲಭ್ಯತೆಯಲ್ಲಿ ಕರ್ನಾಟಕ ಮಯಾಂಕ್ ಅಗರ್ವಾಲ್ ತಮಗೆ ಲಭಿಸಿದ ಅವಕಾಶವನ್ನು ಬಾಚಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌